ದಾವಣಗೆರೆ: 56.67 ಲಕ್ಷ ಮೌಲ್ಯದ ವಿದ್ಯುತ್ ಪರಿವರ್ತಕ (ಟಿಸಿ) ಆಯಿಲ್ ದುರ್ಬಳಕೆ ಆರೋಪದ ಮೇರೆಗೆ ಹರಿಹರ ನಗರದ ಬೆಸ್ಕಾಂ ವಿಭಾಗೀಯ ಕಚೇರಿಯ ಸಹಾಯಕ ಉಗ್ರಾಣ ಪಾಲಕ ಅರುಣ್ ಕುಮಾರ್ ಜಿ.ಎಂ. ಅಮಾನತು ಮಾಡಲಾಗಿದೆ.
ಬೆಸ್ಕಾಂನ ಲೆಕ್ಕಪತ್ರ ವಿಭಾಗದ ಅಧಿಕಾರಿಗಳು ಈ ಹಿಂದೆ ಉಗ್ರಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಉಗ್ರಾಣ ಲೆಕ್ಕದಲ್ಲಿ 56.67 ಲಕ್ಷ ಮೌಲ್ಯದ 89,270 ಲೀಟರ್ ಟಿಸಿ ಆಯಿಲ್ ವ್ಯತ್ಯಾಸ ಕಂಡುಬಂದ ಹಿನ್ನೆಲೆ ಅಮಾನತು ಆದೇಶ ಹೊರಡಿಸಲಾಗಿದೆ.



