ದಾವಣಗೆರೆ: ಜೂಜಾಟ ಅಡ್ಡೆ ಮೇಲೆ ಪೊಲೀಸ್ ದಾಳಿ ಮಾಡಿದ್ದು,,18 ಮಂದಿ ವಶಕ್ಕೆ ಪಡೆದು 1.12 ಲಕ್ಷ ನಗದು ಹಣ ಜಪ್ತಿ ಮಾಡಲಾಗಿದೆ. ಜಿಲ್ಲೆ ಹೊನ್ನಾಳ್ಳಿ ತಾಲ್ಲೂಕ್ ಕೂಲಂಬಿ ಗ್ರಾಮದ ಕೂಲಂಬಿ – ಎರೆಚಿಕ್ಕನಹಳ್ಳಿ ಕಡೆಗ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಜೂಜಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ.
ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಒಟ್ಟು 18 ಜನರನ್ನು ಬಂಧಿಸಿದ್ದು, ಜೂಜಾಟದಲ್ಲಿ ತೊಡಗಿಸಿದ್ದ ಒಟ್ಟು 1,12,040 ರೂ. ಮತ್ತು ಮಟ್ಕಾ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಾಲಾಗಿದೆ. ಈ ಸಂಬಂಧ ದಾವಣಗೆರೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ ರವರ ಮಾರ್ಗದರ್ಶನದಂತೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಸಾದ್ ಪಿ ಮತ್ತು ಎ.ಎಸ್.ಐ ಮನ್ಸೂರ್ ಅಹ್ಮದ್, ಹಾಗೂ ಸಿಬ್ಬಂದಿಗಳಾದ ಪ್ರಕಾಶ, ನಾಗರಾಜ್, ಪ್ರಕಾಶ್ ರಾವ್, ಗೋವಿಂದರಾಜ್, ಮಾರುತಿ, ಅಂಜಿನಪ್ಪ, ಮಂಜುನಾಥ ಮಠೋಳಿ, ಮುತ್ತುರಾಜ್, ಮೌನೇಶ್ ರವರೊನ್ನೊಳಗೊಂಡ ತಂಡ ದಾಳಿ ಮಾಡಿತ್ತು. ದಾಳಿಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆಪೊಲೀಸ್ ಅಧೀಕ್ಷಕರವರಾದ ಉಮಾ ಪ್ರಶಾಂತ್ ರವರು ಪ್ರಶಂಸಿದ್ದಾರೆ.



