ದಾವಣಗೆರೆ: ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ವ್ಯಕ್ತಿಯೊಬ್ಬರ ಖಾಸಗಿ ಪೋಟೋ ಸೆರೆ ಹಿಡಿದು ಯುವತಿಯರೊಂದಿಗೆ ಸೇರಿ 15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯೊಂದಿಗೆ ದೂರುದಾರ ಹೋಮ್ ಸ್ಟೇನಲ್ಲಿದ್ದಾಗ ಖಾಸಗಿ ಫೋಟೋ ಸೆರೆ ಹಿಡಿದು, ರಕ್ಷಣ ವೇದಿಕೆ ಕಾರ್ಯಕರ್ತರು ಎಂದು ಹೇಳಿಕೊಂಡ ನಾಲ್ವರು 15 ಲಕ್ಷಕ್ಕೆ ಬ್ಲಾಕ್ ಮೇಲ್ ಮಾಡುತ್ತಿದ್ದರು. ಹೋಮ್ ಸ್ಟೇನಲ್ಲಿದ್ದ ಯುವತಿಯ ಸಹಿತ ನಾಲ್ವರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ, ಮನೆಯವರಿಗೆ ಮಾಹಿತಿ ನೀಡುವುದಾಗಿ ಬೆದರಿಸಿ 1,20000 ಹಣ ಪಡೆದಿದ್ದಾರೆ. ಇನ್ನುಳಿದ ಹಣಕ್ಕೆ ಬ್ಲಾಕ್ ಮೇಲ್ ಮಾಡುತ್ತಿದ್ದರು.
ಈ ಬಗ್ಗೆ ವಿದ್ಯಾನಗರ ಪೊಲೀ ಠಾಣೆಯ ಚೀತಾ ಪೊಲೀಸ್ ಸಿಬ್ಬಂದಿಗೆ ದೂರು ಬಂದಿದೆ. ದೂರ ಬಂದ ತಕ್ಷಣ ಗಸ್ತಿನಲ್ಲಿದ್ದ ಮಂಜಪ್ಪ ,ಟಿ .ಬುಡೇನ್ ವಲಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳದಲ್ಲಿದ್ದ ಒಂದು ಕಾರು ಸಹಿತ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಹುಬ್ಬಳಿಯ ಶಿವರಾಜ್(29), ಹಾಸನದ ಭೂಮಿಕ (26), ತುಮಕೂರಿನ ಪವಿತ್ರಾ (24), ಚಿಕ್ಕಮಗಳೂರಿನ ಸುರೇಶ್ (44) ಬಂಧಿತರಾಗಿದ್ದಾರೆ. ಆರೋಪಿಗಳಿಂದ 1.20 ಲಕ್ಷ ನಗದು, ಒಂದು ಕಾರು, 6 ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.



