Connect with us

Dvgsuddi Kannada | online news portal | Kannada news online

ದಾವಣಗೆರೆ: ಕುಡಿಯಲು ನೀರು ಕೇಳುವ ನೆಪದಲ್ಲಿ ಬಂದ ಅಪರಿಚಿತರು, ತೋಟದ ಮನೆಯಲ್ಲಿದ್ದ ವೃದ್ಧ ದಂಪತಿಗೆ ಚಾಕುವಿನಿಂದ ಇರಿದು ಹಲ್ಲೆ…!

images 2023 12 24T085108.732

ದಾವಣಗೆರೆ

ದಾವಣಗೆರೆ: ಕುಡಿಯಲು ನೀರು ಕೇಳುವ ನೆಪದಲ್ಲಿ ಬಂದ ಅಪರಿಚಿತರು, ತೋಟದ ಮನೆಯಲ್ಲಿದ್ದ ವೃದ್ಧ ದಂಪತಿಗೆ ಚಾಕುವಿನಿಂದ ಇರಿದು ಹಲ್ಲೆ…!

ದಾವಣಗೆರೆ; ತಡ ರಾತ್ರಿ ಕುಡಿಯಲು ನೀರು ಕೇಳಿದ ಅಪರಿಚಿತರು, ತೋಟದ ಒಂಟಿ ಮನೆಯಲ್ಲಿ ವಾಸವಿದ್ದ ವೃದ್ಧ ದಂಪತಿ ಮೇಲೆ ಚಾಕುವಿನಿಂದ ಇರಿದು ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಕುಂಕುವ ಗ್ರಾಮದಲ್ಲಿ ನಡೆದಿದೆ.

ಪಾಡುರಂಗಯ್ಯ ಮತ್ತು ಪತ್ನಿ ಲಕ್ಷ್ಮಮ್ಮ ಗ್ರಾಮದ ಹೊರ ಹೊಲಯದಲ್ಲಿರುವ ತೋಟದ ಮನೆಯಲ್ಲಿ ವಾಸವಾಗಿದ್ದರು. ತಡ ರಾತ್ರಿಯಲ್ಲಿ ಅಪರಿಚಿತ ವ್ಯಕ್ತಿಗಳು ಬೈಕ್‌ನಲ್ಲಿ ಬಿದ್ದು ಗಾಯವಾಗಿದೆ. ಕುಡಿಯಲು ನೀರು ಕೇಳಲು ಬಾಗಿಲು ತಟ್ಟಿದ್ದಾರೆ. ಲಕ್ಷ್ಮಮ್ಮ ರಾತ್ರಿ ಹೊತ್ತಿನಲ್ಲಿ ಬಾಗಿಲು ತೆರೆಯುವುದು ಬೇಡ ಎಂದರೂ ಪಾಂಡುರಂಗಯ್ಯ ಬಾಗಿಲು ತೆಗೆದು ಕುಡಿಯಲು ನೀರುಕೊಟ್ಟಿದ್ದಾರೆ.‌ ವ್ಯಕ್ತಿ ಮತ್ತೆ ಬಂದು ಸ್ವಲ್ಪ ಅರಿಷಿಣ ಪುಡಿ ಪಡೆದು ನಂತರ ಬಂದು ಸಕ್ಕರೆ ಕೊಡಿ ಎಂದು ಕೇಳಿದ್ದಾರೆ. ಸಕ್ಕರೆ ಇಲ್ಲವೆಂದು ಹೇಳಿದಕ್ಕೆ ಪಾಂಡುರಂಗಯ್ಯನನ್ನು
ಕೆಳಕ್ಕೆ ಬೀಳಿಸಿ ಚಾಕುವಿನಿಂದ ಕುತ್ತಿಗೆಗೆ‌ ತಿವಿಯುತ್ತಿದ್ದಂತೆ ಕಿರಿಚಿದ್ದಾರೆ. ಮನೆಯೊಳಗಿನಿಂದ ಲಕ್ಷ್ಮಮ್ಮ ಬಂದು ಜೋರಾಗಿ ಕೂಗಿದ್ದರಿಂದ ಅಪರಿಚಿತ ವ್ಯಕ್ತಿಗಳು ಓಡಿಹೋಗಿದ್ದಾರೆ.

ಹಲ್ಲೆಗೆ ಒಳಗಾದ ವೃದ್ಧ ದಂಪತಿಗಳಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿದಲಾಗಿದೆ. ಇನ್ನೂ ಸಾಕಿದ ನಾಯಿಯು ನಾಪತ್ತೆ ಆಗುದ್ದು, ನ್ಯಾಮತಿ ಠಾಣೆಯಲ್ಲಿ ದೂರು ಪೊಲೀಸ್ ದಾಖಲಿಸಿದ್ದಾರೆ. ದಂಪತಿಗಳಿಗೆ ಇಬ್ಬರು ಪುತ್ರರಿದ್ದು ಓರ್ವ ಪುತ್ರ ಭದ್ರಾವತಿಯಲ್ಲಿ ದ್ವಾರಕನಾಥ‌ ಪೂರೋಹಿತ ಕೆಲಸ ಮಾಡಿಕೊಂಡಿದ್ದು, ಇನ್ನೊಬ್ಬ ಚಲುವರಾಜ ಶಿವಮೊಗ್ಗದಲ್ಲಿ ಬಾಳೆ ಕಾಯಿ ಮಂಡಿ ಇಟ್ಟುಕೊಂಡುವ್ಯಾಪಾರ ಮಾಡಿಕೊಂಡಿದ್ದಾರೆ. 5 ಎಕರೆಅಡಕೆ ತೋಟವಿದ್ದು ಈ ವಿಚಾರವಾಗಿ ಪಕ್ಕದ ಜಮೀನಿನವರು ಆಗ್ಗಾಗೆ ಜಗಳವಾಗುತ್ತಿದ್ದು, ಈ ವಿಚಾರವಾಗಿ
ದಾವಣಗೆರೆ ಸಿವಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top