ದಾವಣಗೆರೆ: ಜಿಲ್ಲಾ ಪೊಲೀಸರು ಸರಗಳ್ಳತ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ 50 ಗ್ರಾಂ ಬಂಗಾರ ವಶಕ್ಕೆ ಪಡೆಯಲಾಗಿದೆ.
ಕಾನಾಮಡುಗು ಗ್ರಾಮದ ವಿಜಯನಗರ ಜಿಲ್ಲೆಯ ಸುಷ್ಮಾ ಬಿ.ಎಸ್. ಪತಿಯೊಂದಿಗೆ ಬೈಕ್ ನಲ್ಲಿ ಜಗಳೂರು-ದಾವಣಗೆರೆ ರಸ್ತೆಯಲ್ಲಿ ಬಿಳಿಚೋಡು ಕಡೆಗೆ ಬರುತ್ತಿರುವಾಗ ಪಲ್ಸರ್ ಮೋಟಾರ್ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಇವರನ್ನು ಹಿಂಬಲಿಸಿಕೊಂಡು ಬಂದು ಏಕಾಏಕಿ ಇವರ ಹೊಂಡಾ ಆಕ್ಟೀವಾ ಬೈಕ್ ಬಲಭಾಗಕ್ಕೆ ಬಂದು ಕೊರಳಿನಲ್ಲಿದ್ದ 46 ಗ್ರಾಂತೂಕದ, 2,೦೦,೦೦೦/- ರೂ ಬೆಲೆ ಬಾಳುವ ನನ್ನ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿರುತ್ತಾರೆ ಎಂದು ಬಿಳಿಚೋಡು ಪೊಲೀಸ್ ಠಾಣೆ ಪ್ರಕರಣ ದಾಖಲಿಸಿರುತ್ತದೆ.
ಪ್ರಕರಣದ ಆರೋಪಿ ಪತ್ತೆಗೆ ಸಹಾಯಕ ಪೊಲೀಸ್ ಅಧೀಕ್ಷಕ ಕನ್ನಿಕಾ ಸಿಕ್ರಿವಾಲ್ ಮಾರ್ಗದರ್ಶನದಲ್ಲಿ ಬಿಳಿಚೋಡು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸತ್ಯನಾರಾಯಣಸ್ವಾಮಿ ಕೆ.ಹಾಗೂ ಅಧಿಕಾರಿ ಸಿಬ್ಬಂದಿಗಳ ತಂಡ ಪತ್ತೆ ಕಾರ್ಯ ಕೈಗೊಂಡಿದ್ದು,ಪ್ರಕರಣದ ಆರೋಪಿಗಳಾದ ಚಿತ್ರದುರ್ಗದ ಮಂಜುನಾಥ, ಮನೋಜ್ ಬಂಧಿಸಲಾಗಿದೆ. ಆರೋಪಿತರಿಂದ 5೦ ಗ್ರಾಂ ಬಂಗಾರ ಅಭರಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ ರಿಷ್ಯಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ ರವರು ಶ್ಲಾಘಿಸಿದ್ದಾರೆ.



