Connect with us

Dvgsuddi Kannada | online news portal | Kannada news online

ದಾವಣಗೆರೆ: ಬೋರಗೊಂಡನಹಳ್ಳಿಯಲ್ಲಿ ಮೂರು ವರ್ಷದ ಎರಡುವರೆ ಸಾವಿರ ಅಡಿಕೆ-ಪಪ್ಪಾಯಿ ಸಸಿ ಕಡಿದು ಹಾಕಿದ ದುಷ್ಕರ್ಮಿಗಳು..!

arrecnut 44

ದಾವಣಗೆರೆ

ದಾವಣಗೆರೆ: ಬೋರಗೊಂಡನಹಳ್ಳಿಯಲ್ಲಿ ಮೂರು ವರ್ಷದ ಎರಡುವರೆ ಸಾವಿರ ಅಡಿಕೆ-ಪಪ್ಪಾಯಿ ಸಸಿ ಕಡಿದು ಹಾಕಿದ ದುಷ್ಕರ್ಮಿಗಳು..!

ದಾವಣಗೆರೆ: ಮೂರು ವರ್ಷದ ಎರಡುವರೆ ಸಾವಿರ ಅಡಿಕೆ ಮತ್ತು ಪಪ್ಪಾಯಿ ಸಸಿಗಳನ್ನು ರಾತ್ರೋರಾತ್ರಿ ದುಷ್ಕರ್ಮಿಗಳು ಕಡಿದು ಹಾಕಿರುವ ಘಟನೆ ತಾಲ್ಲೂಕಿನ ಬೋರಗೊಂಡನಹಳ್ಳಿಯಲ್ಲಿ ನಡೆದಿದೆ.

ದಾವಣಗೆರೆ ತರಕಾರಿ ಅಂಗಡಿ ಮಾಲೀಕರಾದ ಎಸ್.ಎಂ.ತಿಪ್ಪೇಸ್ವಾಮಿ ಅವರು ತಾಲ್ಲೂಕಿನ ಬೋರಗೊಂಡನಹಳ್ಳಿಯ ಸಮೀಪದ ಮೂರು ಎಕರೆ ಜಮೀನಿನಲ್ಲಿ ಅಡಿಕೆ ಜತೆ ಮಿಶ್ರ ಬೆಳೆಯಾಗಿ ಪಪ್ಪಾಯಿ ಬೆಳೆದಿದ್ದರು. ಅಡಿಕೆ ಸಸಿ ಕೂಡ ಉತ್ತಮವಾಗಿ ಬೆಳೆದಿದ್ದವು.ಆದರೆ, ರಾತ್ರೋರಾತ್ರಿ ಜಮೀನಿಗೆ ನನುಗ್ಗಿದ ದುಷ್ಕರ್ಮಿಗಳು ಕಳೆದ ರಾತ್ರಿ ಮೂರು ವರ್ಷ ತುಂಬಿದ್ದ ಎರಡೂವರೆ ಸಾವಿರ ಅಡಿಕೆ ಗಿಡಗಳನ್ನು ಸಂಪೂರ್ಣವಾಗಿ ಕಡೆದು ಹಾಕಿದ್ದಾರೆ.

ಈ ಕೃತ್ಯ ನಡೆಸಿದವರು ಯಾರು ಎಂಬುದು ತಿಳಿದು ಬಂದಿಲ್ಲ. ಘಟನೆಯ ಹಿನ್ನೆಲೆಯಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.  ದೂರು ದಾಖಲಿಸಿಕೊಂಡು ತನಿಖೆ  ಆರಂಭಿಸಿದ್ಧಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top