ದಾವಣಗೆರೆ: ಕಡಿಮೆ ಬೆಲೆಗೆ ನೂರು ರೂ. ನೋಟು ಕೊಡುವುದಾಗಿ ವಂಚನೆ; ಓರ್ವ ಆರೋಪಿತನ ಬಂಧನ 2.20 ಲಕ್ಷ ವಶ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಕಡಿಮೆ ಬೆಲೆಗೆ ನೂರು ರೂ. ನೋಟು ಕೊಡುವುದಾಗಿ ವಂಚನೆ. ಓರ್ವ ಆರೋಪಿಯನ್ನು ಜಿಲ್ಲಾ ಪೊಲೀಸರು ಬಂಧನ ಮಾಡಿದ್ದು, ಆರೋಪಿಯಿಂದ 2.20 ಲಕ್ಷ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಕಾರು ವಶಕ್ಕೆ ಪಡೆಯಲಾಗಿದೆ.

ರಾಯಚೂರು ನಿವಾಸಿಯಾದ ಧನಂಜಯ ‌ಜ.28ರಂದು ವಿದ್ಯಾ ನಗರ ಠಾಣೆಗೆ ಹಾಜರಾಗಿ ದೂರು ನೀಡಿದ್ದು,15 ದಿನಗಳ ಹಿಂದೆ ಯಾರೋ ಒಬ್ಬ ನನಗೆ ಪೋನ್ ಮಾಡಿ ನನ್ನ ಹೆಸರು ರಾಜೇಶ ದಾವಣಗೆರೆ ಅಂತ ಪರಿಚಯ ಮಾಡಿಕೊಂಡು ನಮ್ಮ ಬಳಿ ನೂರು ಮುಖ ಬೆಲೆಯ ತುಂಬಾ ನೋಟುಗಳು ಇದ್ದು, ಅವುಗಳನ್ನು ನಾವು ಕಡಿಮೆ ರೇಟಿಗೆ ಅಂದರೆ ನೀವು ನಮಗೆ ಒಂದು ಸಾವಿರ ರೂಪಾಯಿಯ ಬೇರೆ ನೋಟುಗಳನ್ನು ನೀಡಿದರೆ ನಾವು ನಿಮಗೆ ಎರಡು ಸಾವಿರ ರೂಪಾಯಿಗಳನ್ನು ನೀಡುತ್ತೇವೆ ಅಂತ ನಂಬಿಸಿದ್ದರು.

ದಿ:28.01.2025 ರಂದು ದಾವಣಗೆರೆ ಯುನಿವರ್ಸಿಟಿ ಬಳಿ ಕರೆಯಿಸಿಕೊಂಡು ರಾಜೇಶ ಹಾಗು ಆತನ ಜೊತೆ ಇದ್ದ ಇನ್ನು ಇಬ್ಬರು ಪರ‍್ಯಾದಿ ಬಳಿಯಿದ್ದ ಒಟ್ಟು ನಾಲ್ಕು ಲಕ್ಷ ರೂಪಾಯಿಗಳಿಗೆ 8 ಲಕ್ಷ ರೂಪಾಯಿಯ 100 ಮುಖ ಬೆಲೆಯ ನೋಟುಗಳನ್ನು ನೀಡುವುದಾಗಿ ಹೇಳಿದ್ದನು. ಅದೇ ದಿನ ಮಧ್ಯಾಹ್ನ ಬಾಡಾ ಕ್ರಾಸ್ ಬಳಿ ದೂರುದಾರನಿಂದ ಒಟ್ಟು ನಾಲ್ಕು ಲಕ್ಷ ರೂ ಹಣವನ್ನು ಪಡೆದು 8 ಲಕ್ಷ ರೂಪಾಯಿ ನೂರು ಮುಖ ಬೆಲೆಯ ನೋಟುಗಳನ್ನು ನೀಡದೇ ಮೋಸ ಮಾಡಿದ್ದಾನೆ.

ಹಣ ಪಡೆದು ಕೆಎ51-ಎಮ್ ಎಕ್ಸ್-0598 ನೇ ನಂಬರಿನ ಕಾರಿನಲ್ಲಿ ತೋಳಹುಣಸೆ ಕಡೆ ಹೋಗಿದ್ದು, ಪತ್ತೆ ಮಾಡಿ ಹಣವನ್ನು ವಾಪಸ್ ಕೊಡಿಸಿ ಅಂತವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಆರೋಪಿತರನ್ನು ಪತ್ತೆ ಮಾಡಲು ಎಎಸ್ಪಿ ವಿಜಯಕುಮಾರ.ಎಂ. ಸಂತೋಷ್ ಮತ್ತು ಜಿ. ಮಂಜುನಾಥ ಹಾಗೂ ಡಿವೈಎಸ್ಪಿ ಶರಣ ಬಸವೇಶ್ವರ ಬಿ ಮತ್ತು ವಿದ್ಯಾನಗರ ಠಾಣೆ ನಿರೀಕ್ಷಕಿ ಶಿಲ್ಪಾ ವೈ.ಎಸ್ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪಿ.ಎಸ್.ಐ ವಿಶ್ವನಾಥ ಜಿ.ಎನ್, ಶ್ರೀ ವಿಜಯ ಎಮ್, ಪಿಎಸ್‌ಐ, ನಾಗರಾಜ ಪಿ ಎಸ್ ಐ ಹಾಗು ಸಿಬ್ಬಂದಿಗಳನ್ನೊಳಗೊಂಡ ತಂಡವು, ಆರೋಪಿ ಕೆ ಟಿ ಮಂಜಪ್ಪ ವಾಸ ಬಿ ಕೋಡಿಹಳ್ಳಿ ಗ್ರಾಮ ಕಡೂರು ತಾಲ್ಲೂಕು ಈತನನ್ನು ಬಂಧಿಸಲಾಗಿದೆ.‌ ಆರೋಪಿಯಿಂದ ಒಟ್ಟು ಎರಡು ಲಕ್ಷ ಇಪ್ಪತ್ತು ಸಾವಿರ ರೂ ಹಣವನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಒಂದು ಹುಂಡೈ ಕ್ರೇಟಾ ಕಾರನ್ನು ವಶ ಪಡಿಸಿಕೊಳ್ಳಲಾಗಿದೆ. ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

ಈ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿತರು ಪತ್ತೆಯಾಗಲು ಬಾಕಿ ಇದೆ. ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಮೇಲ್ಕಂಡ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳಾದ ಶಂಕರ್ ಜಾದವ್, ಆನಂದ ಎಮ್, ಬೋಜಪ್ಪ, ಚಂದ್ರಪ್ಪ, ಬಸವರಾಜ್, ನವೀನ್ ಮಲ್ಲನಗೌಡ್ರು, ರಾಮಚಂದ್ರಪ್ಪ ಹಾಗು ಸ್ಮಾರ್ಟ ಸಿಟಿ ಕಚೇರಿಯ ಸಿಬ್ಬಂದಿಗಳಾದ ಮಾರುತಿ, ಸೋಮು ಹಾಗು ಜಿಲ್ಲಾ ಪೊಲೀಸ್ ಕಛೇರಿ ಸಿಬ್ಬಂದಿಗಳಾದ ರಾಘವೇಂದ್ರ ಹಾಗು ರಾಮಚಂದ್ರ ಜಾಧವರವರನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *