ದಾವಣಗೆರೆ: ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯದ (bhadra dam) ಮಲೆನಾಡು ವ್ಯಾಪ್ತಿಯಲ್ಲಿ ಮಳೆ ಮುಂದುವರೆದಿದೆ. ನಿನ್ನೆ (ಜು.10) 11 ಸಾವಿರ ಕ್ಯೂಸೆಕ್ ನಷ್ಟಿದ್ದ ಒಳಹರಿವು, ಇಂದು (ಜು.11) 11,991 ಕ್ಯೂಸೆಕ್ ನಷ್ಟಿದೆ. ಮುಂಗಾರು ಮಳೆ ಪ್ರಾರಂಭವಾಗಿ ಎರಡು ತಿಂಗಳಲ್ಲಿಯೇ ಭದ್ರಾ ಜಲಾಶಯ ನೀರಿನ ಮಟ್ಟ 174.4 ಅಡಿಗೆ ತಲುಪಿದೆ. ಈ ಮೂಲಕ ಭರ್ತಿಗೆ ಕೇವಲ 11.8 ಅಡಿ ಮಾತ್ರ ಬಾಕಿ ಇದೆ. ಇದು ಅಚ್ಚುಕಟ್ಟು ರೈತರಲ್ಲಿ ಸಂತಸ ತಂದಿದೆ.
ಮುಂಗಾರು ಮಳೆ ಮೇ ಕೊನೆ ವಾರದಲ್ಲಿಯೇ ಪ್ರವೇಶ ಪಡೆದರೂ ಜೂ.12ರಿಂದ ಮಲೆನಾಡು ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ಭದ್ರಾ ಜಲಾಶಯ ಇಂದಿನ ( ಜು.11) ನೀರಿನ ಮಟ್ಟ 174.4 ಅಡಿ ಇದ್ದು, ಒಳ ಹರಿವು 11,991 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ದಿನ 136 ಅಡಿ ನೀರು ಇತ್ತು. ಈ ವರ್ಷ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಈ ವರ್ಷ ಬೇಗ ತುಂಬುವ ಆಶಾಭಾವನೆಯನ್ನು ರೈತರು ಹೊಂದಿದ್ದಾರೆ.
ಭದ್ರಾ ಜಲಾಶಯ ಇಂದಿನ ನೀರಿನ ಮಟ್ಟ
- ದಿನಾಂಕ :11-07-2025
- ಒಟ್ಟು ನೀರಿನ ಸಾಮರ್ಥ್ಯ: 71.54 ಟಿಎಂಸಿ
- ಪ್ರಸ್ತುತ ನೀರಿನ ಮಟ್ಟ ; 57,631 ಟಿಎಂಸಿ
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ಮಟ್ಟ: 174.4 ಅಡಿ
- ಒಳ ಹರಿವು :11,991 ಕ್ಯೂಸೆಕ್
- ಹೊರ ಹರಿವು : 2,304 ಕ್ಯೂಸೆಕ್
- ಎಡ ದಂಡೆ : 00 ಕ್ಯೂಸೆಕ್
- ಬಲ ದಂಡೆ : 00 ಕ್ಯೂಸೆಕ್
- ಕಳೆದ ವರ್ಷ ಈ ದಿನದ ನೀರಿನ ಮಟ್ಟ: 136.0 ಅಡಿ
- ಕಳೆದ ವರ್ಷದ ಇದೇ ದಿನ ಒಳಹರಿವು: 6,646 ಕ್ಯೂಸೆಕ್