ದಾವಣಗೆರೆ: ಸರಣಿ ಮನೆ ಕಳ್ಳತನ (Serial home theft) ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದು, ಆರೋಪಿಗಳಿಂದ ಮನೆ ಕಳ್ಳತನ ಮಾಡಿದ 5.5 ಲಕ್ಷ ಮೌಲ್ಯದ ಸ್ವತ್ತುನ್ನು (Property) ವಶಪಡಿಸಿಕೊಳ್ಳಲಾಗಿದೆ.
ಸಂತೇಬೆನ್ನೂರು ವೃತ್ತ ವ್ಯಾಪ್ತಿಯ ಬಸವಾಪಟ್ಟಣ ಠಾಣಾ ಸರಹದ್ದಿನ ದೊಡ್ಡಘಟ್ಟ ಗ್ರಾಮದಲ್ಲಿ ಮತ್ತು ಬಸವಾಪಟ್ಟಣ ಗ್ರಾಮದಲ್ಲಿ ಸರಣಿ ಮನೆಕಳ್ಳತನಗಳು ಜರುಗಿದ್ದು ಈ ಬಗ್ಗೆ ಒಟ್ಟು ಮೂರು ಪ್ರಕರಣಗಳು ದಾಖಲಾಗಿದ್ದವು. ಈ ಸರಣಿ ಮನೆ ಕಳ್ಳತನ ಪ್ರಕರಣಗಳಿಂದ ಬಸವಾಪಟ್ಟಣ, ಸಂತೇಬೆನ್ನೂರು ಕಡೆಗಳಲ್ಲಿ ವಾಸಿಸುವ ಜನರು ಭಯಬೀತರಾಗಿದ್ದು, ಆರೋಪಿಗಳ ಪತ್ತೆಕಾರ್ಯ ಪೊಲೀಸರಿಗೆ ಸವಾಲಾಗಿತ್ತು.
ದಾವಣಗೆರೆ: ಕರ್ತವ್ಯ ಲೋಪ ಆರೋಪ; ಮೂವರು ಪೊಲೀಸರ ಅಮಾನತು ಮಾಡಿ ಎಸ್ಪಿ ಆದೇಶ
ಸರಣಿ ಮನೆ ಕಳ್ಳತನ ಪ್ರಕರಣಗಳು ನಡೆದ ಕೃತ್ಯದ ಸ್ಥಳಗಳಿಗೆ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಹಾಗೂ ಐಪಿಎಸ್ ಸ್ಯಾಮ್ ವರ್ಗಿಸ್ ಮತ್ತು ಪೊಲೀಸ್ ಅಧಿಕಾರಿಗಳ ತಂಡದೊಂದಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖಾಧಿಕಾರಿಗಳಿಗೆ ಸರಣಿ ಮನೆ ಕಳ್ಳತನದ ಆರೋಪಿತರ ಪತ್ತೆಗೆ ಸೂಕ್ತ ಸೂಚನೆಗಳನ್ನು ನೀಡಿದ್ದರು. ಸಿಪಿಐ ಸಂತೇಬೆನ್ನೂರು ವೃತ್ತ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಪಿಎಸ್.ಐ ಬಸವಾಪಟ್ಟಣ ಮತ್ತು ಪಿಎಸ್.ಐ ಸಂತೇಬೆನ್ನೂರು ಸಿಬ್ಬಂದಿಗಳನ್ಬೊಳಗೊಂಡ ಎರಡು ತಂಡಗಳನ್ನು ರಚನೆ ಮಾಡಲಾಗಿತ್ತು.
ಇ –ಆಸ್ತಿ ಅಭಿಯಾನ; ಭೂಪರಿವರ್ತನೆಯಾಗದೆ ನಿವೇಶನ, ಕಟ್ಟಡ ನಿರ್ಮಿಸಿಕೊಂಡಿದ್ರೆ ಫೆ.25 ರೊಳಗೆ ತಿದ್ದುಪಡಿಗೆ ಅವಕಾಶ
ಈ ತಂಡವು ವಿವಿಧ ಕಡೆ ಆರೋಪಿಗಳ ಪತ್ತೆ ಕಾರ್ಯ ಕೈಗೊಂಡಿದ್ದು. ಸರಣಿ ಮನೆ ಕಳ್ಳತನ ಪ್ರರಕರಣಗಳ ಆರೋಪಿಗಳಾದ 01) ಮನೋಜ (22) ವಾಸ ಕಾಡಜ್ಜಿ ಗ್ರಾಮ, ದಾವಣಗೆರೆ ಜಿಲ್ಲೆ ಮತ್ತು ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ, ಆರೋಪಿತರುಗಳು ಬಸವಾಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಣಿ ಮನೆ ಕಳ್ಳತನ ಪ್ರಕರಣಗಳಲ್ಲಿ ಬಾಗಿಯಾಗಿರುವುದು ತಿಳಿದು ಬಂದಿರುತ್ತದೆ.
ದಾವಣಗೆರೆ ಕಡೆ ಬರುತ್ತಿದ್ದ ಸ್ಫೋಟಕ ತುಂಬಿದ ವಾಹನ ಪಲ್ಟಿ; ತಪ್ಪಿದ ದೊಡ್ಡ ಅನಾಹುತ
ಈ ಆರೋಪಿಗಳಿಂದ 500 ಗ್ರಾಂ ಬೆಳ್ಳಿಯ ಆಭರಣಗಳು, ಸುಮಾರು 45 ಗ್ರಾಂ ಬಂಗಾರದ ಆಭರಣ ಮತ್ತು ಕೃತ್ಯಕ್ಕೆ ಬಳಸಿದ 02 ಮೋಟಾರು ಬೈಕ್ ಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ. ಅವುಗಳ ಪೈಕಿ 01 ಮೋಟಾರು ಬೈಕ್ ಕಳ್ಳತನ ಪ್ರಕರಣ ಬಸವಾಪಟ್ಟಣ ಪೊಲೀಸ್ ಠಾಣೆ ಪ್ರಕರಣಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಇನ್ನೊಂದು ಬೈಕ್ ಅನ್ನು ಕಡೂರು ನಗರದಲ್ಲಿ ಕಳ್ಳತನ ಮಾಡಿದ್ದಾಗಿ ತಿಳಿಸಿರುತ್ತಾರೆ.ಮೇಲ್ಕಂಡ ಪ್ರಕರಣಗಳಲ್ಲಿ ಭಾಗಿಯಾದ ಇನ್ನಿಬ್ಬರು ಆರೋಪಿತರು ತಲೆಮರೆಸಿಕೊಂಡಿದ್ದು ಅವರ ಪತ್ತೆಕಾರ್ಯ ಮುಂದುವರೆದಿರುತ್ತದೆ.
ಆರೋಪಿತರ ಹಿನ್ನೆಲೆ: ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನು ಈ ಹಿಂದೆ ಜನವರಿ ತಿಂಗಳಲ್ಲಿ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ 05 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿರುತ್ತದೆ. ಆರೋಪಿತ ಮನೋಜ್ ಬಿಳಿಚೋಡು ಪೊಲೀಸ್ ಠಾಣೆಯ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿರುತ್ತದೆ.
ಒಟ್ಟು 05 ಕಳ್ಳತನ ಪ್ರಕರಣಗಳಲ್ಲಿನ ಸ್ವತ್ತು ಮತ್ತು ಆರೋಪಿತರನ್ನು ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿಗಳಾದ ಸಿಪಿಐ ಸಂತೇಬೆನ್ನೂರು ವೃತ್ತ ಲಿಂಗನಗೌಡ ನೆಗಳೂರು ನೇತೃತ್ವದ ಪಿಎಸ್.ಐ ಬಸವಾಪಟ್ಟಣದ ಭಾರತಿ, ಹಾಗೂ ವೀಣಾ, ಪಿಎಸ್.ಐ ಸಂತೇಬೆನ್ನೂರು ಜಗದೀಶ್ ಸಿಬ್ಬಂದಿಗಳಾದ ದೊಡ್ಡಬಸಪ್ಪ , ಸತೀಶ, ರುದ್ರೇಶ ಎಂ. ವೀರಭದ್ರಪ್ಪ, ಹನುಮಂತಪ್ಪ ರಾಘವೇಂದ್ರ, ಪರಶುರಾಮ, ಅರುಣ, ಮೋಹನ, ತಿಮ್ಮರಾಜು, ಇಬ್ರಾಹಿಂ, ಅಣ್ಣೇಶ, ವೆಂಕಟೇಶ, ರವಿ ಕುಮಾರ, ಜಿಲ್ಲಾ ಪೊಲೀಸ್ ಕಚೇರಿಯ ಸಿಬ್ಬಂದಿಗಳಾದ ಶಿವಕುಮಾರ ಬಿ ಕೆ & ರಮೇಶ್ ಎಂ ಪಿ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.