Connect with us

Dvgsuddi Kannada | online news portal | Kannada news online

ದಾವಣಗೆರೆ: ಗೌರಿಪುರ ಗ್ರಾಮದಲ್ಲಿ ತಂದೆ,‌ ಮಗನಿಗೆ ಚಾಕು ಇರಿತ; ಗ್ರಾಮದಲ್ಲಿ ಬಿಗುವಿನ ವಾತಾವರಣ

IMG 20231220 165011

ದಾವಣಗೆರೆ

ದಾವಣಗೆರೆ: ಗೌರಿಪುರ ಗ್ರಾಮದಲ್ಲಿ ತಂದೆ,‌ ಮಗನಿಗೆ ಚಾಕು ಇರಿತ; ಗ್ರಾಮದಲ್ಲಿ ಬಿಗುವಿನ ವಾತಾವರಣ

ದಾವಣಗೆರೆ: ಗೌರಿಪುರ ಗ್ರಾಮದಲ್ಲಿ ತಂದೆ,‌ ಮಗನಿಗೆ ಚಾಕು ಇರಿತ; ಗ್ರಾಮದಲ್ಲಿ ಬಿಗುವಿನ ವಾತಾವರಣದಾವಣಗೆರೆ; ಜಿಲ್ಲೆಯ ಜಗಳೂರು ತಾಲ್ಲೂಕಿನ ಗೌರಿಪುರ ಗ್ರಾಮದ ಚಂದ್ರಪ್ಪ ಮತ್ತು ಅವರ ಪುತ್ರ ಹೇಮಂತ್‌ ಎಂಬುವವರಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ ಘಟನೆ ನಡೆದಿದೆ. ಈ ಘಟನೆ ಹಿನ್ನಲೆ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಕಳೆದ ವರ್ಷ ತಾಲೂಕಿನ ಹೊಸಕೆರೆ ಗಾಮದ ಮಾಯಮ್ಮ‌ ಡಾಬಾದಲ್ಲಿ ಗೌರಿಪುರ ಗ್ರಾಮದ ರಾಮಕೃಷ್ಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಕೊಲೆ ಆರೋಪಿ ಧನ್ಯಕುಮಾರ್‌ಗೆ ಜಾಮೀನು ಪಡೆಯಲು ಸಹಕಾರ ನೀಡುತ್ತಿದ್ದಾರೆಂಬ ಅನುಮಾನದಿಂದ ಕೊಲೆಯಾಗಿದ್ದ ರಾಮಕೃಷ್ಣನ ಸಹೋದರ ಹಾಲಸ್ವಾಮಿ, ಗ್ರಾಮದ ಧನ್ಯ ಕುಮಾರ್‌ ಸಂಬಂಧಿ ಚಂದ್ರಪ್ಪ ಮತ್ತು ಅವರ ಪುತ್ರ ಹೇಮಂತ್‌ ಎಂಬುವವರಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ ಘಟನೆ ನಡೆದಿದೆ.

ಕಳೆದ ವರ್ಷ ಕ್ಯಾಸೆನಹಳ್ಳಿ ಗ್ರಾಪಂನಲ್ಲಿ ನರೇಗಾ
ಕಾಮಗಾರಿಯಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿ ಹೊಸಕೆರೆ‌ ಗ್ರಾಮದ ಮಾಯಮ್ಮ ಡಾಬಾದಲ್ಲಿ ರಾಮಕೃಷ್ಣ ಎಂಬ ಯುವಕನ ಕೊಲೆ ನಡೆದಿತ್ತು. ಈ ಪ್ರಕರಣದ ಆರೋಪಿಗಳಾದ ಪಿಡಿಒ ಎ.ಟಿ.ನಾಗರಾಜ್ ಹಾಗೂ ಅವರ ಸಹೋದರ ಎ.ಟಿ.ಪ್ರಭು ಮತ್ತು ಧನ್ಯಕುಮಾರ್‌ ಸೇರಿ ಇತರರ ಮೇಲೆ ಪ್ರಕರಣ ದಾಖಲಿಸಲಾಗಿತು. ಆರೋಪಿ ದನ ಕುಮಾರ್‌ಜಾಮೀನು ಪಡೆಯಲು ಸಹಕಾರ ನೀಡುತ್ತಿದ್ದಾರೆಂದು ರಾಮಕೃಷ್ಣ ಸಹೋದರ ಹಾಲಸ್ವಾಮಿಚಂದ್ರಪ್ಪ ಮತ್ತು ಅವರ ಪುತ್ರ ಹೇಮಂತ್ ಜೊತೆ ಜಗಳ ನಡೆದಿತ್ತು. ಮನೆ ಬಳಿ ಬಂದು ಚಾಕುವಿನಿಂದ ತಂದೆ, ಮಗನ ಬೆನ್ನು, ಎದೆಗೆ ಇರಿದಿದ್ದಾನೆ.

ರಕ್ಷಿಸಿಕೊಳ್ಳಲು ಬಡಿಗೆಗಳ ಹಿಡಿದು ಬೆನ್ನು ಹತ್ತಿದ ಚಂದ್ರಪ್ಪ ಮತ್ತು ಹೇಮಂತ್, ಅವರಿಂದ ತಪ್ಪಿಸಿಕೊಳ್ಳಲು ಹೋದ ಹಾಲಸ್ವಾಮಿ ನಿಂತಿದ್ದ ಟ್ರಯಾಕ್ಟರ್‌ ನುಗ್ಗುವಾಗ ಕಬ್ಬಿಣ ತಲೆಗೆ ಬಡಿದು ಬಲವಾದ ಪೆಟ್ಟು ಬಿದ್ದಿರುವ ಹಾಲಸ್ವಾಮಿ ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಪ್ರಕರಣ ಸಂಬಂಧ ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿವೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top