Connect with us

Dvgsuddi Kannada | online news portal | Kannada news online

ದಾವಣಗೆರೆ: ಅಡಿಕೆ ಸಿಪ್ಪೆ ಬೆಂಕಿಯ ಹೊಗೆಯಿಂದ ರಸ್ತೆ ಕಾಣದಂತಾಗಿ ಅಪಘಾತ; ಬೆಂಕಿಯಲ್ಲಿ ಬಿದ್ದ ಬೈಕ್ ಸಂಪೂರ್ಣ ಸುಟ್ಟು ಭಸ್ಮ…!!!

IMG 20231228 121913

ದಾವಣಗೆರೆ

ದಾವಣಗೆರೆ: ಅಡಿಕೆ ಸಿಪ್ಪೆ ಬೆಂಕಿಯ ಹೊಗೆಯಿಂದ ರಸ್ತೆ ಕಾಣದಂತಾಗಿ ಅಪಘಾತ; ಬೆಂಕಿಯಲ್ಲಿ ಬಿದ್ದ ಬೈಕ್ ಸಂಪೂರ್ಣ ಸುಟ್ಟು ಭಸ್ಮ…!!!

ದಾವಣಗೆರೆ: ರಸ್ತೆ ಪಕ್ಕದಲ್ಲಿ ಹಾಕಿದ ಅಡಿಕೆ ಸಿಪ್ಪೆಗೆ ಹಚ್ಚಿದ ಬೆಂಕಿಯ ಹೊಗೆಯಿಂದ ರಸ್ತೆ ಕಾಣದಂತಾಗಿ ಬೈಕ್ ಸವಾರನಿಗೆ ಅಪಘಾತವಾಗಿದೆ. ಆಯಾ ತಪ್ಪಿ ಅಡಿಕೆ ಸಿಪ್ಪೆ ಬೆಂಕಿ ಮೇಲೆ ಬಿದ್ದ ಬೈಕ್ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ನಡಿದಿದೆ.

ಜಿಲ್ಲೆಯ ಚನ್ನಗಿರಿ- ದಾವಣಗೆರೆ ಮುಖ್ಯರಸ್ತೆಯ ಕಬ್ಬಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಸ್ತೆಯ ಪಕ್ಕದಲ್ಲಿ ಹಾಕಿರುವ ಅಡಿಕೆ ಸಿಪ್ಪೆ ಬೆಂಕಿಯ ಹೊಗೆಗೆ ರಸ್ತೆ ಕಾಣದಂತಾಗಿದೆ. ಎದುರಿಗೆ ಬರುವ ವಾಹನ ತಪ್ಪಿಸಲಿಕ್ಕೆ ಹೋಗಿ ಈ ಅಪಘಾತ ಸಂಭವಿಸಿದೆ. ಬೈಕ್ ಅಡಿಕೆ ಸಿಪ್ಪೆಯ ಬೆಂಕಿ‌ ಮೇಲೆ ಬಿದ್ದಿದೆ. ಇದರಿಂದ ಬೈಕ್ ಸುಟ್ಟು ಕರಕಲಾಗಿದೆ. ಬೈಕ್ ಸವಾರ ಕಬ್ಬಳ ಗ್ರಾಮದ ಜಯಪ್ಪ (68) ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೈಕ್ ಸವಾರನ ಕಾಲು, ಕೈಗಳಿಗೆ ಸುಟ್ಟು ಗಾಯಗಳಾಗಿವೆ. ಕೆರೆಬಿಳಚಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕತ್ಸೆಗೆ ದಾವಣಗೆರೆಗೆ ದಾಖಲಿಸಲಾಗಿದೆ. ಇನ್ನೂ ರಸ್ತೆ ಪಕ್ಕದಲ್ಲಿ ಅಡಿಕೆ ಸಿಪ್ಪೆ ಹಾಕಿದ ಅಡಿಕೆ ಖೇಣಿದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಸವಾಪಟ್ಟಣ ಪೊಲೀಸ್ ಠಾಣೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೂರು ನೀಡಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top