ದಾಚಣಗೆರೆ: ಬೇಯಿಸಿ ಒಣ ಹಾಕಿದ್ದ 3 ಕ್ವಿಂಟಾಲ್ ಅಡಿಕೆ ಕಳ್ಳತನವಾದ ಘಟನೆ ನಗರದ ಶಾಮನೂರು ಗ್ರಾಮದಲ್ಲಿ ನಡೆದಿದೆ. ಶಾಮನೂರು ಗ್ರಾಮದ ಕಿರಣ್ ಅವರು ತಮ್ಮ ಹೊಲದಲ್ಲಿ ಬೇಯಿಸಿದ ಅಡಿಕೆ ಒಣ ಹಾಕಿದ್ದರು. ಕಳ್ಳರು ಒಣ ಹಾಕಿದ್ದ ಅಡಿಕೆಯನ್ನು ಕದ್ದಿದ್ದು, ಒಟ್ಟು 1.50 ಲಕ್ಷ ಮೌಲ್ಯದ 3 ಕ್ವಿಂಟಾಲ್ ಅಡಿಕೆ ಕಳವು ಮಾಡಿದ್ದಾರೆ. ಅಡಿಕೆ ಬೆಲೆ ಪ್ರತಿ ಕ್ವಿಂಟಾಲ್ ಗೆ 45 ಸಾವಿರದಿಂದ 50 ಸಾವಿರದ ವರೆಗೆ ದರವಿದ್ದು, ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಈ ಬಗ್ಗೆ ರೈತರು ಎಷ್ಟೇ ಜಾಗೃಕತೆಯಿಂದ ಇದ್ದರೂ ಅಡಿಕೆ ಕಳ್ಳತನವಾಗುತ್ತಿವೆ. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆ: ಬೇಯಿಸಿ ಒಣ ಹಾಕಿದ್ದ 3 ಕ್ವಿಂಟಾಲ್ ಅಡಿಕೆ ಕಳವು
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ...
Editor: munikondajji, MA journalism, contact number:7483892205, e-mail: dvgsuddi@gmail.com
Leave a Comment



