ದಾವಣಗೆರೆ: ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕದಕಟ್ಟೆ ರಸ್ತೆಯ ಕೆ.ಇ.ಬಿ ಸರ್ಕಲ್ ನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳಾದ. 1) ಹರ್ಷ ಜೆ (25) ಚಿಕ್ಕಬಾಸೂರು ತಾಂಡಾ , 2) ವೆಂಕಟೇಶ ಎಸ್ ( 31) 03 ನೇ ಕ್ರಾಸ್, ದುರ್ಗಿಗುಡಿ, ಹೊನ್ನಾಳಿ ಟೌನ್ 3) ಯಶವಂತ (19) ಚಿಕ್ಕಬಾಸೂರು ತಾಂಡಾದವರಾಗಿದ್ದಾರೆ. ದಾಳಿಯಲ್ಲಿ ಸುಮಾರು 5,000/- ರೂ ಮೌಲ್ಯದ 105 ಗ್ರಾಂ ಗಾಂಜಾವನ್ನು ವಶಪಡಿಸಿಕಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.
ದಿನಾಂಕ 27/02/2023 ರಂದು ಬೆಳಿಗ್ಗೆ ಹೊನ್ನಾಳಿ ಟೌನ್ ನ ಸುಂಕದಕಟ್ಟೆ ರಸ್ತೆಯ ಕೆ.ಇ.ಬಿ ಸರ್ಕಲ್ ನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಅಂತ ಖಚಿತ ಮಾಹಿತಿ ಮೇರೆಗೆ ಡಾ. ಸಂತೋಷ್, ಕೆ.ಎಂ, ಪೊಲೀಸ್ ಉಪಾಧೀಕ್ಷಕರು, ಚನ್ನಗಿರಿ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಸಿದ್ದೇಗೌಡ ಹೆಚ್.ಎಂ ಪೊಲೀಸ್ ನಿರೀಕ್ಷಕರು, ಹೊನ್ನಾಳಿ ಪೊಲೀಸ್ ಠಾಣೆ, ಶಿವಕುಮಾರ್ ಪಿ.ಎಸ್.ಐ ಹೊನ್ನಾಳಿ ಪೊಲೀಸ್ ಠಾಣೆ ಮತ್ತು ಸಿಬ್ಬಂದಿ ದಾಳಿ ಮಾಡಲಾಗಿತ್ತು. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



