ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ದೊಂಬೆ ಗ್ರಾಮದಲ್ಲಿ ಐವರು ಅಡಿಕೆ ಕಳ್ಳರ ಬಂಧಿಸಲಾಗಿದ್ದು, 5ಲಕ್ಷ ಮೌಲ್ಯದ ಅಡಿಕೆ ವಶಕ್ಕೆ ಪಡೆಯಲಾಗಿದೆ.
ಮನೆಯೊಂದರಲ್ಲಿ ದಾಸ್ತಾನು ಮಾಡಿದ್ದ 5 ಲಕ್ಷ ಮೌಲ್ಯದ ಅಡಿಕೆ, ಓಮ್ನಿ ಕಾರು ವಶಕ್ಕೆ ಪಡೆಯಲಾಗಿದೆ. 675 ಕೆಜಿ ತೂಕದ 12 ಚೀಲ ಅಡಿಕೆಯನ್ನು ಕದ್ದೊಯ್ದಿದ್ದ ಎಂಟು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಯಶೋಧರ ಅಲಿಯಾಸ್ ಗುಂಡ(23), ಮಂಜುನಾಥ್(28), ಅರುಣ್(27), ಸಂದೇಶ್ ಅಲಿಯಾಸ್ ಸ್ಯಾಂಡಿ(22), ಶಂಶಾಕ್(21), ಕಾರ್ತಿಕ್(20), ಸಂದೀಪ್(24), ಶಾರೂಕ್ ಅಲಿ(24) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಠಾಣೆಯ ಏಳು ಪ್ರಕರಣಗಳಲ್ಲಿ ಅಂದಾಜು 5 ಲಕ್ಷ ಮೌಲ್ಯದ 805 ಕೆಜಿ ಸಿಪ್ಪೆ ಗೋಟು ಅಡಿಕೆ, 70 ಕೆಜಿ ಚಾಲಿ ಅಡಿಕೆ, 349 ಕೆಜಿ ಕೆಂಪು ಅಡಿಕೆ ಮತ್ತು 200 ಕೆಜಿ ಬಿಳಿ ಗೋಟು ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಓಮ್ನಿ ಕಾರು, ಎರಡು ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ಪಿಐ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.



