Connect with us

Dvgsuddi Kannada | online news portal | Kannada news online

ದಾವಣಗೆರೆ; ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಸಕಲ ಸಿದ್ಧತೆ ; ಡಿಸಿ ಶಿವಾನಂದ ಕಾಪಶಿ

ದಾವಣಗೆರೆ

ದಾವಣಗೆರೆ; ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಸಕಲ ಸಿದ್ಧತೆ ; ಡಿಸಿ ಶಿವಾನಂದ ಕಾಪಶಿ

ದಾವಣಗೆರೆ: ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ 1,685 ಮತಗಟ್ಟೆಗಳಲ್ಲಿ ಮೇ 10ರಂದು ನಡೆಯುವ ಚುನಾವಣೆಯ ಶಾಂತಿ, ಸುವ್ಯವಸ್ಥಿತ ನಡೆಸಲು ಜಿಲ್ಲಾಡಳಿತ  ಸಕಲ ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

ಭಾನುವಾರ ಸಂಜೆಯಿಂದಲೇ ಜಿಲ್ಲಾದ್ಯ೦ತ ನಿಷೇಧಾಜ್ಞೆ ಜಾರಿ ಗೊಂಡಿದ್ದು, ಹೊರ ಪ್ರದೇಶದ ಯಾವುದೇ ವ್ಯಕ್ತಿಗಳಿದ್ದರೂ ಜಿಲ್ಲೆಯಿಂದ ಹೊರ ಹೋಗಬೇಕು. ಮತದಾರರ ಮೇಲೆ ಪ್ರಭಾವ ಬೀರುವ ವ್ಯಕ್ತಿಗಳು ಕಂಡು ಬಂದಲ್ಲಿಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಚುನಾವಣಾ ವೀಕ್ಷಕರು, ಚೆಕ್ ಪೋಸ್ಟ್‌ಗಳ ಪರಿಶೀಲನೆ, ಮದ್ಯ ಮಾರಾಟ ನಿಷೇಧ ಸೇರಿ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇ 13ರಂದು
ಮತ ಎಣಿಕೆಗಾಗಿ ಅಗತ್ಯ ಅಧಿಕಾರಿ, ಸಿಬ್ಬಂದಿಗೆ ವಿವಿಧ ಹಂತದ ತರಬೇತಿ ನೀಡಲಾಗಿದೆ. ಮತದಾನದ ದಿನದ೦ದು‌ ಗ್ರಾಮ, ಪಟ್ಟಣ, ನಗರ ಪ್ರದೇಶದಲ್ಲಿ ವಾರದ ಸಂತೆ ನಿಷೇಧಿಸಲಾಗಿದೆ ಎಂದು ವಿವರಿಸಿದರು.

4,562 ಮಂದಿ ಅಂಚೆ ಮತದಾನ ಅ೦ಚೆ ಮತಪತ್ರದ ಮೂಲಕ ಜಿಲ್ಲೆಯ 7 ಕ್ಷೇತ್ರಗಳಲ್ಲಿ 4,562 ಮಂದಿ ಮತ ಚಲಾಯಿಸಿದ್ದಾರೆ. 80 ವರ್ಷ ಮೇಲ್ಪಟ್ಟ 1,784 ಮಂದಿ, 495 ವಿಶೇಷ ಚೇತನರು ಅ೦ಚೆ ಮತದಾನ ಮಾಡಿದ್ದು, 268 ಮಂದಿ ಸೇವಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಜಿಲ್ಲಾದ್ಯಂತ ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿ ಸೇರಿ ಸಂಘ-ಸಂಸ್ಥೆಗಳು, ಸಂಘಟನೆಗಳಿಂದ ಮತದಾನ ಜಾಗೃತಿ ಕಾರ್ಯವನ್ನೂ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಮಾತನಾಡಿ, ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳ ವ್ಯಾಪ್ತಿಯಲ್ಲೂ ಶಾಂತಿಯುತ, ನಿರ್ಭೀತಿಯಿ೦ದ ಜನರು ಮತ ಚಲಾಯಿಸಲು ಅನುಕೂಲವಾಗುವಂತೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ಕಾನೂನುಬಾಹಿರ ಕೃತ್ಯದಲ್ಲಿ ಭಾಗಿಯಾಗುವುದಿಲ್ಲವೆಂದು ಈವರೆಗೆ  1 ಸಾವಿರ ಮಂದಿಯಿ೦ದ ಜಿಲ್ಲೆಯಲ್ಲಿ ಮುಚ್ಚಳಿಕೆ ಬರೆಸಿದ್ದು, 23 ಜನರ ಗಡೀಪಾರು ಮಾಡಲಾಗಿದೆ. ನೀತಿ ಸ೦ಹಿತೆ ಉಲ್ಲಂಘನೆ ಮತ್ತು ಚುನಾವಣೆ ಸಂಬಂಧ 66 ಪ್ರಕರಣ ದಾಖಲಿಸಲಾಗಿದೆ ಎಂದರು.

ಮತದಾನದದಿನದಂದು 2215 ಸಿವಿಲ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ನಿಯೋಜಿಸಿದೆ. 20 ತಂಡ ಸಿಆರ್‌ಪಿಎಫ್‌ನಲ್ಲಿ 1262 ಸಿಬ್ಬಂದಿ, 7 ಕೆಎಸ್‌ಆರ್‌ಪಿ ತುಕಡಿಯ 150 ಜನ ಸಿಬ್ಬಂದಿಗಳ ಎಲ್ಲಾ 1685 ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ. ಹೊರಗಿನ ಜಿಲ್ಲೆಯ ಯಾವುದಾದರೂ ವ್ಯಕ್ತಿ ಜಿಲ್ಲೆಯ ಅತಿಥಿ ಗೃಹ, ಕಲ್ಯಾಣ ಮಂದಿರ, ಲಾಡ್ಜ್‌ಗಳಲ್ಲಿ ತಂಗಿರುವ ಬಗ್ಗೆ ಇಲಾಖೆ ಸಿಬ್ಬಂದಿ ಪರಿಶೀಲಿಸುತ್ತಿದ್ದಾರೆ ಎಂದುತಿಳಿಸಿದರು.

ಜಿಪಂ ಸಿಇಒ, ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಇಟ್ನಾಳ್ ಮಾತ ನಾಡಿ, ಕಳೆದ ಸಲ ಕಡಿಮೆ ಮತದಾನವಾಗಿದ್ದ ಉತ್ತರ ಕ್ಷೇತ್ರದಲ್ಲಿ ಕನಿಷ್ಠ ಶೇ.10ರಷ್ಟು ಮತದಾನ ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದರು. ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಇದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top