ದಾವಣಗೆರೆ: ಧರ್ಮಸ್ಥಳ ಹೋಗಿ‌‌‌ ಬರುವಷ್ಟರಲ್ಲಿ ಮನೆ‌‌ ಬೀಗ ಮುರಿದು ಕಳ್ಳತನ; 4.07 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ….!!!

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ಧರ್ಮಸ್ಥಳ ಹೋಗಿ‌‌‌‌‌ ಬರುವಷ್ಟರಲ್ಲಿ ಮನೆ ಬೀಗ‌ ಮುರಿದು ಕಳ್ಳತ‌ನ ಮಾಡಿರುವ ಘಟನೆ ಎಪಿಎಂಸಿ ಕ್ವಾಟ್ರಸ್ ನ ಮನೆಯೊಂದರಲ್ಲಿ‌ ನಡೆದಿದೆ‌. ಮನೆಯಲ್ಲಿ 4.07 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ನಗರದ ಪಿ.ಬಿ.ರಸ್ತೆಯ ಎಪಿಎಂಸಿ ಕ್ವಾಟ್ರಸ್ ನಲ್ಲಿ ಎಪಿಎಂಸಿ ಅಧೀಕ್ಷಕರ ಮನೆಯ ಬೀಗ ಮುರಿದು 4.07 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆದಿದೆ. ಜಗಳೂರು ತಾಲ್ಲೂಕಿನ ಮೂಡಲ ಮಾಚಿಕೆರೆಯ ನಿವಾಸಿಯಾದ ಬಸವರಾಜ, ಪತ್ನಿ ಎಪಿಎಂಸಿ ಅಧೀಕ್ಷಕಿ ತಿಪ್ಪಮ್ಮ ಜಿ.ಕೆ. ಅವರ ಮನೆಯಲ್ಲಿ ಕಳ್ಳತನ ನಡೆದಿದೆ.ಈ ದಂಪತಿ ಜ.12ರಂದು ಮನೆಗೆ ಬೀಗ ಹಾಕಿ ಧರ್ಮಸ್ಥಳಕ್ಕೆ ಹೋಗಿದ್ದರು. ಧರ್ಮಸ್ಥಳದಿಂದ ಬಂದು ನೋಡಿದ್ದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.

ಮನೆಗೆ ಬೀರುವಿನಲ್ಲಿ ಇಟ್ಟಿದ್ದ ಲಕ್ಷ್ಮಿ ಡಾಲರ್ ತಾಳಿ, ಬಂಗಾರದ ಓಲೆ. ಜುಮುಕಿ, ಚೈನು, ಉಂಗುರ, ಬೆಳ್ಳಿಯ ಗಣಪತಿ, ತಟ್ಟೆ, ಕುಂಕುಮದ ಬಟ್ಟಲು ಸೇರಿ ಇತರೆ ವಸ್ತುಗಳು ಕಳ್ಳತನವಾಗಿವೆ. ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *