Connect with us

Dvgsuddi Kannada | online news portal | Kannada news online

ದಾವಣಗೆರೆ: 8 ಕಿ.ಮೀ. ಕ್ರಮಿಸಿ ಯುವಕನ ಕೊಲೆ ಆರೋಪಿ ಪತ್ತೆ ಮಾಡಿದ ಶ್ವಾನ ತಾರಾ

ದಾವಣಗೆರೆ

ದಾವಣಗೆರೆ: 8 ಕಿ.ಮೀ. ಕ್ರಮಿಸಿ ಯುವಕನ ಕೊಲೆ ಆರೋಪಿ ಪತ್ತೆ ಮಾಡಿದ ಶ್ವಾನ ತಾರಾ

ದಾವಣಗೆರೆ: ಯುವಕನ ಕೊಲೆ ಪ್ರಕರಣದ ಆರೋಪಿ ಪತ್ತೆಗಾಗಿ 8 ಕಿ.ಮೀ. ಕ್ರಮಿಸಿದ ಜಿಲ್ಲಾ ಡಾಗ್ ಸ್ಟಾಡ್‌ ಕೈಂ ವಿಭಾಗದ “ತಾರಾ” ಶ್ವಾನ ಆರೋಪಿ ಪತ್ತೆ ಮಾಡಿದೆ.

ಶ್ರೀರಾಮನಗರ ನಿವಾಸಿ ನರಸಿಂಹ (26) ಎಂಬ ಯುವಕನನ್ನು ಮಲ್ಲಶೆಟ್ಟಿಹಳ್ಳಿ ಹತ್ತಿರ ಎನ್.ಹೆಚ್-48 ರಸ್ತೆಯ ಸರ್ವಿಸ್ ರಸ್ತೆಯಲ್ಲಿ ‌ಕೊಲೆ ನಡೆದಿತ್ತು. ತಲೆಗೆ ಯಾರೋ ಬಲವಾಗಿ ಹೊಡೆದು ಕೊಲೆ ಮಾಡಿದ್ದರು. ಆರೋಪಿ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ಆರೋಪಿ‌ ಪತ್ತೆಗಾಗಿ ಹೆಚ್ಚುವರಿ ಎಸ್ಪಿ ರಾಮಗೊಂಡ ಬಸರಗಿ, ಡಿವೈಎಸ್ ಪಿ ಬಸವರಾಜ್‌ ಬಿ ಎಸ್ ಮಾರ್ಗದರ್ಶನದಲ್ಲಿ ಪೊಲೀಸ್‌ ನಿರೀಕ್ಷಕ ಕಿರಣ್‌ ಕುಮಾರ್, ಇ. ವೈ ನೇತೃತ್ವದಲ್ಲಿ ಆರೋಪಿತರ ಪತ್ತೆಕಾರ್ಯಕ್ಕೆ ಪಿಎಸ್‌ಐ ಹಾರೂನ್ ಅಖರ್ ನೇತೃತ್ವದ ಪೊಲೀಸ್ ತಂಡ ಹಾಗೂ ದಾವಣಗೆರೆ ಜಿಲ್ಲಾ ಡಾಗ್ ಸ್ಟಾಡ್‌ ಕೈಂ ವಿಭಾಗದ “ತಾರಾ”ಶ್ವಾನವು ಸುಮಾರು 08 ಕಿ.ಮೀ ಕ್ರಮಿಸಿ ಆರೋಪಿತರ ಗುರುತು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತದೆ.

ಕೊಲೆ ಪ್ರಕರಣದ ಆರೋಪಿ ಶ್ರೀರಾಮನಗರ ನಿವಾಸಿ ಶಿವಯೋಗಿ @ಯೋಗಿ (32) ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆ ಮಾಡಿದ್ದಾಗ ತನ್ನ ಬಳಿ ನರಸಿಂಹ 35,000/-ರೂಗಳನ್ನು ಕೆಲಸದ ಅಡ್ವಾನ್ಸ್ ಆಗಿ ತೆಗೆದುಕೊಂಡು ಕೆಲಸಕ್ಕೂ ಬಾರದೇ ವಾಪಾಸ್ ಹಣವನ್ನು ಕೊಡದೆ ಸತಾಯಿಸುತ್ತಿದ್ದರಿಂದಲೂ ಮತ್ತು ಅವನ ಮೇಲೆ ನಾವು ದಾವಣಗೆರೆ ವಿದ್ಯಾನಗರ ಸ್ಟೇಷನ್ ನಲ್ಲಿ ಕೇಸು ಮಾಡಿದ್ದರಿಂದ ಜೈಲಿಗೆ ಹೋಗಿ ಬಂದ ಸಿಟ್ಟಿನಿಂದಲೂ ನಮ್ಮ ಮೇಲೆ ದ್ವೇಷ ಸಾಧಿಸುತ್ತಿದ್ದರಿಂದ ಹಾಗೂ ಇವನನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ಅವನು ನನ್ನನ್ನು ಕೊಲೆ ಮಾಡುವ ಭಯದಿಂದ ನರಸಿಂಹನನ್ನು ದಿನಾಂಕ: 06-08-2023 ರಂದು ರಾತ್ರಿ 10:00 ಗಂಟೆಗೆ ಎನ್.ಹೆಚ್-48 ರಸ್ತೆ ಪಕ್ಕದ ಮಲ್ಲಶೆಟ್ಟಿಹಳ್ಳಿ ಬಾಪೂಜಿ ಬಡಾವಣೆ ಸರ್ವಿಸ್ ರಸ್ತೆ ಪಕ್ಕದಲ್ಲಿ ಕಟ್ಟಿಗೆ ಕಣಿಗೆಯಿಂದ ನರಸಿಂಹನ ಕಿವಿ, ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿರುತ್ತೇನೆಂದು ತಪ್ಪೋಪಿಕೊಂಡಿದ್ದಾನೆ. ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಡಾ. ಅರುಣ್ ಕೆ ಶ್ಲಾಘಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top