Connect with us

Dvgsuddi Kannada | online news portal | Kannada news online

ದಾವಣಗೆರೆ: ಸೈಬರ್ ವಂಚನೆ; ಡಿಟಿಎಚ್ ರಿಜಾರ್ಚ್ ಮಾಡಲು ಹೋಗಿ ಬರೋಬ್ಬರಿ 83 ಸಾವಿರ ಕಳೆದುಕೊಂಡ ಪೊಲೀಸ್ ಕಾನ್‌ಸ್ಟೆಬಲ್..!!!

cyber crime 1

ದಾವಣಗೆರೆ

ದಾವಣಗೆರೆ: ಸೈಬರ್ ವಂಚನೆ; ಡಿಟಿಎಚ್ ರಿಜಾರ್ಚ್ ಮಾಡಲು ಹೋಗಿ ಬರೋಬ್ಬರಿ 83 ಸಾವಿರ ಕಳೆದುಕೊಂಡ ಪೊಲೀಸ್ ಕಾನ್‌ಸ್ಟೆಬಲ್..!!!

ದಾವಣಗೆರೆ: ಡಿಟಿಎಚ್ ರಿಜಾರ್ಚ್ ಮಾಡಲು ಬಂದ ಮೆಸೇಜ್ ಲಿಂಕ್ ಮೇಲೆ ಕ್ಲಿಕ್ ಮಾಡಿದ ಪೊಲೀಸ್ ಕಾನ್‌ಸ್ಟೆಬಲ್​ ಒಬ್ಬರು ಬರೋಬ್ಬರಿ 82,998 ರೂಪಾಯಿ ಕಳೆದುಕೊಂಡಿದ್ದಾರೆ. ದಾವಣಗೆರೆ ನಗರದ ಪಿಜೆ ಬಡಾವಣೆಯ ಪೊಲೀಸ್ ಕಾನ್​ಸ್ಟೆಬಲ್ ಬಸವರಾಜ ಬಾಗೇವಾಡಿ ಸೈಬರ್ ವಂಚನೆಗೆ ಒಳಗಾದವರು.

ಪೊಲೀಸ್ ಕಾನ್​ಸ್ಟೆಬಲ್ ಬಸವರಾಜ್ ಡಿಟಿಎಚ್ ರಿಜಾರ್ಚ್ ಮಾಡಿಸುವ ಉದ್ದೇಶದಿಂದ ಪ್ಲಾನ್​ ಗಾಗಿ ಸಾಮಾಜಿಕ ಜಾಲತಾಣದಲ್ಲಿ ಹುಡುಕುತ್ತಿದ್ದಾಗ ಡಿಟಿಎಚ್‌ನ ಮೊಬೈಲ್ ಸಂಖ್ಯೆ ಸಿಕ್ಕಿದೆ. ಆ ಸಂಖ್ಯೆಗೆ ಕರೆ ಮಾಡಿದಾಗ ಅಪರಿಚಿತ ವ್ಯಕ್ತಿಯೊಬ್ಬ ಉತ್ತಮ ಯೋಜನೆ ಇದೆ ಎಂದು ನಂಬಿಸಿ ಲಿಂಕ್‌ ಓಪನ್ ಮಾಡಿ, ಅದರಲ್ಲಿ ಮಾಹಿತಿ ತುಂಬುವಂತೆ ತಿಳಿಸಿದ್ದಾನೆ.ಅಪರಿಚಿತ ವ್ಯಕ್ತಿಯ ಮಾತುಗಳಿಗೆ ಮರುಳಾದ ಬಸವರಾಜ್ ಹೇಳಿದಂತೆ ಮಾಹಿತಿ ತುಂಬಿದ್ದಾರೆ. ಈ ವೇಳೆ ಅವರ ಖಾತೆಯಿಂದ ಹಂತಹಂತವಾಗಿ ಒಟ್ಟು ಹಣ ಕಡಿತವಾಗಿದೆ. ತಕ್ಷಣ ಬಸವರಾಜ್ ಈ ಬಗ್ಗೆ ಸಿಇಎನ್‌ ಅಪರಾಧ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top