ದಾವಣಗೆರೆ: ಖಾಸಗಿ ಬಸ್ ನಲ್ಲಿ ಪ್ರಯಾಣಿಸುವಾಗ ಬ್ಯಾಗ್ ನಲ್ಲಿದ್ದ 1.80 ಲಕ್ಷ ಮೌಲ್ಯದ ಚಿನ್ನ ಹಾಗೂ 50 ಸಾವಿರ ನಗದು ಕಳ್ಳತನವಾಗಿದೆ ಎಂದು ಹೊನ್ನಾಳಿ ತಾಲ್ಲೂಕಿನ ಕೂಲಂಬಿ ಗ್ರಾಮದ ಉಮೇಶ್ ಅವರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉಮೇಶ್, ಪತ್ನಿ ಹಾಗೂ ಮಗನ ಜೊತೆ ಚಿತ್ರದುರ್ಗಕ್ಕೆ ಹೋಗಲು ಕೊಲಂಬಿಯಿಂದ ದಾವಣಗೆರೆಯ ದುರ್ಗಾಂಬ ಬಸ್ ನಲ್ಲಿ ಬಂದು ವಾಣಿ ರೈಸ್ ಮಿಲ್ ಬಳಿ ಇಳಿದಿದ್ದು, ನಂತರ ಬ್ಯಾಗ್ ನೋಡಿದಾಗ ಚಿನ್ನ, ನಗದು ಕಳವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ದಾವಣಗೆರೆಯ ವಿದ್ಯಾನಗರ ಪ್ರಕರಣ ದಾಖಲಿಸಲಾಗಿದೆ.



