Connect with us

Dvgsuddi Kannada | online news portal | Kannada news online

ಭರಮಸಾಗರ ಕೆರೆಗೆ ಶಿವನ ಜಡೆಯಿಂದ ಗಂಗೆ ಇಳಿದಂತೆ ಕಂಡ ಕಾಮನಬಿಲ್ಲಿನ ಮನಮೋಹಕ ದೃಶ್ಯ…

IMG 20211104 WA0001

ಪ್ರಮುಖ ಸುದ್ದಿ

ಭರಮಸಾಗರ ಕೆರೆಗೆ ಶಿವನ ಜಡೆಯಿಂದ ಗಂಗೆ ಇಳಿದಂತೆ ಕಂಡ ಕಾಮನಬಿಲ್ಲಿನ ಮನಮೋಹಕ ದೃಶ್ಯ…

 

ಹರನ ಜಡೆಯಿಂದ ಹರಿಯ ಅಡಿಯಿಂದ
ಋಷಿಯ ತೊಡೆಯಿಂದ ನುಸುಳಿ ಬಾ;
ದೇವ ದೇವರನು ತಣಿಸಿ ಬಾ
ದಿಗ್ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ ಇಳಿದು ಬಾ.

ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಆಶೀರ್ವಾದದ ಸತ್ಯ ಸಂಕಲ್ಪಕ್ಕೆ ಭರಮಸಾಗರದ ಐತಿಹಾಸಿಕ ಕೆರೆಗೆ ಗಂಗಾವತರಣವಾಗಿರುವುದು ದಿವ್ಯಸಾಕ್ಷಿಯಾಗಿದೆ.

IMG 20211104 101048

ಬೇಂದ್ರೆಯವರ ಕವಿತೆಯ ಸಾಲಿನಂತೆ ನೂರಾರು ಸಂಕಷ್ಟಗಳ ಒಳ ಸುಳಿಯನ್ನು ಪರಿಹರಿಸಿದ ಜಲಋಷಿಯ ಆಣತಿಯಂತೆ ತುಂಗಭದ್ರೆಯರು ನುಸುಳಿಕೊಂಡು ಕೆರೆಯಂಗಳದಿ ಅವಿರ್ಭವಿಸಿದ್ದಾರೆ. ಶಿಷ್ಯ ವತ್ಸಲರಾದ ಶ್ರೀಜಗದ್ಗುರುಗಳವರ ಆಶಯದ ಜಲಕಲ್ಯಾಣವೇ ಜನಕಲ್ಯಾಣದ ಸಾಕ್ಷಾತ್ಕಾರದಿ ಪ್ರೇರಣೆ ಹೊಂದಿ ತನ್ನ ಮುಡಿಯಲ್ಲಿದ್ದ ಗಂಗೆಯನ್ನು ಭೂಮಿಗೆ ಇಳಿಸಿದ ಶಿವನು ಶ್ರೀಗುರುವಿನ ಜಲಕೈಂಕರ್ಯವನ್ನು ಕಾಣಲು ಇಂದ್ರಚಾಪವನ್ನು ಇಳಿಸಿ ಈ ಸಂವಹನದಿ ತನ್ನ ಮೂರನೇ ಕಣ್ಣಿನಿಂದ ಭರಮಸಾಗರ ಕೆರೆ ಮಧ್ಯದ ಕಾರಂಜಿಯ ಬಿಂದುವಿಗೆ ಜೋಡಿಸಿ ಕಣ್ಮನ ತಣಿಸಿಕೊಂಡು ಪೂಜ್ಯರ ಕಾಯಕ ಗಂಭೀರತೆ ಮತ್ತು ಸಮಾಜಮುಖಿ ಸದ್ಭಾವನೆಯನ್ನು ದರ್ಶಿಸಿ, ಗಗನದ ಚಲುವನಯ ಕಾಮನಬಿಲ್ಲು ಭೂಮಿಗೆ ಬಾನಿಗೆ ಸೇತುವೆ ಮಾಡಿ ಅವಿರ್ಭವಿಸಿದ ಗಂಗೆಗೆ ಶುಭಕಾಮನೆಯ ಕೋರಿದ ಕಲ್ಪನೆಯ ಒಸಗೆಯ ತೃಪ್ತಿ ಹೊಂದಿದ ಭಾವವು ಸಪ್ತ ವರ್ಣದ ಚಂದದ ಕಮಾನು ಇಮ್ಮಡಿಸಿ ಸಂಪ್ರೀತವಾಗುವಂತೆ ಬುಧವಾರ ಸಂಜೆಯ ಗೋಧೂಳಿ ಸಮಯದಲ್ಲಿ ಕೆರೆಯಂಗಳದಿ ಕಂಡ ಕಾಮನಬಿಲ್ಲಿನ ದೃಶ್ಯ ಭಾಸವಾಗುತ್ತಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

  • rain22 rain22

    ಪ್ರಮುಖ ಸುದ್ದಿ

    ಮುಂದಿನ ತಿಂಗಳು ವಾಡಿಕೆಗಿಂತ ಅಧಿಕ ಮಳೆ ಮುನ್ಸೂಚನೆ

    By

    ಬೆಂಗಳೂರು: ಈ ಬಾರಿ ಮೇ, ಜೂನ್ ತಿಂಗಳಲ್ಲಿ ಮುಂಗಾರು ಮಳೆ (monsoon rain)  ನಿರೀಕ್ಷೆ ಮೀರಿ ಸುರಿದಿದೆ. ಇನ್ನೂ ಕೆಲ ಜಿಲ್ಲೆಯಲ್ಲಿ...

  • astrology today astrology today

    ಪ್ರಮುಖ ಸುದ್ದಿ

    ಶನಿವಾರದ ರಾಶಿ ಭವಿಷ್ಯ 28 ಜೂನ್ 2025

    By

    ಈ ರಾಶಿಯವರ ಉದ್ಯೋಗ ವ್ಯಾಪಾರ ವಹಿವಾಟಗಳಲ್ಲಿ ಭಾರಿ ನಷ್ಟ, ಈ ರಾಶಿಯವರ ಹಿತ ಶತ್ರುಗಳನ್ನು ನಿಯಂತ್ರಿಸುವುದೇ ಕಷ್ಟ, ಶನಿವಾರದ ರಾಶಿ ಭವಿಷ್ಯ...

  • astrology today astrology today

    ಪ್ರಮುಖ ಸುದ್ದಿ

    ಗುರುವಾರದ ರಾಶಿ ಭವಿಷ್ಯ 26 ಜೂನ್ 2025

    By

    ಈ ರಾಶಿಯವರಿಗೆ ನಂಬಿದವರು ದೂರ ಆಗುತ್ತಾರೆ, ಈ ರಾಶಿಯವರ ಮದುವೆ ವಿಳಂಬ ಎಂಬ ಏಕೆ? ಗುರುವಾರದ ರಾಶಿ ಭವಿಷ್ಯ 26 ಜೂನ್...

  • images 11 images 11

    ಪ್ರಮುಖ ಸುದ್ದಿ

    ಗಜಕೇಸರಿ ಯೋಗ ಮಾಹಿತಿ

    By

    ಸೋಮಶೇಖರ್B.Sc ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರಪ್ರವೀಣರು. Mob.93534 88403 ವ್ಯಕ್ತಿಯ ಜನ್ಮ ಕುಂಡಲಿಯನ್ನು ನೋಡಿ ಯೋಗಗಳನ್ನು ನೋಡಬಹುದು. ಅದರಲ್ಲಿ ಒಂದು...

  • astrology today astrology today

    ಪ್ರಮುಖ ಸುದ್ದಿ

    ಮಂಗಳವಾರದ ರಾಶಿ ಭವಿಷ್ಯ 24 ಜೂನ್ 2025

    By

    ಈ ರಾಶಿಯ ವಿಚ್ಛೇದನ ಪಡೆದ ಪತಿ ಪತ್ನಿ ಮತ್ತೆ ಸೇರೋ ಬಯಕೆ, ಈ ರಾಶಿಯ ಮಾಜಿ ಸಂಗಾತಿ ಹಠಾತ್ ಭೇಟಿಯಾಗುವರು, ಮಂಗಳವಾರದ...

To Top