ದಾವಣಗೆರೆ: ಅಡಿಕೆ ವ್ಯಾಪಾರಿ ಬೆದರಿಸಿ 17.24 ಲಕ್ಷ ದರೋಡೆ; 7 ಆರೋಪಿಗಳ ಬಂಧನ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಅಡಿಕೆ ವ್ಯಾಪಾರಿಯೊಬ್ಬರನ್ನು ಬೆದರಿಸಿ 17 .24 ಲಕ್ಷ ಹಣ ದರೋಡೆ ಮಾಡಿದ್ದ ದರೋಡೆಕೋರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಏಳು ಮಂದಿ ಬಂಧಿತರಿಂದ 7,37,920 ರೂ. ನಗದು ಹಣವನ್ನು ಹಾಗೂ ಈ ಕೃತ್ಯಕ್ಕೆ ಬಳಸಿದ 04 ವಾಹನಗಳು ಹಾಗೂ 09 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚನ್ನಗಿರಿಯ ಮಹ್ಮದ್ ಇನಾಯತ್ (21), ಉಮ್ಮರ್ ಫಾರೂಕ್ (20) ಷಬುದ್ದೀನ್ ಖಾಜಿ ಅಲಿಯಾಸ್ ಶಾಹಿದ್ ಖಾಜಿ (24) ಹಾಗೂ ಮೈಸೂರಿನ ಸಲ್ಮಾನ್ ಅಹಮದ್ ಖಾನ್ (25), ಖುರಂ ಖಾನ್ (25) ತುಮಕೂರು ಜಿಲ್ಲೆ, ಸೈಯದ್ ಸೈಫುಲ್ಲಾ ಅಲಿಯಾಸ್ ಸೈಪು (24) ಮೈಸೂರು, ಹಾಗೂ ಖಾಷಿಪ್ ಅಹಮದ್
(25) ಬಂಧಿತ ಆರೋಪಿಗಳು.

ಅಡಿಕೆ ವ್ಯಾಪಾರದ ಮಧ್ಯವರ್ತಿ ಚನ್ನಗಿರಿ ಟೌನ್ ನಿವಾಸಿ ಮಹ್ಮದ್ ಇನಾಯುತುಲ್ಲಾ ಎಂಬಾತ ಜೋಳದಾಳ ಮತ್ತು ಕಲ್ಲಾಪುರ ಗ್ರಾಮಗಳಲ್ಲಿ 35 ಚೀಲ ಅಡಿಕೆ ಇದೆ ವ್ಯಾಪಾರ ಮಾಡಿಸಿಕೊಡುವುದಾಗಿ ಬುಳಸಾಗರದ ಅಶೋಕಗೆ ಹೇಳಿದ್ದಾರೆ. ಈ ಮಾತನ್ನು ನಂಬಿದ ಅಶೋಕ 17.24 ಲಕ್ಷ ರೂಗಳನ್ನು ತೆಗೆದುಕೊಂಡು ತಮ್ಮ ಬೊಲೆರೋ ಪಿಕ್‌ ಅಪ್ ಗೂಡ್ಸ್ ವಾಹನ
ದಲ್ಲಿ ತನ್ನ ಹಮಾಲರೊಂದಿಗೆ ಚನ್ನಗಿರಿಯ ಅಜ್ಜಿಹಳ್ಳಿ ಸರ್ಕಲ್‌ಗೆ ಬಂದು ಅಲ್ಲಿಂದ ಮಹ್ಮದ್ ಇನಾಯತ್ ವುಲ್ಲಾ ಜೊತೆಗೊಡಿ ಜೋಳದಾಳ್ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

ಭದ್ರಾವತಿ ಕಡೆಗೆ ಹೋಗುವ ಜೋಳದಾಳ ಅರಣ್ಯ ಪ್ರದೇಶದ ರಸ್ತೆಯಲ್ಲಿ ಮಹಮದ್‌ ಇನಾಯತ್ ಮೂತ್ರ ವಿಸರ್ಜನೆ ಮಾಡಬೇಕು ಗಾಡಿಯನ್ನು ನಿಲ್ಲಿಸು ಎಂದು ಹೇಳಿದಾಗ
ಅಶೋಕ ಅವರು ವಾಹನವನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸುತ್ತಿದ್ದಂತೆ, ಹಿಂದಿನಿಂದ ಇನ್ನೋವ ಕಾರಿನಲ್ಲಿ ಬಂದ 7 ರಿಂದ 8 ಜನ ಅಪರಿಚಿತರು ಕೈಗಳಲ್ಲಿ ಚಾಕು ಹಿಡಿದುಕೊಂಡು ಅಶೋಕ
ಮತ್ತು ಅವರ ಕಡೆಯವರನ್ನು ಹೆದರಿಸಿ ಅವರ ಬಳಿಯಲ್ಲಿದ್ದ 17,24,000 ನಗದು, ಮೊಬೈಲ್ ಮತ್ತು ಗೂಡ್ಸ್ ವಾಹನದ ಕೀಯನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು.

ಈ ಕುರಿತು ಅಶೋಕ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಎಸ್ಪಿ ಉಮಾಪ್ರಶಾಂತ್ ಪರಿಶೀಲನೆ ನಡೆಸಿ ಚನ್ನಗಿರಿ ಉಪ-ವಿಭಾಗ ಡಿವೈಎಸ್ಪಿ ಸ್ಯಾಮ್ ವರ್ಗೀಸ್ ನೇತೃತ್ವದಲ್ಲಿ ಚನ್ನಗಿರಿ ಠಾಣೆ ಪೊಲೀಸ್ ನಿರೀಕ್ಷಕ ಬಾಲಚಂದ್ರನಾಯ್ಕ, ಪಿ.ಎಸ್.ಐಗಳಾದ ಸುರೇಶ್‌, ಜಗದೀಶ್‌, ಸಂಜೀವ್‌ ಕುಮಾರ್, ಡಿಸಿಆರ್‌ಬಿ ಸಿಬ್ಬಂದಿಗಳಾದ ಮಜೀದ್ ಕೆ ಸಿ, ರಾಘವೇಂದ್ರ, ರಮೇಶ್ ನಾಯ್ಕ, ಆಂಜನೇಯ, ಬಾಲಾಜಿ ಮತ್ತು ಚನ್ನಗಿರಿ ಠಾಣೆ ಸಿಬ್ಬಂದಿಗಳಾದ ಶಶಿಧರ್, ರಮೇಶ್, ರವಿ, ಚನ್ನಕೇಶವ, ಶ್ರೀನಿವಾಸ್, ಹರೀಶ್ ಕುಮಾರ್ ಮತ್ತು ರೇವಣಸಿದ್ದಪ್ಪ, ಸಂತೇಬೆನ್ನೂರು ಠಾಣೆ ಇವರುಗಳ ನೇತೃತ್ವದ ತಂಡ ಆರೋಪಿಗಳ ಆರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಅಶೋಕ ಜೊತೆಯಲ್ಲಿದ್ದ ವ ಮಧ್ಯವರ್ತಿ ಮಹ್ಮದ್ ಇನಾಯತ್ ವುಲ್ಲಾನನ್ನು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಚನ್ನಗಿರಿಯ ಈ ತಂಡ ಮೈಸೂರಿನ ಮತ್ತೊಂದು ತಂಡದ ಜೊತೆ
ಜೋಳದಾಳ್ ಅರಣ್ಯ ಪ್ರದೇಶದಲ್ಲಿ ದರೋಡೆ ಮಾಡುವುದರ ಬಗ್ಗೆ ಮೊದಲೇ ಸಂಚು ರೂಪಿಸಿ ಕೃತ್ಯ ಎಸಗಿರುವುದಾಗಿ ಹೆಚ್ಚಿನ
ವಿಚಾರಣೆಯಿಂದ ತಿಳಿದು ಬಂದಿದೆ. ಇದೀಗ 7 ಮಂದಿ ಬಂಧಿತರಿಂದ 7,37,920/- ರೂ ನಗದು ಹಣವನ್ನು ಹಾಗೂ ಈ ಕೃತ್ಯಕ್ಕೆ ಬಳಸಿದ 04 ವಾಹನಗಳು ಹಾಗೂ 09 ಮೊಬೈಲ್‌ಗಳನ್ನು
ವಶಪಡಿಸಿಕೊಳ್ಳಲಾಗಿರುತ್ತದೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *