ದಾವಣಗೆರೆ: ಆಟೋದಲ್ಲಿ ಬಿಟ್ಟು ಹೋಗಿದ್ದ ಹಣ ಮತ್ತು ಆಭರಣಗಳಿದ್ದ ಬ್ಯಾಗ್ ಅನ್ನು ಪೊಲೀಸರು ಸಿಸಿಟಿವಿ ಮೂಲಕ ಪತ್ತೆ ಮಾಡಿ, ಆಟೋ ಚಾಲಕನನ್ನು ಕರೆಸಿ ವಾರಸುದಾರರಿ ಬ್ಯಾಗ್ ಹಿಂತಿರುಗಿಸಿದ್ದಾರೆ. ಇದೇ ವೇಳೆ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಮುಕ್ತಿಯಾರ್ ಗೆ ಬಸವ ನಗರ ಠಾಣೆಯಲ್ಲಿ ಸನ್ಮಾನಿಸಲಾಗಿದೆ.
ಚನ್ನರಾಯಪಟ್ಟಣವೀಣಾ ಗಂಡ ದಾವಣಗೆರೆಗೆ ಮದುವೆಗೆ ಬಂದಿದ್ದು, ಡಿ. 19ರಂದು ನಗರದ ಬಿ.ಟಿ. ಗಲ್ಲಿಯ ತಮ್ಮ ಸಂಬಂಧಿಕರ ಮನೆಗೆ ಬಂದು ನಂತರ ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ತನ್ನ ಮಗಳು ಕವಿತಾ ಇವರನ್ನು ಹಾಸ್ಟೆಲ್ ಗೆ ಬಿಡುವ ಸಲುವಾಗಿ ಯಾವುದೋ ಒಂದು ಆಟೋದಲ್ಲಿ ರಾಮ್ & ಕೋ ಸರ್ಕಲ್ ಬಳಿ ಇಳಿಯುವಾಗ ತಮ್ಮ ಬಳಿ ಇದ್ದ ವ್ಯಾನಿಟಿ ಬ್ಯಾಗ್ ಅನ್ನು ಆಟೋದಲ್ಲಿಯೇ ಬಿಟ್ಟು ಇಳಿದಿದ್ದರು. ಮನೆಗೆ ಹೋದಾಗ ವ್ಯಾನಿಟಿ ಬ್ಯಾಗ್ ಅನ್ನು ಆಟೋದಲ್ಲಿಯೇ ಬಿಟ್ಟು ಇಳಿದಿರುವುದು ಗೊತ್ತಾಗಿ ಪುನಃ ತಾವು ಆಟೋ ಹತ್ತಿದ್ದ ಬಿ.ಟಿ. ಗಲ್ಲಿಗೆ ಬಂದು ವಿಚಾರ ಮಾಡಿ, ಠಾಣೆಗೆ ಬಂದು ಮಾಹಿತಿ ನೀಡಿದ್ದರು.
ಕೂಡಲೇ ಠಾಣೆಯ ಪಿಎಸ್ ಐ ಪ್ರಮೀಳಮ್ಮ, ಸಿಬ್ಬಂದಿಯವರಾದ ಪ್ರಕಾಶ್, ಅಣ್ಣಯ್ಯ ಲಮಾಣಿ, ಗಣೇಶ್ ಇವರು ಸ್ಥಳೀಯ ಸಿ.ಸಿ. ಟಿ.ವಿ. ಕ್ಯಾಮರಾಗಳನ್ನು ಪರಿಶೀಲಿಸಿದ್ದು, ನಂತರ ಸ್ಮಾರ್ಟ್ ಸಿಟಿ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ವೀಣಾ ಅವರು ಪ್ರಯಾಣಿಸಿದ ಆಟೋ ನಂಬರ್ ಕೆಎ-17 ಎ- 3569 ಎಂದು ಪತ್ತೆ ಮಾಡಿ ನಂತರ ಆಟೋ ಮತ್ತು ಚಾಲಕ ಬಾಷಾನಗರದ ಮುಕ್ತಿಯಾರ್ ಗೆ ಫೋನ್ ಮಾಡಿ ಠಾಣೆಗೆ ಕರೆಯಿಸಿ ವಿಚಾರಿಸಿದ್ದು , ಆಟೋದಲ್ಲಿ ಬಿಟ್ಟು ಹೋಗಿದ್ದ ಹಣ ಆಭರಣವಿದ್ದ ಬ್ಯಾಗನ್ನು ಸುರಕ್ಷಿತವಾಗಿ ಎತ್ತಿಟ್ಟುಕೊಂಡಿದ್ದನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಬ್ಯಾಗಿನಲ್ಲಿದ್ದ ಹಣ ಹಾಗೂ ಆಭರಣಗಳು ಯತಾಸ್ಥಿತಿಯಲ್ಲಿರುವುದಾಗಿ ವೀಣಾ ತಿಳಿಸಿದ್ದಾರೆ.



