ದಾವಣಗೆರೆ: ಹಣಕಾಸಿನ ವಿಚಾರಕ್ಕೆ ಇಬ್ಬರು ಯುವಕರ ನಡುವೆ ಹಳೇ ಜಗಳ ನಡೆಯಿತ್ತಿತ್ತು ಇದೀಗ ಜಗಳ ವಿಕೋಪಕ್ಕೆ ಯುವಕನ ಕೊಲೆಯಾಗಿದೆ. ಕೋಲಿನಿಂದ ಹೊಡೆದು ಯುವಕನನ್ನ ಕೊಲೆ ಮಾಡಲಾಗಿದೆ. ಈ ಘಟನೆ ದಾವಣಗೆರೆ ತಾಲೂಕಿನ ಮಲ್ಲಶೆಟ್ಟಿಹಳ್ಳಿಯ ಕ್ರಾಸ್ ಬಳಿ ನಡೆದಿದೆ.
ತಾಲೂಕಿನ ರಾಮನಗರ ನಿವಾಸಿ ನರಸಿಂಹ(26) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ರಾಮನಗರದ ನಿವಾಸಿಯೇ ಆಗಿರುವ ಆರೋಪಿ ಶಿವಯೋಗೀಶ್ ಮಧ್ಯೆ ಹಣಕಾಸು ವಿಚಾರವಾಗಿ ಈ ಹಿಂದೆ ಜಗಳವಾಗಿತ್ತು. ಶಿವಯೋಗೀಶನ ಮೇಲೆ ಮೃತ ನರಸಿಂಹ ಮಚ್ಚಿನಿಂದ ದಾಳಿ ಮಾಡಿ ಜೈಲು ಸೇರಿದ್ದನು. ಇದೀಗ ಜೈಲಿನಿಂದ ಬಿಡುಗಡೆಯಾದ ಕೆಲ ದಿನಗಳಲ್ಲಿಯೇ ನರಸಿಂಹನನ್ನ ಕೊಲೆ ಮಾಡಿದ್ದಾನೆ. ಈ ಕುರಿತು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



