ದಾವಣಗೆರೆ: ಬಂಗಾರ ವ್ಯಾಪಾರಿಯನ್ನು ಮಹಾರಾಷ್ಟ್ರದಿಂದ ಹಿಂಬಾಲಿಸಿ ಬಂದು, ಕೈಯಲ್ಲಿ ಆಯುಧಗಳನ್ನು ಹಿಡಿದು ರಸ್ತೆಯಲ್ಲಿ ಓಡಾಡುತ್ತಾ ವಾಹನಗಳನ್ನು ನಿಲ್ಲಿಸಿ ದರೋಡೆಗೆ ಹೊಂಚು ಹಾಕಿದ್ದ ಐವರು ಅಂತರ್ ರಾಜ್ಯ ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಮಾ. 08 ರಂದು ರಾತ್ರಿ 12-30ರ ಸಮಯದಲ್ಲಿ ಆಜಾದ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಮಾಗನಹಳ್ಳಿ ರಸ್ತೆಯ ಚೌಡೇಶ್ವರಿ ದೇವಸ್ಥಾನದ ಹತ್ತಿರ ರಸ್ತೆ ಪಕ್ಕದಲ್ಲಿ ಬಿಳಿಯ ಬಣ್ಣದ ಸ್ಕಾರ್ಪಿಯೊ ಕಾರನ್ನು ನಿಲ್ಲಿಸಿಕೊಂಡು ಯಾರೋ ಐದು ಜನರು ದರೋಡೆ ಮಾಡುವ ಉದ್ದೇಶದಿಂದ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಾ ದರೋಡೆ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಎಸ್ಪಿ ಅವರಿಗೆ ಮಾಹಿತಿ ಬಂದಿತ್ತು.
ಈ ಮಾಹಿತಿಯನ್ನು ಖಚಿತಪಡಿಸಿಕೊಂಡು ಕೂಡಲೇ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರು ಹಾಗೂ ಡಿವೈಎಸ್ಪಿ ಬಗ್ಗೆ ಸೂಚನೆ ನೀಡಿದ್ದು, ನಂತರ ಕೂಡಲೇ ಕಾರ್ಯ ಪ್ರವೃತ್ತರಾದ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ನಗರ ಪೊಲೀಸ್ ಉಪಾಧೀಕ್ಷಕರವರು ಆಜಾದ್ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಿ ಅಶ್ವಿನ್ ಹಾಗೂ ಡಿ.ಸಿ.ಆರ್.ಬಿ ಘಟಕದ ಪೊಲೀಸ್ ಸಿಬ್ಬಂದಿಯವರನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ಆಜಾದ್ ನಗರ ಠಾಣೆಯ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಆಗಮಿಸಿದ್ದರು.
ಮಾಗನಹಳ್ಳಿ ರಸ್ತೆಯ ಚೌಡೇಶ್ವರಿ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಒಂದು ಬಿಳಿ ಬಣ್ಣದ ಸ್ಕಾರ್ಪಿಯೊ ಕಾರನ್ನು ನಿಲ್ಲಿಸಿ 5 ಜನರು ಒಟ್ಟಾಗಿ ಸೇರಿಕೊಂಡು ದರೋಡೆ ಮಾಡುವ ಉದ್ದೇಶದಿಂದ ಕೈಗಳಲ್ಲಿ ಆಯುಧಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ನಿಲ್ಲಿಸಿ ದರೋಡೆ ಮಾಡಲು ಪ್ರಯತ್ನಿಸುತ್ತಿರುವುದು ಕಂಡು ಬಂದದೆ. ಕೂಡಲೇ ಪೊಲೀಸ್ ತಂಡ ಸದರಿ ದರೋಡೆ ತಂಡದ ಮೇಲೆ ದಾಳಿ ಮಾಡಿದ್ದು, ದರೋಡೆಗೆ ಹೊಂಚು ಹಾಕಿದ್ದ 5 ಜನರನ್ನು ಬಂಧಿಸಲಾಗಿದೆ.
ಬಂಧಿತರನ್ಬು 1) ದುರ್ಯೊಧನ ತಂದೆ ಗಿರಿಜಪ್ಪ ದಗಡೆ, 50 ವರ್ಷ, ಕೂಲಿ ಕೆಲಸ, ವಾಸ: ಸೇಲ್ ಗಾವ್ ಕರ್ಮಳ (ತಾ) ಸೊಲ್ಲಾಪುರ ಜಿಲ್ಲೆ., 2) ರಮೇಶ ಸೋಪಾನ ತಂದೆ ಸೋಪಾನ ಪಿಟ್ಟೆಕಾರ್, 36 ವರ್ಷ, ಕೂಲಿ ಕೆಲಸ, ವಾಸ: ಮಾಳಂಗಿ, ಕರ್ಜತ್ (ತಾ) ಅಹಮ್ಮದ್ ನಗರ ಜಿಲ್ಲೆ., 3) ಲಕ್ಷ್ಮಣ್ ತಂದೆ ರಾಜಾರಾಂ, 62 ವರ್ಷ, ಕೂಲಿ ಕೆಲಸ, ವಾಸ: ಮಾಳಂಗಿ ಕರ್ಜತ್ (ತಾ) ಅಹಮ್ಮದ್ ನಗರ ಜಿಲ್ಲೆ , 4) ಲಕ್ಷ್ಮಣ ತಂದೆ ಮಾರುತಿ ಜಾಧವ್ , 32 ವರ್ಷ, ಡ್ರೈವರ್ ಕೆಲಸ, ವಾಸ: ಸೈದಾಪುರ ಗ್ರಾಮ, ಸಾತಾರ (ತಾ), 5) ಗಣೇಶ ತಂದೆ ಶಾಜಿ, 37 ವರ್ಷ, ಡ್ರೈವರ್ ಕೆಲಸ, ವಾಸ: ಜೊಪಡಿಪಟ್ಟಿ ಕರ್ಮಳ ಸೊಲ್ಲಾಪುರ (ತಾ) (ಜಿಲ್ಲೆ) ಎಲ್ಲರೂ ಮಹಾರಾಷ್ಟ್ರ ರಾಜ್ಯಅಂತ ತಿಳಿಸಿದು ಬಂದಿದೆ.
ಆರೋಪಿಗಳ ಬಳಿ ಮತ್ತು ಸ್ಕ್ರಾಪಿಯೋ ಕಾರ್ ನಲ್ಲಿದ್ದ ಆಯುಧ ಮತ್ತು ವಸ್ತುಗಳನ್ನು ಪಂಚರ ಸಮಕ್ಷಮ ಪರಿಶೀಲಿಸಿದಾಗ 1) ಒಂದು ಶಾಕ್ ಅಬ್ಜರ್ ಪೈಪ್ 2) ಒಂದು ಕಬ್ಬಿಣದ ರಾಡ್ 3) ಒಂದು ಕಬ್ಬಿಣದ ನಲ್ಲಿ ಪೈಪ್ 4) ಒಂದು ಜಾಲರಿ ಕಟ್ಟರ್ 5) ಒಂದು ವೈರ್ ಕಟ್ಟರ್ 6) ಒಂದು ಅಡಿ ಉದ್ದದ ಚಾಕು 7) ಒಂದು 10 ಇಂಚು ಉದ್ದದ ಚಾಕು 8) 6 ಸಣ್ಣ ಬ್ಲೇಡ್ ಚಾಕುಗಳು 9) 3 ಜೊತೆ (6) ಹ್ಯಾಂಡ್ ಗ್ಲೌಸ್ 10) ಸುಮಾರು 15 ಅಡಿ ಉದ್ದದ 3 ಹಗ್ಗಗಳು 11) 5 ಕಪ್ಪು ಬಣ್ಣದ ಮಾಸ್ಕ್ 12) 5 ಕಾರದ ಪುಡಿ ಪಾಕಿಟ್ ಗಳು 13) ಒಂದು ಗಮ್ ಟೇಪ್ 14) ಒಂದು ಬ್ಯಾಗ್ ಹಾಗೂ 15) ಎರಡು MH-42-BJ-5141 ಸಂಖ್ಯೆ ಇರುವ ವಾಹನದ ನಂಬರ್ ಪ್ಲೇಟ್ ಗಳು ಮತ್ತು 16) ಸ್ಕಾರ್ಪಿಯೊ ಕಾರ್ ದೊರೆತ್ತಿದ್ದು, ಸದರಿ ಕಾರ್ ಮತ್ತು ಮೇಲ್ಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
ಸದರಿ 5 ಜನರು ಒಟ್ಟಾಗಿ ಸೇರಿಕೊಂಡು ಸ್ಕಾರ್ಪಿಯೊ ಕಾರನ್ನು ನಿಲ್ಲಿಸಿಕೊಂಡು ದರೋಡೆ ಮಾಡುವ ಉದ್ದೇಶದಿಂದ ಕೈಗಳಲ್ಲಿ ಆಯುಧಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ನಿಲ್ಲಿಸಿ ದರೋಡೆ ಮಾಡಲು ಪ್ರಯತ್ನಿಸುತ್ತಿದ್ದ ಆರೋಪಿತರ ವಿರುದ್ದ ಠಾಣಾಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಆರೋಪಿತರನ್ನು ಹೆಚ್ಚಿನ ವಿಚಾರಣೆ ಮಾಡಲಾಗಿ ಸದರಿ 05 ಜನ ಆರೋಪಿತರುಗಳು ಬೇಂಗಳೂರಿನಿಂದ ಬಂಗಾರದ ವ್ಯಾಪರಿಯನ್ನು ಹಿಂಬಾಲಿಸಿ ಬಂದಿದ್ದು, ಬಂಗಾರದ ವ್ಯಾಪರಿಯು ಬೆಂಗಳೂರಿನಿಂದ ತೆಗೆದುಕೊಂಡು ಬಂದಿದ್ದ 11 ಕೆಜಿ ಗಿಂತ ಹೆಚ್ಚು ಬಂಗಾರದ ಆಭರಣಗಳನ್ನು ತೆಗೆದುಕೊಂಡು ಬಂದು ದಾವಣಗೆರೆಯ ಲಾಡ್ಜ್ ವೊಂದರಲ್ಲಿ ರಾತ್ರಿ ತಂಗಿದ್ದು, ಇವರನ್ನು ಹಿಂಬಾಲಿಸಿ ಬಂದಿದ್ದ ದರೋಡೆ ತಂಡ ಸದರಿ ಬಂಗಾರ ವ್ಯಾಪರಿಯಲ್ಲಿದ್ದ ಆಭರಣಗಳನ್ನುದರೋಡೆ ಮಾಡಲು ಲಾಡ್ಜ್ ಬಳಿ ಹೋಂಚು ಹಾಕಿರುತ್ತಾರೆ. ಆದರೆ ಆ ಕೆಲಸ ವಿಫಲವಾಗಿದ್ದು, ನಂತರ ವಾಪಾಸ್ ಹೋಗಲು ನಿರ್ಧರಿಸಿದ್ದು, ವಾಪಸ್ ಹೋಗಲು ಖರ್ಚಿಗೆ ಹಣಕ್ಕಾಗಿ ದಾವಣಗೆರೆ ನಗರದಲ್ಲಿ ಸಂಚರಿಸಿ ರಾತ್ರಿ ಸಮಯದಲ್ಲಿ ದರೊಡೆ ಮಾಡಲು ಮೇಲ್ಕಂಡ ಸ್ಥಳದಲ್ಲಿ ಇರುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿರುತ್ತದೆ.
ಸದರಿ ಆರೋಪಿತರುಗಳು ಹಲವು ದರೋಡೆ ಪ್ರಕರಣದಲ್ಲಿ ಬಾಗಿಯಾಗಿರುವುದು ಹಾಗೂ ಈ ದರೋಡೆಕೋರರ ಮುಖ್ಯ ಟಾರ್ಗೆಟ್ ಬಂಗಾರದ ವ್ಯಾಪರಿಗಳು ಆಗಿರುತ್ತಾರೆ ಎಂದು ವಿಚಾರಣೆ ವೇಳೆ ತಿಳಿದು ಬಂದಿರುತ್ತದೆ. ಆರೋಪಿತರುಗಳನ್ನು ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
ಮೇಲ್ಕಂಡ ಪ್ರಕರಣದಲ್ಲಿ ದರೋಡೆಕೋರರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಹಾಗು ಸದರಿ ಆರೋಪಿತರಿಂದ ಆಗಬಹುದಾಗಿದ್ದ ದರೋಡೆ ಪ್ರಕರಣವನ್ನು ತಡೆಯುವಲ್ಲಿ ದಾವಣಗೆರೆ ಪೊಲೀಸ್ ತಂಡ ಯಾಸ್ವಿಯಾಗಿದ್ದು, ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಅಧಿಕಾರಿಗಳಾದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ ಸಂತೋಷ , ಜಿ ಮಂಜುನಾಥ ಹಾಗೂ ನಗರ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಮನಿ , ಆಜಾದ್ ನಗರ ಪೊಲೀಸ್ ನಿರೀಕ್ಷಕಿ ಅಶ್ವಿನ್ ಹಾಗೂ ಸಿಬ್ಬಂದಿಗಳಾದ – ಆಂಜನೇಯ ಕೆ.ಟಿ, ಮಜೀದ್ ಕೆ.ಸಿ, ರಾಘವೇಂದ್ರ, ಬಾಲರಾಜ್, ರಮೇಶ್ ನಾಯ್ಕ ಹಾಗು ಆಜಾದ್ ನಗರ ಠಾಣೆಯ ಸಿಬ್ಬಂದಿಗಳಾದ – ಮಂಜುನಾಥ ನಾಯ್ಕ, ಕೃಷ್ಣ ನಂದ್ಯಾಲ್, ತಿಪ್ಪೇಸ್ವಾಮಿ, ನಾಗರಾಜ ಡಿ ಬಿ, ವೆಂಕಟೇಶ, ನಾಗರಾಜ್, ಜಿಲ್ಲಾ ಪೊಲೀಸ್ ಕಛೇರಿಯ ರಾಘವೇಂದ್ರ, ಶಾಂತರಾಜು ರವರುಗಳನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.



