ಭರಮಸಾಗರ: ಭರಮಸಾಗರದ ಬಿಚ್ಚುಗತ್ತಿ ಭರಮಣ್ಣ ನಾಯಕನ ಕೆರೆಗೆ ಸೆ.29 ರಿಂದ ಸಂಕಲ್ಪದಂತೆ ಏತ ನೀರಾವರಿ ಮೂಲಕ ನೀರು ಹರಿಯುತ್ತಿರುವುದು ನಮಗೆ ಅತೀವ ಸಂತಸ ತಂದಿದೆ. ಈ ದೃಶ್ಯವನ್ನು ಆ.4ರಂದು ರೋಮ್ನಲ್ಲಿ ನಡೆದ ಪರಿಸರ ವೈಪರೀತ್ಯ ಕುರಿತಾದ ಅಂತರಾಷ್ಟ್ರೀಯ ವಿಜ್ಞಾನಿಗಳ ಮತ್ತು ಧಾರ್ಮಿಕ ನೇತಾರರ ಸಮ್ಮೇಳನದಲ್ಲಿ ಬಿತ್ತರಿಸಲಾಗಿದೆ. ೀ ಮೂಲಕ ಭರಮಸಾಗರ ಕೆರೆ ವಿಶ್ವಮಟ್ಟದಲ್ಲಿಯೇ ಜನಜನಿತವಾಗಿದೆ ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಭರಮಸಾಗರ ದೊಡ್ಡಕೆರೆಗೆ ತುಂಗಭದ್ರಾ ನದಿಯ ಹರಿಹರದ ಹಲಸಬಾಳುವಿನಿಂದ ಏತ ನೀರಾವರಿ ಮೂಲಕ ದೊಡ್ಡಕ್ಕೆಗೆ ಹರಿಸುತ್ತಿರುವ ನೀರನ್ನು ವೀಕ್ಷಿಸಿದ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಗಳವರ 29ನೇ ಶ್ರದ್ಧಾಂಜಲಿ ಸಂದರ್ಭದಲ್ಲಿ ಯೋಗಾಯೋಗವೆಂಬಂತೆ ನೀರು ಹರಿದಿದೆ. ಈ ಕೆರೆ ಸೇರಿ ಎಲ್ಲಾ 42 ಕೆರೆಗಳಿಗೂ ಏಕಕಾಲಕ್ಕೆ ಹರಿಯುವ ವಿಶಿಷ್ಟ ಯೋಜನೆ ಇದಾಗಿದ್ದು. ಈ ಯೋಜನೆಗೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮ ಹಾಗೂ ಯಡಿಯೂರಪ್ಪ ಅವರ ಸಹಕರವಿದೆ. ಇದರ ಜೊತೆ ಕರ್ನಾಟಕ ನೀರಾವರಿ ಯೋಜನೆಗಳಲ್ಲಿಯೇ ಅತಿ ಶೀಘ್ರವಾಗಿ ಕಾಮಗಾರಿ ಮುಗಿಸಿದ ಚರಿತ್ರಾರ್ಹ ಯೋಜನೆಯಾಗಿದೆ ಎಂದರು.

ಭೂಮಿಯಲ್ಲಿ ನೀರು ಕಾಣಲು ಈ ಭಾಗದ ಜನರು ಲಕ್ಷಾಂತರ ರೂಪಾಯಿಗಳನ್ನು ವಿನಿಯೋಗಿಸಿ ಹತಾಶರಾಗುತ್ತಿದ್ದರು. ಈಗ ಕೆರೆಗೆ ನೀರು ಬಂದು ಕೊಳವೆಬಾವಿಗಳಲ್ಲಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿದೆ. ಕೊಳವೆ ಬಾವಿಗಳಿಗೆ ಹಣ ಹಾಕುವುದು ತಪ್ಪುತ್ತದೆ. ಎಲ್ಲರೂ ತಮ್ಮ ಆದಾಯದಲ್ಲಿ ಇಂತಿಷ್ಟು ಭಾಗವನ್ನು ತೆಗೆದಿರಿಸಿ ಅದರಲ್ಲಿ ತಮ್ಮ ಮನೆಯ ಮಹಿಳೆಯರಿಗೆ ಒಡವೆಗಳನ್ನು ಮಾಡಿಸಬೇಕು. ಎಲ್ಲರೂ ವಾಗ್ದಾನ ಮಾಡಬೇಕು ಎಂದು ಕಿವಿಮಾತು ಹೇಳಿದರು.
ದಾವಣಗೆರೆ ಸಂಸದ ಜಿಎಂ. ಸಿದ್ಧೇಶ್ವರ ಮಾತನಾಡಿ, ಜಗಳೂರು ತರಳಬಾಳು ಹುಣ್ಣಿಮೆಯಲ್ಲಿ ಪ್ರಸ್ತಾಪಗೊಂಡು ಕಾರ್ಯಗತವಾಗಿ ಇಂದು ಭರಮಸಾಗರ ಕೆರೆಗೆ ನೀರುಹರಿಯುವ ದೃಶ್ಯವು ಸಾಕಾರಗೊಂಡಿದೆ 55. ಕಿ.ಮೀ ಮೂಲಕ ನೇರವಾಗಿ ಇಂದು ನೀರು ಹರಿದು ಬರುತ್ತಿದೆ. ಇದರಲ್ಲಿ ಪೂಜ್ಯರ ಅತ್ಯಾಸಕ್ತಿಯ ಪರಿಶ್ರಮ ಇದೆ ಎಂದರು.
ಶ್ರೀಗಳು ಆಧುನಿಕ ಭಗೀರಥರಾಗಿ ಎಲ್ಲಾ ರೈತರಿಗೂ ನೀರು, ವಿದ್ಯುತ್ ಹಾಗೂ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎನ್ನುವ ಮುಂದಾಲೋಚನೆ ಫಲಪ್ರದವಾಗಿದೆ. ಅದರಂತೆ ಮುಂದಿನ ದಿನಗಳಲ್ಲಿ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯನ್ನೂ ತ್ಮರಿತವಾಗಿ ಶ್ರೀಗಳು ಯಶಸ್ವಿಗೊಳಿಸಬೇಕೂ ಎಂದು ಮನವಿ ಮಾಡಿದರು.ಆಧುನಿಕ ಭಗೀರಥರಾದ ಇಂತಹ ಪೂಜರನ್ನು ಪಡೆದಿರುವುದು ನಮ್ಮ ಪುಣ್ಯ ಕೆರೆಗಳಿಗೆ ತುಂಗಭದ್ರೆಯಿಂದ ಭರ್ತಿಯಾದರೆ 40-50 ಗ್ರಾಮಗಳ ರೈತರ ಮುಖದಲ್ಲಿ ಸಂತಸ ಸದಾ ಇರುತ್ತದೆ. ವಿದ್ವತ್ಪೂರ್ಣ ಪೂಜ್ಯರ ಲೋಕಮುಖಿ ಸೇವಾಕಾರ್ಯ ಗಳ ಬಗ್ಗೆ ಶಾಲಾ ಮಕ್ಕಳು ಓದುವಂತಾಲು ಪಠ್ಯಪುಸ್ತಕಗಳಲ್ಲಿ ಪಠ್ಯವಾಗಬೇಕು ಎಂದರು.
ಶಾಸಕ ಎಂ. ಚಂದ್ರಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ಶರಾವತಿಯಿಂದ ನೇರವಾಗಿ 220 ಕೆವಿ ವಿದ್ಯುತ್ ಲೈನ್ ಬರುತ್ತಿದ್ದು ಎಲ್ಲಾ ರೈತರಿಗೂ ನಿರಂತರ 7 ಗಂಟೆ ವಿದ್ಯುತ್ ಒದಗಿಸಲಾಗುವುದು ಕೆಲ ದಿನದಲ್ಲಿಯೇ ಈ ಕೆರೆನೀರು ಉದ್ಭಾಟನೆಗೆ ಮುಖ್ಯಮಂತ್ರಿ ಹಾಗೂ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಭರಮಸಾಗರದ ದೊಡ್ಡಕೆರೆ ಏತನೀರಾವರಿ ಯೋಜನೆಯನ್ನು ಪೂಜ್ಯರ ಸಾನಿಧ್ಯದ ಲಿ ನೆರವೇರಿಸಲಾಗುವುದು. ಐನೂರಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಯಲು ಕಾರಣಗಿರುವ ಶ್ರೀ ಜಗದ್ಗುರುಗಳ ಕಂಚಿನ ಪ್ರತಿಮೆ ಸ್ಥಾಪನೆಗೆ ಎರಡು ಕೋಟಿ ನೀಡುವುದಾಗಿ ತಿಳಿಸಿದರು.
ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ ಬರದ ನಾಡಾದ ಜಗಳೂರು ತಾಲ್ಲೂಕಿನ 57, ಕೆರೆಗಳಿಗೆ ಶೀಘ್ರದಲ್ಲಿ ನೀರು ಬರಲಿದೆ. ನಾಲ್ಕು ಕಿಲೋಮೀಟರ್ ಪೈಪ್ ಲೈನ್ ಮಾತ್ರ ಬಾಕಿ ಇದ್ದು ಕೆಲಸ ತ್ವರಿತ ಗತಿಯಲ್ಲಿ ಸಾಗುತ್ತಿದೆ.ಜಗಳೂರು ತಾಲ್ಲೂಕು ಕೆರೆ ತುಂಬಿಸುವ ಯೋಜನೆಗೆ ಪೂಜ್ಯರ ಶ್ರಮ ಅಪಾರವಾದದು. ಅವರನ್ನು ಪಡೆದ ಈ ನಾಡು ಧನ್ಯ ಎಂದರು.
ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಇಚ್ಛಾಶಕ್ತಿಯಿಂದ ಅವರು ಈ ಭಾಗದ ಜನರ ಮೇಲೆ ತೋರಿಸಿದ ತಾಯ್ತನದ ಪ್ರೀತಿಯಿಂದಾಗಿ ಬರದ ನಾಡು ನೀರು ಕಂಡಿದೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಅವರು ಪೂಜ್ಯರ ಆಶಯಕ್ಕೆ ಬೆಲೆ ಕೊಟ್ಟಿದ್ದಾರೆ. ಕೆರೆಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸ್ವಾಮೀಜಿಯವರ ಅವರ ಪ್ರತಿಮೆ ನಿರ್ಮಿಬೇಕು. ಅವರ ಹೆಸರಲ್ಲಿ ಈ ಜಾಗವನ್ನು ಉತ್ತಮ ತಾಣವನ್ನಾಗಿ ಅಭಿವೃದ್ಧಿ ಪಡಿಸಬೇಕು ಎಂದು ಆಗ್ರಹಿದರು.
ನೀರು ತಂದ ಕರುನಾಡಿನ ತರಳಬಾಳು ಜಲಋಷಿ ತರಳಬಾಳು ಶ್ರೀ ಜಗದ್ಗುರು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಪಟ್ಟಣದಲ್ಲೆಲ್ಲಾ ತಳಿರು ತೋರಣ ಕಟ್ಟಲಾಗಿತ್ತು. ಸಾವಿರಾರು ಯುವಕರು ಬೈಕ್ ಜಾತಾದ ಮುಖಾಂತರ ಸಿರಿಗೆರೆಯಿಂದ ಭರಮಸಾಗರದವರೆಗೂ ಶ್ರೀ ಜಗದ್ಗುರುಗಳವರನ್ನು ಕರೆತಂದರು.



