Connect with us

Dvgsuddi Kannada | online news portal | Kannada news online

ದಾವಣಗೆರೆ; ಕಡಿಮೆ ಬೆಲೆಗೆ ಬಂಗಾರ ಕೊಡುವುದಾಗಿ ನಂಬಿಸಿ, ನಕಲಿ ಬಂಗಾರ ನೀಡಿ ವೃದ್ಧೆಗೆ ವಂಚನೆ‌

ದಾವಣಗೆರೆ

ದಾವಣಗೆರೆ; ಕಡಿಮೆ ಬೆಲೆಗೆ ಬಂಗಾರ ಕೊಡುವುದಾಗಿ ನಂಬಿಸಿ, ನಕಲಿ ಬಂಗಾರ ನೀಡಿ ವೃದ್ಧೆಗೆ ವಂಚನೆ‌

ದಾವಣಗೆರೆ: ಕಡಿಮೆ ಬೆಲೆಗೆ 3.50 ಲಕ್ಷ ಮೌಲ್ಯದ ಬಂಗಾರ ಕೊಡುವುದಾಗಿ ನಂಬಿಸಿ ವೃದ್ಧೆಯಿಂದ 80 ಸಾವಿರ ಮೌಲ್ಯದ ಬಂಗಾರದ ಆಭರಣ ಹಾಗೂ 10,000 ನಗದು ಪಡೆದು, ನಕಲಿ ಬಂಗಾರ ನೀಡಿ ವಂಚನೆ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ನಗರದ ಕೈಗಾರಿಕಾ ಪ್ರದೇಶದ ನಿವಾಸಿ ಸುಮಾ (62) ವಂಚನೆಗೊಳಗಾದ ವೃದ್ಧೆಯಾಗಿದ್ದಾರೆ. ಜೂನ್‌ 8ರಂದು ರಸ್ತೆಯಲ್ಲಿ ಹೋಗುತ್ತಿದ್ದ ವೃದ್ಧೆಯನ್ನುವ ಅಪರಿಚಿತ ಮಹಿಳೆ ಸಂಪರ್ಕಿಸಿದ್ದಾಳೆ. ತನ್ನ ಬಳಿ 12 ಬಂಗಾರದ ಕಾಸು, 12 ಬಂಗಾರದ ಕೋವಿ, 2 ಕಿವಿ ಓಲೆಗಳಿವೆ. ಅವುಗಳ ಒಟ್ಟು ಬೆಲೆ 3,50,000 ರೂಪಾಯಿ. ನೀನು ಬಡವಿ, ನಿನಗೆ ಕಡಿಮೆ ದರದಲ್ಲಿ ಬಂಗಾರ ಕೊಡುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ.

ಆ ಮಹಿಳೆ ಮಾತು ನಂಬಿದ ವೃದ್ಧೆ, ಬಂಗಾರಕ್ಕೆ ಆಸೆ ಬಿದ್ದು ತನ್ನ ಬಳಿ ಇದ್ದ ಬಂಗಾರದ ಕಿವಿ ಓಲೆ, ಬಂಗಾರದ ಸರದ ಜೊತೆಗೆ 10,000 ನಗದನ್ನೂ ನೀಡಿದ್ದಾರೆ. ಪ್ರತಿಯಾಗಿ ಮಹಿಳೆಯಿಂದ ಪಡೆದಿದ್ದ ಚಿನ್ನ ನಕಲಿ ಎಂದು ಮರು ದಿನ ಗೊತ್ತಾಗಿದೆ. ಈ ಬಗ್ಗೆ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top