ದಾವಣಗೆರೆ: ವ್ಯಾಪಾರ ನೆಪದಲ್ಲಿ ಸ್ಕ್ಯಾನ್ ಕೋಡ್ ಒತ್ತಿದ್ರೆ ನಮ್ಮ ಹಣ, ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತೆ ಎಂದು ದಾವಣಗೆರೆ ವ್ಯಾಪಾರಿಯೊಬ್ಬರಿಗೆ ನಂಬಿಸಿ ಬರೋಬ್ಬರಿ 97 ಸಾವಿರ ವಂಚನೆ ನಡೆಸಿದ ಘಟನೆ ನಡೆದಿದೆ.
ನಗರದ ಎಂ.ಜಿ.ರಸ್ತೆಯಲ್ಲಿನ ಪ್ಲಾಸ್ಟಿಕ್ ಏಜೆನ್ಸಿ ಮಾಲೀಕ ಅನಿಲ್ಕುಮಾರ್ ಎಸ್.ಜಿ. ವಂಚನೆಗೊಳಗಾದವರು. ಆನ್ಲೈನ್ ಮೂಲಕ 97,215 ವಂಚನೆ ನಡೆದಿದೆ. ಅನಿಲ್ ಕಯಮಾರ್ ಗೆ ಅಪರಿಚಿತನೊಬ್ಬ ಕರೆ ಮಾಡಿ, ರಾಕೇಶ್ ಎಂದು ಪರುಚಯಿಸಿಕೊಂಡಿದ್ದ. ನಂತರ ಕೇಂದ್ರೀಯ ವಿದ್ಯಾಲಯಕ್ಜೆ 40 ಪೀಸ್ ಪ್ಲಾಸ್ಟಿಕ್ ಡ್ರಮ್ ಬೇಕಿದೆ. ನಾವು ಕಳಿಸಿದ ಸ್ಕ್ಯಾನ್ ಕೋಡ್ ಒತ್ತಿದರೆ, ನಿಮ್ಮ ಖಾತೆಗೆ ಹಣ ನಮ್ಮ ಹಣ ವರ್ಗಾಯಿಸುತ್ತೇವೆ ಎಂದು ತಿಳಿಸಿದ್ದ. ಅವನು ಕಳಿಸಿದ ಸ್ಕ್ಯಾನ್ ಕೋಡ್ ಒತ್ತಿದಾಗ ಅನಿಲ್ ಕುಮಾರ್ ಖಾತೆಯಲ್ಲಿದ್ದ 97,215 ಹಣ ಆನ್ ಲೈನ್ ಮೂಲಕ ವಂಚನೆಯಾಗಿರುವುದು ಗೊತ್ತಾಗಿದೆ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



