ಹರಿಹರ; ಕೆರೆಯಲ್ಲಿ ಸ್ನಾನ ಮಾಡಲು ಹೋಗಿದ್ದಾಗ ಮೀನಿನ ಬಲೆಯಲ್ಲಿ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ದೇವರಬೆಳಕೆರೆ ಟಿಬಿ ಕೆರೆಯಲ್ಲಿ ನಡೆದಿದೆ.
ತಿಪ್ಪಣ್ಣ( 52) ಮೃತ ದುರ್ದೈವಿ ಆಗಿದ್ದಾನೆ. ಮುಂಜಾನೆ ಟಿಬಿ ಕೆರೆಯಲ್ಲಿ ಸ್ನಾನ ಮಾಡಲು ಹೋಗಿದ್ದ ಸಂದರ್ಭದಲ್ಲಿ ಮೀನಿನ ಬಲೆಗೆ ಸಿಲುಕಿಕೊಂಡು ಮೃತಪಟ್ಟಿದ್ದಾನೆ. ಮೃತ ವ್ಯಕ್ತಿ ತಿಪ್ಪಣ್ಣ ಪ್ರತಿನಿತ್ಯವೂ ಮುಂಜಾನೆ ಕೆರೆಗೆ ಸ್ನಾನ ಮಾಡಲು ಹೋಗುತ್ತಿದ್ದ ಇಂದು ಮುಂಜಾನೆ ಸ್ನಾನ ಮಾಡಲು ಹೋಗಿ ಕಾಲುಜಾರಿ ಮೀನಿನ ಬಲೆಗೆ ಸಿಲುಕಿಕೊಂಡು ಸಾವನ್ನಪ್ಪಿದ್ದಾನೆ. ಈತನ ಕೂಲಿ ಕಾರ್ಮಿಕನಾಗಿದ್ದಾನೆ. ಮೂರು ಹೆಣ್ಣುಮಕ್ಕಳು,ಪತ್ನಿ ಇದ್ದಾರೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಹರಿಹರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.



