Connect with us

Dvgsuddi Kannada | online news portal | Kannada news online

ತಾಳಿ ಕಟ್ಟುವಾಗ ನನಗೆ ಮದುವೆ ಇಷ್ಟವಿಲ್ಲವೆಂದು ಕೈ ಅಡ್ಡ ಹಿಡಿದ ಹುಡುಗಿ…!!!; ಚಿತ್ರದುರ್ಗದಲ್ಲೊಂದು ವಿಚಿತ್ರ ಪ್ರಸಂಗ..!

IMG 20231209 095944

ಪ್ರಮುಖ ಸುದ್ದಿ

ತಾಳಿ ಕಟ್ಟುವಾಗ ನನಗೆ ಮದುವೆ ಇಷ್ಟವಿಲ್ಲವೆಂದು ಕೈ ಅಡ್ಡ ಹಿಡಿದ ಹುಡುಗಿ…!!!; ಚಿತ್ರದುರ್ಗದಲ್ಲೊಂದು ವಿಚಿತ್ರ ಪ್ರಸಂಗ..!

ಚಿತ್ರದುರ್ಗ: ಈಗಿನ ಕಾಲದಲ್ಲಿ ಒಂದು ಮದುವೆ ಮಾಡುವುದು ಎಷ್ಟೆಲ್ಲ ಕಷ್ಟ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ..! ವಧು-ವರ ಒಪ್ಪಿಗೆ ಮೆರೆಗೆ ಮದುವೆ ನಡೆಯುವುದನ್ನು ಸಾಮಾನ್ಯವಾಗಿ ನೋಡಿದ್ದೇವೆ. ಆದರೆ, ಚಿತ್ರದುರ್ಗದಲ್ಲೊಂದು ವಿಚಿತ್ರ ಪ್ರಸಂಗ ನಡೆದಿದೆ. ಮದುವೆಗೆ ಸಕಲ ಸಿದ್ಧತೆ, ಎಲ್ಲಾ  ಶಾಸ್ತ್ರ ನಡೆದು, ಇನ್ನೇನು ತಾಳಿ ಕಟ್ಟುವಾಗ ಯುವತಿ ನನಗೆ ಮದುವೆ ಇಷ್ಟವಿಲ್ಲವೆಂದು ಕೈ ಅಡ್ಡ ಹಿಡಿದು ಎಲ್ಲರನ್ನು ಒಂದು ಕ್ಷಣ ಅಚ್ಚರಿ ಮೂಡಿಸಿದ್ದಾಳೆ…

ಈ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ನಡೆದಿದೆ. ಮೊದಲೇ ನಿಶ್ಚಯಿಸಲಾಗಿದ್ದ ಮದುವೆಯಲ್ಲಿ ವರ ತಾಳಿ ಕಟ್ಟಲು ಹೋದಾಗ ಕೈ ಅಡ್ಡ ಹಿಡಿದ ವಧು ನನಗೆ ಮದುವೆಯಾಗಲು ಇಷ್ಟವಿಲ್ಲ ಎಂದು ಹೇಳುವ ಮೂಲಕ ವಿವಾಹವನ್ನು ಮುರಿದಿದ್ದಾಳೆ. ಆರು ತಿಂಗಳ ಹಿಂದೆಯೇ ಓದುವ ಕಾರಣವೊಡ್ಡಿ ಮದುವೆ ಆಗಲ್ಲ ಎಂದು ಹಠ‌ ಹಿಡಿದಿದ್ದಳು. ಆದ್ರೆ, ಕುಟುಂಬಸ್ಥರು ಮನವೊಲಿಸಿ ಒಪ್ಪಿಸಿದ್ದರು. ಇದೀಗ ವಧು ಮದುವೆ ಮಂಟಪದವರೆಗೂ ಬಂದು ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲೇ ವಧು ಮದುವೆ ನಿರಾಕರಿಸಿದ್ದಾಳೆ. ಈ ಮದುವೆ 6 ತಿಂಗಳ ಹಿಂದೆ ನಿಶ್ವಿತಾರ್ಥವಾಗಿತ್ತು. ಮದುವೆ ಬಗ್ಗೆ ಹುಡುಗಿ ಮನೆಯವರು ಕೇಳಿದ ನಂತರವೇ ಮದುವೆ ನಿಶ್ಚಯವಾಗಿತ್ತು.

ಓದಿಸುತ್ತೇನೆ ಅಂದ್ರೆ ಮಾತ್ರ ಮದುವೆ ಆಗುತ್ತೇನೆ ಎಂದು ಹುಡುಗಿ ಹೇಳಿದ್ದಳು. ಅದರಂತೆ ವರ 50 ಸಾವಿರ ಕೊಟ್ಟು ಚಿಕ್ಕನಾಯಕನಹಳ್ಳಿಯ ಕಾಲೇಜ್​​ಗೆ ಬಿಸಿಎ ಸೇರಿಸಿದ್ದ. ಆದ್ರೆ, ಕೆಲ ತಿಂಗಳ ಹಿಂದೆ ಹುಡುಗಿ ಮದುವೆ ಆಗಲ್ಲ ಅಂತ ಹೇಳಿದ್ದಳು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಮಾತುಕತೆ ಮಾಡಲು ಊರಿನವರನ್ನು ಕಳಿಸಿದ್ದೆವು. ಆಗ ಹುಡುಗಿ ಮನೆಯವರು, ತಂದೆ-ತಾಯಿ ಹಾಗೇನಿಲ್ಲ.‌ ನೀವು ಮದುವೆ ಕ್ಯಾನ್ಸಲ್ ಮಾಡಿದ್ರೆ ಸೂಸೈಡ್ ಮಾಡಿಕೊಳ್ಳುತ್ತೇವೆಂದು ಹೆದರಿಸಿದ್ದರು. ನಮ್ಮ ಹುಡುಗಿಗೆ ನಾವು ತಿಳಿ ಹೇಳಿದ್ದೇವೆ. ಮದುವೆ ಆಗುವುದಕ್ಕೆ ಒಪ್ಪಿದ್ದಾಳೆ ಎಂದು ವಧು ತಂದೆ-ತಾಯಿ ಹೇಳಿದ್ದರು ಎನ್ನುತ್ತಾರೆ ವರ ಕಡೆಯವರು ದೂರಿದ್ದಾರೆ.

ಡಿಸೆಂಬರ್ 6ರಂದು ಆರತಕ್ಷತೆ, ಡಿಸೆಂಬರ್ 7ರಂದು ಮದುವೆ ಕಾರ್ಯಕ್ರಮವಿತ್ತು. ಆದ್ರೆ, ಹುಡುಗಿ ಡಿಸೆಂಬರ್ 6ರಂದು 112ಮೂಲಕ ಪೊಲೀಸರಿಗೆ ಕರೆ ಮಾಡಿದ್ದಾಳೆ. ನನಗೆ ಮದುವೆ ಇಷ್ಟ ಇಲ್ಲ ಬಲವಂತದ ಮದುವೆ ನಡೆಯುತ್ತಿದೆ ಎಂದು ಹೇಳಿದ್ದಾಳೆ . ನಾನು ಮದುವೆ ಆಗಲು ಇಷ್ಟ ಇಲ್ಲ ಅಂತ ಮೊದಲಿಗೆ ಪೊಲೀಸರಿಗೆ ಹೇಳಿದ್ದಳು. ಹುಡುಗನಿಗೆ ವಿಷಯ ತಿಳಿದಿದ್ದು ಹುಡುಗಿಗೆ ಕರೆ ಮಾಡಿದ್ದ. ಆಗ ಹುಡುಗಿ ನಾನು ಪೊಲೀಸರಿಗೆ ಕಾಲ್ ಮಾಡಿಲ್ಲ. ನಮಗೆ ಆಗದವರು ಕಾಲ್ ಮಾಡಿದ್ದಾರೆ ಎಂದಿದ್ದಳು. ನಂತರ ಪೊಲೀಸರು ಚೌಟರಿಯಿಂದ ಹೋಗಿದ್ದರು.

ನಂತರ ಆರತಕ್ಷತೆ, ಮದುವೆ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಹುಡುಗಿ ಕುಟುಂಬದವರೇ ಮಂಟಪಕ್ಕೆ ಬಂದಿದ್ದಾರೆ. ತಾಳಿ ಕಟ್ಟುವ ಕಾರ್ಯದವರೆಗೆ ಹುಡುಗಿ ಏನೂ ಹೇಳಿಲ್ಲ. ತಾಳಿ ಕಟ್ಟುವ ವೇಳೆ ನಾನು ಮದುವೆ ಆಗಲ್ಲ ಅಂತ ಹಠ ಹಿಡಿದ್ದಾಳೆ. ವಧು ತಾಳಿ ಬೇಡವೆಂದ ಕಾರಣಕ್ಕೆ ವರನೂ ತಾಳಿ ಕಟ್ಟಲಿಲ್ಲ. ಯುವತಿಯ ತಂದೆ ಮಗಳು ಏನು ಹೇಳುತ್ತಾಳೆ ಹಾಗೇ ಆಗಲಿ ಅಂದರು. ಮದುವೆಗೆ ಖರ್ಚು ಮಾಡಿದ್ದ ಹಣದಲ್ಲಿ 3 ಲಕ್ಷ ವಾಪಸ್​ ಕೊಡಲು ಪೊಲೀಸರ ಸಮ್ಮುಖದಲ್ಲಿ ಒಪ್ಪಿಸಿ ಬಿಡುಗಡೆ ಮಾಡಿಕೊಂಡಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top