Connect with us

Dvgsuddi Kannada | online news portal | Kannada news online

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ-48ರಲ್ಲಿ ದರೋಡೆ ಮಾಡುತ್ತಿದ್ದ ಐದು ಆರೋಪಿಗಳ ಬಂಧನ

IMG 20231107 201756

ದಾವಣಗೆರೆ

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ-48ರಲ್ಲಿ ದರೋಡೆ ಮಾಡುತ್ತಿದ್ದ ಐದು ಆರೋಪಿಗಳ ಬಂಧನ

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ದರೋಡೆ ಮಾಡುತ್ತಿದ್ದ ಐದು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಗಳಿಂದ ಒಂದು ಆಟೋ, ಒಂದು ಚಾಕು, 5,1000/ರೂ ನಗದು ಹಣ, 20 ಸಾವಿರ ಬೆಲೆ ಬಾಳುವ ಎರಡು ಮೊಬೈಲ್ ವಶಪಡಿಸಲಾಗಿದೆ.

ದರೋಡೆ ಪ್ರಕರಣದ ಆರೋಪಿಗಳಾದ 1) ಕುಮಾರ ಬಿ(26)/ಮೊಬೈಲ್ ಸರ್ವಿಸ್ ಕೆಲಸ, ವಾಸ: ದಾವಣಗೆರೆ, 2) ಮಂಜುನಾಥ ಯು.ಎಸ್ (24), ಆಟೋ ಡ್ರೈವರ್ ಕೆಲಸ, ವಾಸ: ದಾವಣಗೆರೆ,‌ 3) ಪ್ರವೀಣ್ ಕುಮಾರ ಎ.ಬಿ (22) ಡ್ರೈವರ್, ವಾಸ: ಅಣಬೇರು ಗ್ರಾಮ, ದಾವಣಗೆರೆ ತಾಲ್ಲೂಕು 4) ಪರಶುರಾಮ (19), ವಾಸ: ಅಣಬೇರು ಗ್ರಾಮ, ದಾವಣಗೆರೆ ತಾಲ್ಲೂಕು., 5) ಶಿವಕುಮಾರ ಡಿ (21) ವಾಸ: ಬಾಡಾ ಗ್ರಾಮ, ದಾವಣಗೆರೆ ತಾಲ್ಲೂಕು‌ ಇವರುಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಮೇಲ್ಕಂಡ ಆರೋಪಿತರಲ್ಲಿ ಕುಮಾರ, ಮಂಜುನಾಥ, ಪ್ರವೀಣ್ ಕುಮಾರ ಈ ಹಿಂದೆ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದರು. ತುಮಕೂರು ಜಿಲ್ಲೆ,ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾದಿಹಳ್ಳಿ ಗ್ರಾಮದ ವ್ಯಾಪಾರಿ ಸುರೇಶ ಎ.ಎಂ ಸ್ನೇಹಿತರಾದ ಪ್ರದೀಪ ಮತ್ತು ಅಮಿತ್ ಇವರೊಂದಿಗೆ ತಾನು ಖರೀದಿಸಿದ್ದ ಹೊಸ ಮಹೇಂದ್ರ ಜಿತೋ ಪ್ಲಸ್ ಗೂಡ್ಸ್ ವಾಹನಕ್ಕೆ ಬಾಡಿಕಟ್ಟಿಸಿಕೊಂಡು ಬರಲು ಚಿಕ್ಕನಾಯಕನಹಳ್ಳಿಯಿಂದ ರಾಣೆಬೆನ್ನೂರಿಗೆ ಹೋಗುತ್ತಿದ್ದಾಗ ದಾವಣಗೆರೆ ತಾಲ್ಲೂಕು ಆನಗೋಡ ಹತ್ತಿರ ಹೈವೆ ರಸ್ತೆಪಕ್ಕದಲ್ಲಿನ ಸರ್ವೀಸ್ ರಸ್ತೆಯಲ್ಲಿ ಮೂತ್ರ ವಿಸರ್ಜನೆಗೆಂದು ವಾಹನ ನಿಲ್ಲಿಸಿದ್ದರು. ಆಗ ಅಪರಿಚಿತ ಐದಾರು ಜನ ದುಷ್ಕರ್ಮಿಗಳು ಆಟೋವೊಂದರಲ್ಲಿ ಬಂದು ಚಾಕುವನ್ನು ತೋರಿಸಿ 15,000 ರೂ. ನಗದು ಹಣ ಮತ್ತು 20 ಸಾವಿರ ಮೌಲ್ಯದ ಎರಡು ರೆಡ್.ಮಿ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಿದ್ದರು.

ಘಟನಾ ಸ್ಥಳಕ್ಕೆ ಪೊಲೀಸ್ ಅಧೀಕ್ಷಕ ಉಮಾ ಪ್ರಶಾಂತ್ ಭೇಟಿ ನೀಡಿ ಮಾಹಿತಿ ಪಡೆದಿದ್ದರು. ಈ ಪ್ರಕರಣದ ಆರೋಪಿ ಪತ್ತೆಗಾಗಿ ಡಿಸಿಆರ್‌ಬಿ ಡಿವೈಎಸ್ಪಿ ಬಿ ನಾಗಪ್ಪ ಮತ್ತು ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ ಬಿ. ಎಸ್ ನೇತೃತ್ವದಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡ ರಚಿಸಿದ್ದು, ಈ ತಂಡವು ಕಾರ್ಯಾಚರಣ ಆರೋಪಿತರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಕಾರ್ಯಾಚರಣೆ ನಡೆಸಿದ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ ಕುಮಾರ ಎಂ ಸಂತೋಷ ಶ್ಲಾಘಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top