Connect with us

Dvgsuddi Kannada | online news portal | Kannada news online

ಮೀಟರ್ ಬಡ್ಡಿ ದಂಧೆ : 20 ಸಾವಿರಕ್ಕೆ 94 ಸಾವಿರ ಬಡ್ಡಿ ವಸೂಲಿ ಮಾಡಿದ ವ್ಯಕ್ತಿ ಬಂಧನ

crime sym

ದಾವಣಗೆರೆ

ಮೀಟರ್ ಬಡ್ಡಿ ದಂಧೆ : 20 ಸಾವಿರಕ್ಕೆ 94 ಸಾವಿರ ಬಡ್ಡಿ ವಸೂಲಿ ಮಾಡಿದ ವ್ಯಕ್ತಿ ಬಂಧನ

ದಾವಣಗೆರೆ: ನಗರದ ಆಜಾದ್ ನಗರ ಠಾಣೆ ವ್ಯಾಪ್ತಿಯಲ್ಲಿ ಮೀಟರ್ ಬಡ್ಡಿ ದಂಧೆಯಲ್ಲು ತೋಡಗಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಚಂದ್ರನಾಯ್ಕ್ ಬಂಧಿತ ಆರೋಪಿಯಾಗಿದ್ದಾನೆ.

ದೂರುದಾರ ಮಹಿಳೆಯ ಪುತ್ರರೊಬ್ಬರು ಚಂದ್ರನಾಯ್ಕ್‌ನಿಂದ 2021ರ ಡಿಸೆಂಬರ್‌ನಲ್ಲಿ 20,000 ಸಾಲ ಪಡೆದಿದ್ದು, ವಾರಕ್ಕೆ 2,000 ಬಡ್ಡಿ ಕೊಡಲು ಒಪ್ಪಂದವಾಗಿತ್ತು. 2021 ಡಿಸೆಂಬರ್ ತಿಂಗಳಿನಿಂದ 2022ರ ನವೆಂಬರ್‌ವರೆಗೆ 94,000 ಬಡ್ಡಿ ಕಟ್ಟಿದ್ದರು. ಈ ಬಗ್ಗೆ ದೂರು ದಾಖಲಿಸಿದ್ದರು. ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದ ಲೆಕ್ಕದ ಪುಸ್ತಕ, ಎರಡು ಡೈಲಿ ಕಲೆಕ್ಷನ್ ಪುಸ್ತಕಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಚಂದ್ರನಾಯ್ಕ್ ಬಡ್ಡಿ ಹಣ ಕೇಳಲು ಹೋದಾಗ ಇಬ್ಬರ ನಡುವೆ ಜಗಳ ನಡೆದಿದೆ. ಆ ವೇಳೆ ಚಂದ್ರನಾಯ್ಕ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ. ಆಜಾದ್ ನಗರ ಠಾಣೆಯಲ್ಲಿ ಮಗಿಳೆ ದೂರು ದಾಖಲಿಸಿದ್ದರು.ಡಿವೈಎಸ್‌ಪಿ ನರಸಿಂಹ ವಿ. ತಾಮ್ರಧ್ವಜ, ಸಿಪಿಐ ಗಜೇಂದ್ರಪ್ಪ ಅವರ ಮಾರ್ಗದರ್ಶನದಲ್ಲಿ ಅಜಾದ್‌ ನಗರ ಠಾಣೆಯ ಪಿಎಸ್‌ಐ ತಿಪ್ಪೇಸ್ವಾಮಿ ಅವರು ನ್ಯಾಯಾಲಯದಿಂದ ಮನೆ ಶೋಧನಾ ವಾರೆಂಟ್ ಪಡೆದು ಠಾಣೆಯ ಎಎಸ್‌ಐ ಷಂಶುದ್ದಿನ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು. ಪೊಲೀಸರ ಈ ಕಾರ್ಯಾಚರಣೆಯನ್ನು ಎಸ್‌ಪಿ ಸಿ.ಬಿ.ರಿಷ್ಯಂತ್, ಎಎಸ್‌ಪಿ ರಾಮಗೊಂಡ ಬಿ. ಬಸರಗಿ ಶ್ಲಾಘಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top