ದಾವಣಗೆರೆ: ಬೈಕ್ ಕಳ್ಳತನ ಆರೋಪಿಯನ್ನು ಪೊಲೀಸರು ಬಂಧನ ಮಾಡಿದದ್ದು, ಆರೋಪಿಯಿಂದ 2.63 ಲಕ್ಷ ಬೆಲೆಯ 5 ಬೈಕ್ ವಶಕ್ಕೆ ಪಡೆಯಲಾಗಿದೆ.
ಹೊಸಬಿಸಲೇರಿ ಗ್ರಾಮದ ಅರವಿಂದ ಬಿ.ಆರ್ ಎಂಬುವವರು ತಮ್ಮ ಆಕ್ಟಿವ್ ಹೊಂಡಾ ಸ್ಕೂಟರ್ ಕಳ್ಳತನ ಬಗ್ಗೆ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ದಸೆ. 23ರಂದು ಬೆಳಗ್ಗೆ 04:00 ಗಂಟೆಗೆ ಗಸ್ತಿನಲ್ಲಿದ್ದ ಪೊಲೀಸರು 06 ನೇ ಕಲ್ಲಿನಲ್ಲಿ ಅನುಮಾಸ್ಪದವಾಗಿ ಸಿಕ್ಕ ಆರೋಪಿತ ಶಂಕರಪ್ಪ ಎಸ್ (35) ಚಾಲಕ ಹಾಲಿ ವಾಸ : ನಿಟ್ಟುವಳ್ಳಿ ದಾವಣಗೆರೆ ಈತನನ್ನು ವಶಕ್ಕೆ ಪಡೆದು ವಿಚಾರ ಮಾಡಲಾಯಿತು.
ಆರೋಪಿಯು ಹದಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ 02 ಬೈಕ್ ಕಳ್ಳತನ ಪ್ರಕರಣಗಳು ಹಾಗೂ ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆ. ಕೆಟಿಜೆ ನಗರ ಪೊಲೀಸ್ ಠಾಣೆ, ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ 01 ಬೈಕ್ ಪ್ರಕರಣಗಳು ಒಟ್ಟು 05 ಬೈಕ್ ಗಳನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಘನ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿತನನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ ವಿಜಯ ಕುಮಾರ್ ಹಾಗೂ ಮಂಜುನಾಥ ಜಿ ಹಾಗೂ ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬಸವರಾಜ ಬಿ ಎಸ್, ಮಾಯಕೊಂಡ ವೃತ್ತದ ಸಿಪಿಐ ನಾಗರಾಜ ಡಿ ಮಾರ್ಗದರ್ಶನಲ್ಲಿ ಹದಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಶ್ರೀಶೈಲ ಪಟ್ಟಣಶೆಟ್ಟಿ, ಶಕುಂತಲಾ, ಸಿಬ್ಬಂದಿಗಳಾದ ನಾಗರಾಜ ಕೆ, ವಿಜಯ ಕುಮಾರ, ಜಯಪ್ರಕಾಶ, ಸಂತೋಷ ಕುಮಾರ, ಅರುಣಕುಮಾರ, ಲೋಹಿತ್ ಟಿ, ಅರುಣಕುಮಾರ ಕುರುಬರ, ಜಗದೀಶ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.



