ದಾವಣಗೆರೆ: 2.50 ಲಕ್ಷ ಮೌಲ್ಯದ ನಕಲಿ ಬಂಗಾರ ನೀಡಿ ವಂಚನೆ ಮಾಡುತ್ತಿದ್ದ ಒರ್ವ ಆರೋಪಿಯನ್ನು ಆರ್ ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಮೂಲದ ಒಬ್ಬ ವ್ಯಕ್ತಿಗೆ ಅಪರಿಚಿತ ವ್ಯಕ್ತಿಯೊಬ್ಬ ಕಾಲ್ ಮಾಡಿ ಯೋಗ ಕ್ಷೇಮ ವಿಚಾರಿಸಿ, ಸ್ವಲ್ಪ ದಿನದ ನಂತರ ನನ್ನ ಪಕ್ಕದ ಮನೆಯ ಅಜ್ಜನ ಮನೆಯಲ್ಲಿ ಬಂಗಾರದ ಕಾಯಿನ್ ಗಳು ಸಿಕ್ಕಿವೆ. ಇವುಗಳನನ್ನು ಮಾರಾಟ ಮಾಡಲು ನಮಗೆ ಗೊತ್ತಾಗುತ್ತಿಲ್ಲ. ನಿಮಗೆ ಬಂಗಾರದ ಕಾಯಿನ್ ಗಳು ಕಡಿಮೆ ಬೆಲೆಗೆ ಕೊಡುತ್ತೇವೆ ಎಂದು ಸ್ಯಾಂಪಲ್ ಗೆ ಎರಡು ಅಸಲಿ ಕಾಯಿನ್ ಕೊಟ್ಟು ನಂಬಿಸಿದ್ದ. ಇದನ್ನು ನಂಬಿಸಿ ಮಂಗಳೂರು ಮೂಲದ ವಿಜಯಕುಮಾರ್ 2.50 ಲಕ್ಷ ಹಣ ನೀಡಿ ಅರ್ಧ ಕೆ.ಜಿ. ನಾಣ್ಯ ಖರೀದಿ ಮಾಡಿದ್ದನು. ಬಳಿಕ ಪರೀಕ್ಷೆ ಮಾಡಿದಾಗ ಅದು ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ನಗರದ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಬಿಜಯ್ ಕುಮಾರ್ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಡಿವೈಎಸ್ ಪಿಗಳಾದ ನರಸಿಂಹ ವಿ. ತಾಮ್ರಧ್ವಜ ಹಾಗೂ ಬಿ.ಎಸ್. ಬಸವರಾಜ್ ಮಾರ್ಗದರ್ಶನದಲ್ಲಿ ಸಿಪಿಐ ಗಜೇಂದ್ರಪ್ಪ , ಆಜಾದ್ ನಗರ , ಆರ್ ಎಂಸಿ ಯಾರ್ಡ್ ಇನ್ಸ್ ಪೆಕ್ಟರ್ ಪುಷ್ಬಲತಾ ಹಾಗೂ ಪಿಎಸ್ ಐ ಜಿ. ನಾಗರಾಜ್ ಅವರನ್ನೊಳಗೊಂಡ ರಚಿಸಲಾಗಿತ್ತು. ಈ ತಂಡ ಒರ್ವ ಆರೋಪಿಯನ್ನು ಬಂಧನ ಮಾಡಿದ್ದಾರೆ. ಬಂಧಿತನಿಂದ 2.05 ಲಕ್ಷ ಮೌಲ್ಯದ ಬಂಗಾರ ವಶಕ್ಕೆ ಪಡೆಯಲಾಗಿದೆ.



