ದಾವಣಗೆರೆ; ತೋಟಕ್ಕೆ ತಂದೆಯ ಜೊತೆ ಹೋಗಿದ್ದ ಯುವನೊಬ್ಬ ತೆಂಗಿನ ಎಳೆ ನೀರು ಕಾಯಿ ಕೆಡವಲು ಹೋಗಿದ್ದಾಗ ದುರಂತ ಘಟನೆಯೊಂದು ನಡೆದಿದೆ. ಆಯ ತಪ್ಪಿ ಯುವಕ ತೆಂಗಿನ ಮರದಿಂದ ಕೆಳಗೆ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದ ಯುವಕ ಸಾವನ್ನಿದ ಘಟನೆ ನಡೆದಿದೆ.
ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಪಲವನಹಳ್ಳಿ ಗ್ರಾಮದ ಸುನೀಲ್ (28) ಸಾವನ್ನಪ್ಪಿದ ಯುವಕನಾಗಿದ್ದಾನೆ. ಮರದಿಂದ ಕಳಗೆ ಬಿದ್ದ ಯುವಕನಿಗೆ ತೀವ್ರ ಪೆಟ್ಟು ಬಿದ್ದಿದೆ. ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿ ಆಗದೆ ಯುವಕ ಸಾವನ್ನಪ್ಪಿದ್ದಾನೆ. ಈ ಬಗ್ಗೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



