ದಾವಣಗೆರೆ: ವಿಕಲಚೇತನ ವ್ಯಕ್ತಿಯ ತ್ರಿಚಕ್ರ ಬೈಕ್ ಹೆಂಡತಿ,ಮಗ ಹಾಗೂ ಮೊಮ್ಮಗ ಬರುವಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಅಜ್ಜ, ಮೊಮ್ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಚಾಲಕ ಸೇರಿದಂತೆ ಮೂವರು ಗಾಯಗೊಂಡ ಘಟನೆ ಜಗಳೂರು ರಸ್ತೆಯ ಗಾಂಧಿ ನಗರ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ತೋಳಹುಣಸೆ ಗ್ರಾಮದ ಚಂದ್ರಾನಾಯ್ಕ (47) ಹಾಗೂ ಮೊಮ್ಮಗ ಯುವರಾಜ ನಾಯ್ಕ (2) ಮೃತಪಟ್ಟವರು. ಚಂದ್ರನಾಯ್ಕ ಅಂಗವಿಕಲರಾಗಿದ್ದು, ತ್ರಿಚಕ್ರ ಮೋಟಾರ್ ಬೈಕ್ ಬಳಸುತ್ತಿದ್ದರು ಎನ್ನಲಾಗಿದೆ. ತ್ರಿಚಕ್ರ ಮೋಟಾರ್ ಬೈಕ್ನಲ್ಲಿ ಪತ್ನಿ ರೇಣುಕಾಬಾಯಿ (45), ಮಗ ಪ್ರೀತಂ (18) ಹಾಗೂ 2 ವರ್ಷದ ಮೊಮ್ಮಗ ಯುವರಾಜ ನಾಯ್ಕ ಜೊತೆಗೆ ಸಾಗುತ್ತಿದ್ದರು.
ದಾವಣಗೆರೆ; ಟಿಸಿ ಅಳವಡಿಸಲು ರೈತರಿಂದ ಯಾವುದೇ ಲಂಚ ಸ್ವೀಕರಿಸಲ್ಲವೆಂದು ಆಣೆ, ಪ್ರಮಾಣ ಮಾಡಿದ ಬೆಸ್ಕಾಂ ಇಂಜಿನಿಯರ್
ಈ ವೇಳೆ ಗಾಂಧಿ ನಗರ ಬಳಿ ರಾಜ್ಯ ಹೆದ್ದಾರಿ-65ರಲ್ಲಿ ದಾವಣಗೆರೆಯಿಂದ ಜಗಳೂರು ಕಡೆ ಹೊರಟಿದ್ದ ಕೆಎ 43, ಪಿ. 2172 ನಂಬರ್ ಕಾರು ಜಗಳೂರು ಕಡೆಯಿಂದ ದಾವಣಗೆರೆಗೆ ಬರುತ್ತಿದ್ದ ಕೆಎ 17, ಎಚ್ಎಫ್ 6569 ನಂಬರ್ನ ತ್ರಿಚಕ್ರ ಬೈಕ್ಗೆ ಡಿಕ್ಕಿ ಹೊಡೆದಿದೆ. ಚಂದ್ರನಾಯ್ಕ, ಯುವರಾಜ ನಾಯ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಂದ್ರನಾಯ್ಕನ ಪತ್ನಿ ರೇಣುಕಾಬಾಯಿ, ಮಗ ಪ್ರೀತಂ ಹಾಗೂ ಕಾರು ಚಾಲಕ ಗಾಯಗೊಂಡಿದ್ದಾರೆ. ಮೂವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಜನತೆಗೆ ಸರ್ಕಾರದಿಂದ ಶಾಕ್ ; ಪ್ರತಿ ಯೂನಿಟ್ ವಿದ್ಯುತ್ ಗೆ 36 ಪೈಸೆ ಹೆಚ್ಚಳ ಮಾಡಿ ಆದೇಶ