ದಾವಣಗೆರೆ: ನಗರದ ಆಂಜನೇಯ ಬಡಾವಣೆ ಮನೆಯೊಂದರಲ್ಲಿ ಕಳ್ಳರು ಭರ್ಜರಿ ಬೇಟೆಯಾಡಿದ್ದಾರೆ. ಕಾರು, ನಗದು, ಚಿನ್ನ ಸೇರಿ ಬರೋಬ್ಬರಿ 29 ಲಕ್ಷ ಮೌಲ್ಯದ ಸ್ವತ್ತು ದೋಚಿ ಪರಾರಿಯಾಗಿದ್ದಾರೆ. ಕಾರು, ನಗದು, 12 ರೇಷ್ಮೆ ಸೀರೆ, ಬಂಗಾರ, ಬೆಳ್ಳಿ ಆಭರಣಗಳು ಸೇರಿದಂತೆ 29 ಲಕ್ಷ ಮೌಲ್ಯದ ವಸ್ತುಗಳು ಕಳ್ಳತವಾಗಿವೆ.
ಬೆಂಗಳೂರಿನಲ್ಲಿ ಕಂದಾಯ ಅಧಿಕಾರಿಯಾಗಿಯಾದ ಎಂ.ಎನ್. ಜೀವಣ್ಣ ಅವರ ಆಂಜನೇಯ ಬಡಾವಣೆಯ ಮನೆಯಲ್ಲಿ ಕಳ್ಳತನವಾಗಿದೆ. ಒಂದು ವರ್ಷದ ಹಿಂದೆ ಜೀವಣ್ಣ ಅವರಿಗೆ ಬೆಂಗಳೂರಿಗೆ ವರ್ಗವಾಗಿತ್ತು. ಅವರ ಪುತ್ರ ಪ್ರತೀಕ್ ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿದ್ದು, ಹೀಗಾಗಿ ಆಂಜನೇಯ ಬಡಾವಣೆಯಲ್ಲಿಯೇ ನೆಲೆಸಿದ್ದರು.
ಆ.18ರಂದು ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹೋಗಿದ್ದು, ಆಗಸ್ಟ್ 20ರಂದು ವಾಪಸ್ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ.ಮನೆಯ ಹೊರಗಡೆ ನಿಂತಿದ್ದ 13 ಲಕ್ಷ ಮೌಲ್ಯದ ಮಾರುತಿ ಸುಜುಕಿ ಬ್ರೆಜಾ ಕಾರು, ಮನೆಯ ಬೀರುವಿನ ಬೀಗ ಮುರಿದು 1,75,000 ನಗದು ಹಾಗೂ 12 ರೇಷ್ಮೆ ಸೀರೆಗಳು, ಬಂಗಾರ, ಬೆಳ್ಳಿ ಆಭರಣಗಳು ಸೇರಿದಂತೆ 29 ಲಕ್ಷ ಮೌಲ್ಯದ ವಸ್ತುಗಳು ಕಳ್ಳತನವಾಗಿದೆ. ಈ ಬಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



