ದಾವಣಗೆರೆ: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 93 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದ ಬಂಬೂಬಜಾರ್ ನ ವಿನಾಯಕ ಚಿತ್ರಮಂದಿರ ಬಳಿ ಅಕ್ರಮವಾಗಿ ಸಾಗಿಸಲು ಯತ್ನಿಸಿದ ವೇಳೆ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ವೇಳೆ 1,40,250 ರೂಪಾಯಿ ಮೌಲ್ಯದ 93 ಕ್ವಿಂಟಾಲ್ ಅಕ್ಕಿ, ಲಾರಿ , 186 ಖಾಲಿ ಗೋಣಿ ಚೀಲ ಹಾಗೂ ಎಲೆಕ್ಟ್ರಿಕ್ ತೂಕದ ಯಂತ್ರ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಡಿವೈಎಸ್ ಪಿ ನರಸಿಂಹ ವಿ. ತಾಮ್ರಧ್ವಜ ,ಸಿಪಿಐ ಗಜೇಂದ್ರಪ್ಪ, ಪಿಎಸ್ ಐಗಳಾದ ತಿಪ್ಪೇಸ್ವಾಮಿ, ಜಿ.ನಾಗರಾಜ, ಪ್ರವೀಣ್ ಹಾಗೂ ಸಿಬ್ಬಂದಿ ಮತ್ತು ಆಹಾರ ನಿರೀಕ್ಷಕಿ ಶಬಾನ ಪರ್ವೀನ್ ದಾಳಿಯಲ್ಲಿ ಭಾಗವಹಿಸಿದ್ದರು.



