Connect with us

Dvgsuddi Kannada | online news portal | Kannada news online

ಭದ್ರಾ ಡ್ಯಾಂ; 21.54 ಟಿಎಂಸಿ ನೀರು ಬಳಕೆಗೆ ಲಭ್ಯ; ಕೂಡಲೇ ಸಭೆ ಕರೆದು ಬೇಸಿಗೆ ಹಂಗಾಮಿನ ಬೆಳೆಗೆ ನೀರು ಹರಿಸುವ‌ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಿ; ರೈತರ ಮನವಿ

ದಾವಣಗೆರೆ

ಭದ್ರಾ ಡ್ಯಾಂ; 21.54 ಟಿಎಂಸಿ ನೀರು ಬಳಕೆಗೆ ಲಭ್ಯ; ಕೂಡಲೇ ಸಭೆ ಕರೆದು ಬೇಸಿಗೆ ಹಂಗಾಮಿನ ಬೆಳೆಗೆ ನೀರು ಹರಿಸುವ‌ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಿ; ರೈತರ ಮನವಿ

ದಾವಣಗೆರೆ: ಜಿಲ್ಲೆಯ ರೈತರ ಜೀವನಾಡಿಯಾಗಿರುವ ಭದ್ರಾ ಡ್ಯಾಂನ ಬಲ ದಂಡೆ ನಾಲೆಯಿಂದ ಬೇಸಿಗೆ ಹಂಗಾಮಿಗೆ ಎಷ್ಟು ದಿನ ನೀರು ಹರಿಸಲಾಗುತ್ತಿದೆ ಎಂಬ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಸದ್ಯ 21.54 ಟಿಎಂಸಿ ಬಳಕೆಗೆ ಲಭ್ಯಬಿದ್ದು, ಕೂಡಲೇ ಭದ್ರಾ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಕರೆದು ನೀರು ಹರಿಸಬೇಕು ಎಂದು ಭಾರತೀಯ ರೈತ ಒಕ್ಕೂಟದಿಂದ ಅಪರ ಜಿಲ್ಲಾಧಿಕಾರಿ ಲೋಕೇಶ್ ಅವರಲ್ಲಿ ಮನವಿ ರೈತರು ಮನವಿ ಸಲ್ಲಿಸಿದ್ದಾರೆ.

ಸದ್ಯ ಭದ್ರಾ ಜಲಾಶಯದಲ್ಲಿ 151.5 ಅಡಿ ನೀರು ಸಂಗ್ರಹ ಇದೆ. ಜಲಾಶಯದ ಗರಿಷ್ಠ ಸಂಗ್ರಹಣೆ ಒಟ್ಟು ಸಾಮರ್ಥ್ಯ 71.535 ಟಿಎಂಸಿ ಆಗಿದ್ದು, ಸದ್ಯ ಪ್ರಮಾಣ 35.37 ಟಿಎಂಸಿ ಇದೆ. ಇದರಲ್ಲಿ 13.83 ಟಿ ಎಂ ಸಿ ಪ್ರಮಾಣದಷ್ಟು ಡೆಡ್ ಸ್ಟೋರೇಜ್ ಆಗಿದ್ದು, ಉಳಿದ 21.54 ಟಿಎಂಸಿ ಕೃಷಿ, ಕುಡಿಯುವ ನೀರಿಗೆ ಬಳಕೆಗೆ ಬರುತ್ತದೆ. ಅಧಿಕಾರಿಗಳು ಕೇವಲ ಕುಡಿಯುವ ನೀರು ಮತ್ತು ಕೈಗಾರಿಕೆಗಳಿಗೆ ಮಾತ್ರ ಈ ನೀರು ಸೀಮಿತ ಎನ್ನುವುದು ಸರಿಯಲ್ಲ.

ನಾಲೆಯಲ್ಲಿ ನೀರು ಹರಿಸಿದಾಗ ಕುಡಿಯುವ ನೀರಿಗಾಗಿ ದಾವಣಗೆರೆ ಟಿವಿ ಸ್ಟೇಷನ್ ಕೆರೆ ಮತ್ತು ಕುಂದುವಾಡದ ಕೆರೆ ತುಂಬಿಸಿಕೊಳ್ಳಬಹುದು. ಆದ್ದರಿಂದ ಬಳಸಬಹುದಾದ 21.54 ಟಿ.ಎಂ.ಸಿ ನೀರನ್ನು 72 ದಿನ ನಾಲೆಯಲ್ಲಿ ಹರಿಸಬಹುದು. ಹೀಗಾಗಿ ಕೂಡಲೇ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ, ನೀರು ಹರಿಸುವ ವೇಳಾಪಟ್ಟಿ ಪ್ರಕಟಿಸಬೇಕು.ಈ ವೇಳಾಪಟ್ಟಿ ನೋಡಿಕೊಂಡು ಯಾವ ಬೆಳೆ ಬೆಳೆಯಬೇಕೆಂದು ನಿರ್ಧರಿಸುತ್ತಾರೆ ಎಂದರು.

ಭದ್ರಾ ಜಲಾಶಯದಲ್ಲಿ ಪ್ರತಿ ದಿನ 300 ರಿಂದ 400 ಕ್ಯೂಸೆಕ್ಸ್ ನೀರು ಪೋಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಶೀಲಿಸಿ, ಸೋರಿಕೆ ನಿಯಂತ್ರಿಸಬೇಕು. ನಾಲೆಯಲ್ಲಿ ಹರಿಯುವ ನೀರು ಪೋಲಾಗದಂತೆ ದುರಸ್ಥಿ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

‌ಈ ಸಂದರ್ಭದಲ್ಲಿ ರೈತ ಮುಖಂಡರಾದ ಕೊಳೇನಹಳ್ಳಿ ಬಿ. ಎಂ. ಸತೀಶ್ , ಶಾಮನೂರು ಲಿಂಗರಾಜ್‌, ಬೆಳವನೂರು ನಾಗೇಶ್ವರರಾವ್ , ಧನಂಜಯ ಕಡ್ಲೆಬಾಳ್‌, ಬಲ್ಲೂರು ಬಸವರಾಜ್, ಕುಂದುವಾಡದ ಗಣೇಶಪ್ಪ, ಬೆಳಲಗೆರೆ ಶಿವಣ್ಣ, ಕನ್ನಡಪರ ಹೋರಾಟಗಾರ ಎನರೈ ಚ್. ಹಾಲೇಶ್, ಬಾತಿ ವಿರೇಶ್ ದೊಗ್ಗಳ್ಳಿ, ರೇವಣಸಿದ್ದಪ್ಪ, ಬಿ. ಕೆ. ಶಿವಕುಮಾರ್, ಮಳಲ್ಕೆರೆ ಕಲ್ಲಪ್ಪಗುಡ್ಡದರ, ಕಾಶಿಪುರ ಸುರೇಶ್, ನಿಜಲಿಂಗಪ್ಪ, ಕಲ್ಪನಹಳ್ಳಿ ಉಜ್ಜಪ್ಪ, ಸತೀಶ್, ಆರನೇಕಲ್ಲು ವಿಜಯಕುಮಾರ, ಹೊಸಹಳ್ಳಿ ಶಿವಮೂರ್ತಿ, ವಾಸನ ಬಸವರಾಜ, ಮತ್ತಿ ಜಯಣ್ಣ ಮತ್ತಿತರರು‌‌ ಇದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top