ದಾವಣಗೆರೆ: ತೆಂಗಿನ ಬೆಳೆಗೆ ತೀವ್ರವಾದ ಕಪ್ಪು ತಲೆ ಹುಳುವಿನ ಭಾದೆ; ನಿಯಂತ್ರಣ ಬಗ್ಗೆ ತೋಟಗಾರಿಕಾ ವಿಜ್ಞಾನಿಗಳಿಂದ ಮಾಹಿತಿ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ತೆಂಗಿನಲ್ಲಿ ಕಪ್ಪು ತಲೆ ಹುಳುವಿನ ಹಾನಿಯಿಂದ ತೆಂಗಿನ ಬೆಳೆಯ ಉತ್ಪಾದನೆ ಕುಂಠಿತವಾಗುವ ಎಲ್ಲಾ ಲಕ್ಷಣಗಳಿವೆ ಎಂದು ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಶ್ರೀ ಬಸವನಗೌಡ ಎಂ ಜಿ ಅಭಿಪ್ರಾಯಪಟ್ಟರು.

ದಾವಣಗೆರೆ ತಾಲ್ಲೂಕು ಮುದಹದಡಿ, ಮಿಟ್ಲಕಟ್ಟೆ, ಬಟ್ಲಕಟ್ಟೆ, ನಾಗನೂರು ಸುತ್ತ ಮುತ್ತ ತೆಂಗಿನ ತೋಟಗಳಿಗೆ ತೋಟಗಾರಿಕೆ ಇಲಾಖೆ ಹಾಗೂ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ವೈಜ್ಞಾನಿಕ ಕ್ಷೇತ್ರ ಭೇಟಿ ನೀಡಿ ಮಾಹಿತಿ ನೀಡಲಾಯಿತು. ಈ ಗ್ರಾಮಗಳ ತೆಂಗಿನ ತೋಟಗಳಲ್ಲಿ ನಿರೋಧಕ ಶಕ್ತಿ ಕುಂದಿರುವುದರ ಪರಿಣಾಮ ತೋಟಗಳಲ್ಲಿ ಕಪ್ಪು ತಲೆ ಹುಳದ ಭಾದೆ ತೀವ್ರವಾಗಿದೆ. ಈ ರೀತಿ ಎಲೆಯ ಕೆಳಭಾಗದಲ್ಲಿ ಹಸಿರು ಭಾಗವನ್ನು ಕೆರೆದು ತಿನ್ನುವುದು ನಂತರ ಗರಿಗಳು ಸುಟ್ಟ ರೀತಿ ಭಾವಿಸುವುದು ಈ ಹಾನಿ ಲಕ್ಷಣಗಳಾಗಿವೆ, ಇದರ ಭಾದೆ ಬೇಸಿಗೆ ತಿಂಗಳುಗಳಲ್ಲಿ ಹೆಚ್ಚುವ ಸಂಭವವಿದ್ದು, ರೈತರು ಸೂಕ್ತ ಹತೋಟಿ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯತೆಯಿದೆ ಎಂದು ತಿಳಿಸಿದರು.

ಇದರ ನಿಯಂತ್ರಣಕ್ಕೆ ತೀವ್ರತೆ ಮೊದಲ ಹಂತದಲ್ಲಿದ್ದಾಗ ಹೊರವಲಯದ ಮರಗಳಲ್ಲಿ ಹಾನಿಯಾದ ಗರಿಗಳನ್ನು ಕತ್ತರಿಸಿ ನಾಶ ಮಾಡಬೇಕು, ತೋಟದಲ್ಲಿ ಬಿದ್ದ ಗರಿಗಳು, ಕಳೆಗಳನ್ನು ತೆಗದುಹಾಕಿ ಸ್ವಚ್ಛಗೊಳಿಸಬೇಕು. ಕಪ್ಪು ತಲೆ ಹುಳು ಮರಿ ಹುಳುವಿಗೆ ಹಂತದಲ್ಲಿದ್ದಾಗ ತೋಟಗಾರಿಕೆ ಇಲಾಖೆಯಲ್ಲಿ ದೊರೆಯುವ ಪರೋಪಜೀವಿ ಗೋನಿಯೋಜಸ್ ನೆಫೆಂಡಿಡಿಸ್ ಅನ್ನು ಪ್ರತಿ ಪ್ರತಿ ಮರಕ್ಕೆ 15 ರಿಂದ 20 ರಂತೆ ಪ್ರತಿ 15 ದಿವಸಗಳಿಗೊಮ್ಮೆ ಕನಿಷ್ಠ ನಾಲ್ಕು ಬಾರಿ ಬಿಡಬೇಕು, ಸಿಂಪರಣೆ ಮಾಡುವುದಾದರೆ ಬೈಪೆನ್ ಥ್ರಿನ್ 1.5 ಮೀ ಲಿ ಅಥವಾ ಅಜಾದಿರೆಕ್ಟನ್ 5% ಅನ್ನು 2 ಮೀ ಲಿ ಪ್ರತಿ ಲೀಟರ್ ನೀರಿನಲ್ಲಿ ಬೆರಗಿ ಎಲೆಗಳ ಕೆಳಭಾಗ ಸಿಂಪರಣೆ ಮಾಡಬೇಕು ಎಂದು ವಿವರಿಸಿದರು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀಮತಿ ರೇಷ್ಮಾ ಪರ್ವೀನ್ ಮತ್ತು ಸಹಾಯಕ ತೋಟಗಾರಿಕೆ ಅಧಿಕಾರಿ ಪವನ್ ಕುಮಾರ್ ರೈತರೊಂದಿಗೆ ಸಂವಾದ ನಡೆಸಿ ಎಲ್ಲಾ ರೈತರು ಸಹಕಾರದಿಂದ ಮೇಲಿನ ಹತೋಟಿ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *