Connect with us

Dvgsuddi Kannada | online news portal | Kannada news online

ದಾವಣಗೆರೆ; ವಿನೋಬ ನಗರದಲ್ಲಿ ಕಾನೂನು ಬಾಹಿರ ಕೇರಂ ಜೂಜಾಟ; 20 ಆರೋಪಿಗಳ ಬಂಧನ;1.60 ಲಕ್ಷ ವಶ

crime sym

ದಾವಣಗೆರೆ

ದಾವಣಗೆರೆ; ವಿನೋಬ ನಗರದಲ್ಲಿ ಕಾನೂನು ಬಾಹಿರ ಕೇರಂ ಜೂಜಾಟ; 20 ಆರೋಪಿಗಳ ಬಂಧನ;1.60 ಲಕ್ಷ ವಶ

ದಾವಣಗೆರೆ; ವಿನೋಬ ನಗರದಲ್ಲಿ ಕಾನೂನು ಬಾಹಿರವಾಗಿ ಕೇರಂ ಜೂಜಾಟ ಆಡುತ್ತಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ ಮಾಡಿದ್ದು, 20 ಆರೋಪಿಗಳ ಬಂಧನ ಮಾಡಿ 1.60 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.

ದಾವಣಗೆರೆ ನಗರದ ವಿನೋಭ ನಗರ 2ನೇ ಮೇನ್, 14ನೇ ಕ್ರಾಸ್ ನಲ್ಲಿ ಮೊದಲನೇ ಮಹಡಿನಲ್ಲಿರುವ ಕೋಣೆಯಲ್ಲಿ ಗಿರೀಶ ವೈಎಂ ಮತ್ತು ಇತರರು ಸೇರಿಕೊಂಡು ಕೇರಂ ಕ್ಲಬ್ ನಲ್ಲಿ ಕಾನೂನು ಬಾಹಿರವಾಗಿ ಹಣವನ್ನು  ಕಟ್ಟಿಕೊಂಡು ಕೇರಂಜೂಜಾಟವಾಡುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ಡಿವೈಎಸ್ ಪಿ ಮಲ್ಲೇಶ್ ದೊಡ್ಡನಿಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಧನಂಜಯ್, ಪಿಎಸ್ ಐ ದೀಪು ಎಂ.ಟಿ, ಸಿಬ್ಬಂದಿಗಳಾದ ಸಂತೋಷ, ಕೆಂಚಪ್ಪ ದಾಳಿ‌ ಮಾಡಿದ್ದು ಸ್ಥಳದಲ್ಲಿ ಗಿರೀಶ್ ವೈಎಂ ಮತ್ತು ಇತರೆ 19 ಜನ ಆರೋಪಿತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿತರಿಂದ 1,60,000/- ರೂ ನಗದು ಹಣ, 4 ಕೇರಂ ಬೋರ್ಡ್ ಗಳು ಮತ್ತು ಆಟದ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಕಾರ್ಯಾಚರಣೆ ಯಲ್ಲಿ ಭಾಗಿಯಾದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಎಸ್ಪಿ ಸಿ.ಬಿ.ರಿಷ್ಯಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top