ದಾವಣಗೆರೆ: ರೈತನ ಮೇಲೆ ಏಕಾಏಕಿ ಮೂರು ಕರಡಿಗಳು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಬೈರನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹನುಮಂತಪ್ಪ (48 ವರ್ಷ) ಗಾಯಗೊಂಡ ವ್ಯಕ್ತಿಯಾಗಿದ್ದು, ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿರುವಾಗ ಏಕಾಏಕಿ ಮೂರು ಕರಡಿಗಳು ಮೇಲೆ ದಾಳಿ ಮಾಡಿವೆ. ಕೈಗಳಿಗೆ, ತಲೆಗೆ ಹಾಗೂ ಕಾಲು ಹಾಗೂ ಬೆನ್ನಿಗೆ ಬೆನ್ನಿಗೆ ಗಾಯಗಳಾಗಿವೆ.
ಹನುಮಂತಪ್ಪ ಜೋರಾಗಿ ಕೂಗಿದ ನಂತರ ಅಕ್ಕ ಪಕ್ಕದ ಜಮೀನಿನಲ್ಲಿದ್ದವರು ಓಡಿಬಂದು ಕರಡಿಗಳನ್ನು ಓಡಿಸಿದ್ದಾರೆ.ಗಾಯಗೊಂಡ ಹನುಮಂತಪ್ಪ ಅವರನ್ನು ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.



