ಭರಮಸಾಗರ ಕೆರೆಗೆ ಶಿವನ ಜಡೆಯಿಂದ ಗಂಗೆ ಇಳಿದಂತೆ ಕಂಡ ಕಾಮನಬಿಲ್ಲಿನ ಮನಮೋಹಕ ದೃಶ್ಯ…

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

 

ಹರನ ಜಡೆಯಿಂದ ಹರಿಯ ಅಡಿಯಿಂದ
ಋಷಿಯ ತೊಡೆಯಿಂದ ನುಸುಳಿ ಬಾ;
ದೇವ ದೇವರನು ತಣಿಸಿ ಬಾ
ದಿಗ್ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ ಇಳಿದು ಬಾ.

ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಆಶೀರ್ವಾದದ ಸತ್ಯ ಸಂಕಲ್ಪಕ್ಕೆ ಭರಮಸಾಗರದ ಐತಿಹಾಸಿಕ ಕೆರೆಗೆ ಗಂಗಾವತರಣವಾಗಿರುವುದು ದಿವ್ಯಸಾಕ್ಷಿಯಾಗಿದೆ.

IMG 20211104 101048

ಬೇಂದ್ರೆಯವರ ಕವಿತೆಯ ಸಾಲಿನಂತೆ ನೂರಾರು ಸಂಕಷ್ಟಗಳ ಒಳ ಸುಳಿಯನ್ನು ಪರಿಹರಿಸಿದ ಜಲಋಷಿಯ ಆಣತಿಯಂತೆ ತುಂಗಭದ್ರೆಯರು ನುಸುಳಿಕೊಂಡು ಕೆರೆಯಂಗಳದಿ ಅವಿರ್ಭವಿಸಿದ್ದಾರೆ. ಶಿಷ್ಯ ವತ್ಸಲರಾದ ಶ್ರೀಜಗದ್ಗುರುಗಳವರ ಆಶಯದ ಜಲಕಲ್ಯಾಣವೇ ಜನಕಲ್ಯಾಣದ ಸಾಕ್ಷಾತ್ಕಾರದಿ ಪ್ರೇರಣೆ ಹೊಂದಿ ತನ್ನ ಮುಡಿಯಲ್ಲಿದ್ದ ಗಂಗೆಯನ್ನು ಭೂಮಿಗೆ ಇಳಿಸಿದ ಶಿವನು ಶ್ರೀಗುರುವಿನ ಜಲಕೈಂಕರ್ಯವನ್ನು ಕಾಣಲು ಇಂದ್ರಚಾಪವನ್ನು ಇಳಿಸಿ ಈ ಸಂವಹನದಿ ತನ್ನ ಮೂರನೇ ಕಣ್ಣಿನಿಂದ ಭರಮಸಾಗರ ಕೆರೆ ಮಧ್ಯದ ಕಾರಂಜಿಯ ಬಿಂದುವಿಗೆ ಜೋಡಿಸಿ ಕಣ್ಮನ ತಣಿಸಿಕೊಂಡು ಪೂಜ್ಯರ ಕಾಯಕ ಗಂಭೀರತೆ ಮತ್ತು ಸಮಾಜಮುಖಿ ಸದ್ಭಾವನೆಯನ್ನು ದರ್ಶಿಸಿ, ಗಗನದ ಚಲುವನಯ ಕಾಮನಬಿಲ್ಲು ಭೂಮಿಗೆ ಬಾನಿಗೆ ಸೇತುವೆ ಮಾಡಿ ಅವಿರ್ಭವಿಸಿದ ಗಂಗೆಗೆ ಶುಭಕಾಮನೆಯ ಕೋರಿದ ಕಲ್ಪನೆಯ ಒಸಗೆಯ ತೃಪ್ತಿ ಹೊಂದಿದ ಭಾವವು ಸಪ್ತ ವರ್ಣದ ಚಂದದ ಕಮಾನು ಇಮ್ಮಡಿಸಿ ಸಂಪ್ರೀತವಾಗುವಂತೆ ಬುಧವಾರ ಸಂಜೆಯ ಗೋಧೂಳಿ ಸಮಯದಲ್ಲಿ ಕೆರೆಯಂಗಳದಿ ಕಂಡ ಕಾಮನಬಿಲ್ಲಿನ ದೃಶ್ಯ ಭಾಸವಾಗುತ್ತಿದೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *