ದಾವಣಗೆರೆ:ಆಟೋದಲ್ಲಿ ಬಿಟ್ಟು ಹೋಗಿದ್ದ ಬಂಗಾರ, ನಗದು ಪತ್ತೆ ಹಚ್ಚಿ ದಂಪತಿಗಳಿಗೆ ದಾವಣಗೆರೆ ಪೊಲೀಸರು ಹಿಂತಿರುಗಿಸಿದ್ದಾರೆ.
ದಾವಣಗೆರೆ ತಾಲ್ಲೂಕು ಮಲಶೆಟ್ಟಿಹಳ್ಳಿ ಗ್ರಾಮದ ಚಂದ್ರಮ್ಮ, ಹನುಮಂತಪ್ಪ ದಂಪತಿಗಳು ದಾವಣಗೆರೆಗೆ ಬಂದು ಸಂಜೆ 4.30 ಗಂಟೆ ಸಮಯದಲ್ಲಿ ಮಲ್ಲಶೆಟ್ಟಿಹಳ್ಳಿ ಗ್ರಾಮಕ್ಕೆ ಹೋಗಲು ಪಿಬಿ ರಸ್ತೆ ಎಂ ಜಿ ಸರ್ಕಲ್ ನಿಂದ ಆಟೋ ಹತ್ತಿದ್ದು, ದಂಪತಿಗಳು ಕೆ ಎಸ್ ಆರ್ ಟಿ ಸಿ ಬಳಿ ಆಟೋ ಇಳಿಯುವಾಗ ಬಂಗಾರದ ಒಡವೆ ಹಾಗು ನಗದು ಹಣವಿದ್ದ ಪರ್ಸ್ ನ್ನು ಆಟೋದಲ್ಲಿಯೇ ಮರೆತು ಬಿಟ್ಟು ಇಳಿದಿದ್ದರು. ನಂತರ ಪರ್ಸ್ ಕಳೆದು ಹೋದ ಬಗ್ಗೆ ಕೆ ಟಿ ಜೆ ನಗರ ಠಾಣೆಗೆ ಬಂದು ದೂರು ನೀಡಿದ್ದರು.
ಕೂಡಲೇ ಕಾರ್ಯ ಪ್ರವೃತ್ತರಾದ ಕೆಟಿಜೆ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಆಟೋ ಚಾಲಕನನ್ನು ಪತ್ತೆ ಮಾಡಿ ಕಳೆದು ಹೋದ ಎರಡು ಜೊತೆ ಬಂಗಾರದ ಹ್ಯಾಂಗಿಂಗ್ಸ್ ಹಾಗು 5 ಸಾವಿರ ರೂ ನಗದು ಹಣವನ್ನು ವಶಡಿಸಿಕೊಂಡು, ಸದರಿ ಸ್ವತ್ತನ್ನು ಸಂಬಂಧಿಸಿದವರಿಗೆ ಹಿಂದಿರುಗಿಸಿರುತ್ತಾರೆ. ಈ ಕಾರ್ಯವನ್ನು ದಾವಣಗೆರೆ ನಗರ ಉಪ ವಿಭಾಗದ ಡಿ ವ್ಯೆ ಎಸ್ ಪಿ ತಾಮ್ರ ಧ್ವಜರವರು ಶ್ಲಾಘಿಸಿ ಕಳೆದು ಕೊಂಡ ನಗದು ಹಣ ಬಂಗಾರದ ಒಡವೆಗಳು ಇದ್ದ ಪರ್ಸ್ ನ್ನು ಹಿಂದಿರಿಗಿಸಿರುತ್ತಾರೆ.
ಈ ಸಮಯದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯ ಪಿ ಎಸ್ ಐ ಪ್ರಭು ಡಿ ಕೆಳಗಿನಮನಿ ರವರು ಹಾಗು ಸಿಬ್ಬಂದಿ ಮಂಜಪ್ಪ ಎಂ ರವರು ಇದ್ದರು. ಸಾರ್ವಜನಿಕರು ಸಾರ್ವಜನಿಕ ಸ್ಥಳದಲ್ಲಿ ಏನಾದರೂ ಬೆಲೆ ಬಾಳುವ ವಸ್ತು ಸಿಕ್ಕಲ್ಲಿ ಸಂಬಂಧಿಸಿದ ಪೊಲೀಸ್ ಠಾಣೆಗೆ ಹಿಂದಿರುಗಿಸಲು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



