ದಾವಣಗೆರೆ: ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ( ಮಲೆನಾಡು ಭಾಗ) ಮುಂಗಾರು ಮಳೆ ಮತ್ತೆ ಚುರುಕು ಪಡೆದುಕೊಂಡಿದೆ. ಇದರಿಂದ ಭದ್ರಾ ಜಲಾಶಯ ( bhadra dam) ಒಳಹರಿವು ಸ್ವಲ್ಪ ಚೇತರಿಕೆ ಕಂಡಿದೆ. ಇಂದು (ಜೂ.11) ಬೆಳಗ್ಗೆ ಹೊತ್ತಿಗೆ ಒಳ ಹರಿವು 968 ಕ್ಯೂಸೆಕ್ ನಷ್ಟಿದೆ. ಮೇ ತಿಂಗಳ ಕೊನೆ ವಾರ ಸತತ ಮಳೆಯಿಂದ ಒಳ ಹರಿವು 8 ಸಾವಿರ ಕ್ಯೂಸೆಕ್ ದಾಟಿತ್ತು. ಆದರೆ, ಮುಂಗಾರು ಮಳೆ ಪ್ರವೇಶ ನಂತರ ಮಳೆ ಪ್ರಮಾಣ ಇಳಿಕೆಯಾಗಿದೆ. ಕಳೆದ ವಾರ ಸಂಪೂರ್ಣ ಒಣ ಹವೆ ಇತ್ತು. ಈಗ ಮತ್ತೆ ಮಳೆ ಚೇತರಿಕೆ ಕಂಡಿದೆ
ಭದ್ರಾ ಜಲಾಶಯಶದ ಇಂದಿನ ( ಜೂ.11) ನೀರಿನಮಟ್ಟ 143.3 ಅಡಿ ಇದ್ದು, ಒಳ ಹರಿವು 968 ಕ್ಯೂಸೆಕ್ ಇದೆ. ಕಳೆದ ವರ್ಷ ಇದೆ ದಿನ 117.11 ಅಡಿ ಇತ್ತು. ಕಳೆದ ವಾರ ಬಿಡುವು ನೀಡಿದ್ದ ಮಳೆ, ಈ ವಾರ ಮತ್ತೆ ಅಬ್ಬರಿಸಲಿದ್ದು, ಮುಂದಿನ ಮೂರ್ನಾಲ್ಕು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ಭದ್ರಾ ಜಲಾಶಯ ತುಂಬುವ ಆಶಾಭವನೆಯನ್ನು ರೈತರು ಹೊಂದಿದ್ದಾರೆ.
ಭದ್ರಾ ಜಲಾಶಯ ಇಂದಿನ ನೀರಿನ ಮಟ್ಟ
- ದಿನಾಂಕ :11-06-2025
- ಒಟ್ಟು ನೀರಿನ ಸಾಮರ್ಥ್ಯ: 71.54 ಟಿಎಂಸಿ
- ಪ್ರಸ್ತುತ ನೀರಿನ ಮಟ್ಟ ; 29,170 ಟಿಎಂಸಿ
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ಮಟ್ಟ: 143.3 ಅಡಿ
- ಒಳ ಹರಿವು : 968 ಕ್ಯೂಸೆಕ್
- ಹೊರ ಹರಿವು : 268ಕ್ಯೂಸೆಕ್
- ಎಡ ದಂಡೆ : 00 ಕ್ಯೂಸೆಕ್
- ಬಲ ದಂಡೆ : 00 ಕ್ಯೂಸೆಕ್
- ಕಳೆದ ವರ್ಷ ಈ ದಿನದ ನೀರಿನ ಮಟ್ಟ: 117.11 ಅಡಿ
- ಕಳೆದ ವರ್ಷದ ಇದೇ ದಿನ ಒಳಹರಿವು: 2,911 ಕ್ಯೂಸೆಕ್
ಭದ್ರಾ ಜಲಾಶಯ ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿಯಾಗಿದೆ. ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ವಿಜಯನಗರ ಜಿಲ್ಲೆಯ ಕೆಲ ಪ್ರದೇಶದ ರೈತರ ಜಮೀನ ನೀರಾವರಿಯ ಮೂಲವಾಗಿದೆ. ಭತ್ತ, ಅಡಿಕೆ, ಮೆಕ್ಕೆಜೋಳ ಬೆಳೆಗೆ ಜಲಾಶಯ ನೀರಿನ ಆಧಾರವಾಗಿದೆ.