ದಾವಣಗೆರೆ: ನಗರದ ವೈದ್ಯರೊಬ್ಬರ ಮನೆಯಲ್ಲಿ ಹೋಂ ಕೇ ಟೇಕರ್ ಕೆಲಸ ಮಾಡಿಕೊಂಡಿದ್ದ ಖತರ್ನಾಕ್ ಯುವತಿ, ತಾನು ಮಾಡಿದ ಕಳ್ಳತನಕ್ಕೆ ಈಗ ಪೊಲೀಸ್ ಅತಿಥಿಯಾಗಿದ್ದಾಳೆ. ಕಳ್ಳತನ ಮಾಡಿದ್ದ ಚಿನ್ನದ ಸರ, ಬಳೆಗಳನ್ನು ಒಟ್ಟು ಸೇರಿಸಿ 3.50 ಲಕ್ಷ ಮೌಲ್ಯದ 68 ಗ್ರಾ೦ ಚಿನ್ನದ ಗಟ್ಟಿ ಮಡಿಸಿದ್ದಳು. ಇದೀಗ ಪೊಲೀಸರು ಗಟ್ಟಿ ಚಿನ್ನ ಮತ್ತು ಮಹಿಳೆಯನ್ನು ಬಂಧಿಸಿದ್ದಾರೆ.
ನಂದಿನಿ ಬಿನ್ ಹನುಮಂತಪ್ಪ (22) ಬ೦ಧಿತ ಆರೋಪಿ. ಈ ಅರೋಪಿ ನಗರದ ಎಸ್.ನಿಜಲಿಂಗಪ್ಪ ಬಡಾವಣೆ ನಿವಾಸಿ, ವೈದ್ಯ ದಂಪತಿ ಡಾ.ರಜನಿ, ಡಾ.ರಮೇಶ ಮನೆಯಲ್ಲಿ ಭಾರತ್ ಕಾಲನಿವಾಸಿ ನಂದಿನಿ ಹೋಂ ಕೇರ್ ಟೇಕರ್ ಕೆಲಸ ಮಾಡುತ್ತಿದ್ದಳು. ಜ.8ರಂದು ಡಾ.ರಜನಿ, ಡಾ.ರಮೇಶ ಅವರು ತಮ್ಮ ಮನೆಯಲ್ಲಿಟ್ಟಿದ್ದ 60 ಗ್ರಾಂ ಚಿನ್ನದ ಮಾಂಗಲ್ಯ ಸರ, 30 ಗ್ರಾಂ ಚಿನ್ನದ ಬಳೆ ಹಾಗೂ ಕಿವಿಯೋಲೆ ಕಳವಾಗಿದೆ. ಮನೆಯಲ್ಲಿ ಕೆಲಸ ಮಾಡುವವರಮೇಲೆ ಅನುಮಾನವಿದೆ ಎಂದು ಬಡಾವಣೆ ಠಾಣೆಗೆದೂರು ನೀಡಿದ್ದರು.
ಘಟನೆ ನಂತರ ಆರೋಪಿನಂದಿನಿ ತಲೆಮರೆಸಿಕೊಂಡಿದ್ದರು. ಮಾ.29ರಂದು ದಾವಣಗೆರೆಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ನಂದಿನಿಯನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ನಂದಿನಿ ಚಿನ್ನಾಭರಣ ಕಳವು ಮಾಡಿದ್ದನ್ನು ಬಾಯಿ ಬಿಟ್ಟಿದ್ದಾಳೆ. ಕದ್ದ ಆಭರಣಗಳಲ್ಲಿ ಒಡವೆ ಮಾಡಿಸಿಕೊಳ್ಳಲು ಅವುಗಳನ್ನು ಕರಗಿಸಿ, ಮನೆಯಲ್ಲಿ ಇಟ್ಟುಕೊಂಡಿದ್ದಾಗಿ ಹೇಳಿದ್ದಾಳೆ.
ಆರೋಪಿ ನಂದಿನಿ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಆಕೆಯ ಮನೆಯಲ್ಲಿ 3.50 ಲಕ್ಷ ಮೌಲ್ಯದ 68 ಗ್ರಾ೦ ಚಿನ್ನದಗಟ್ಟಿ ಜಪ್ತಿ ಮಾಡಿದ್ದಾರೆ.ಆರೋಪಿಯನ್ನುನ್ಯಾಯಾಲಯಕ್ಕೆ ಹಾಜರಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎಎಸ್ಪಿಗಳಾದ ವಿಜಯಕುಮಾರ ಎಂ. ಸಂತೋಷ ಜಿ.ಮಂಜುನಾಥ, ಡಿವೈಎಸ್ಪಿ ಮಲ್ಲೇಶ ದೊಡ್ಡನಿ ಮಾರ್ಗದರ್ಶನದಲ್ಲಿ ಬಡಾವಣೆ ಠಾಣೆ ಇನ್ಸ್ಪೆಪೆಕ್ಟರ್ ಮಲ್ಲಮ್ಮ ಆರ್. ಚೌಬೆ, ಪಿಎಸ್ಐ ರಮೇಶ, ಎಎಸ್ಐ ಚಂದ್ರಶೇಖರ
ನಾಯ್ಕ, ಸಿಬ್ಬಂದಿ ಅರುಣಕುಮಾರ, ಕೆಂಚಪ್ಪ, ಸೈಯದ್ ಅಲಿ, ವಿಶ್ವಕುಮಾರ, ಹನುಮಂತಪ್ಪ, ಎಚ್.ಗೀತಾ ಅವರನ್ನು ಒಳಗೊಂಡ ತಂಡ ಪ್ರಕರಣ ಯಶಸ್ವಿಯಾಗಿ ಭೇದಿಸಿದೆ. ಪೊಲೀಸರ ಕಾರ್ಯಕ್ಕೆ ಜಿಲ್ಲಾ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.



