Connect with us

Dvgsuddi Kannada | online news portal | Kannada news online

ಮಳೆ ಕೊರತೆ: ಭದ್ರಾ ಜಲಾಶಯ ಒಳ ಹರಿವು ತೀವ್ರ ಕುಸಿತ; ಇಂದಿನ ನೀರಿನ ಮಟ್ಟ 166.9 ಅಡಿ

images 87

ದಾವಣಗೆರೆ

ಮಳೆ ಕೊರತೆ: ಭದ್ರಾ ಜಲಾಶಯ ಒಳ ಹರಿವು ತೀವ್ರ ಕುಸಿತ; ಇಂದಿನ ನೀರಿನ ಮಟ್ಟ 166.9 ಅಡಿ

ಭದ್ರಾವತಿ: ಇಡೀ ರಾಜ್ಯದಲ್ಲಿಯೇ ತೀವ್ರವಾಗಿ ಮಳೆ ಕೊರತೆ ಕಾಡುತ್ತಿದೆ. ಇದಕ್ಕೆ ಮಲೆನಾಡು ಕೂಡ ಹೊರತಾಗಿಲ್ಲ. ಮಲೆನಾಡಿನ ಭದ್ರಾ ಜಲಾಶಯ ಪ್ರದೇಶದಲ್ಲಿಯೂ ಮಳೆ ಕೊರತೆ ಎದುರಾಗಿದ್ದು, ಡ್ಯಾಂನ ಒಳ ಹರಿವು ತೀವ್ರ ಕುಸಿತ ಕಂಡಿದೆ.ಇಂದು (ಆ.16) ಬೆಳಗ್ಗೆ 6 ಗಂಟೆ ವೇಳೆಗೆ ಕೇವಲ 1,743 ಕ್ಯೂಸೆಕ್ ಮಾತ್ರ ಒಳ ಹರಿವಿದೆ. ಈಗಾಗಲೇ 100 ದಿನ ‌ಮುಂಗಾರು ಹಂಗಾಮಿಗೆ ನೀರು ಹರಿಸುವುದಾಗಿ ನೀರಾವರಿ ಇಲಾಖೆ ಹೇಳಿದ್ದು, ಆ.10ರಿಂದಲೇ ಕಾಲುವೆ ಮೂಲಕ ಬಿಡಲಾಗುತ್ತಿದೆ. ತೀವ್ರ ಮಳೆ ಕೊರತೆಯಿಂದ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಇದರಿಂದ ರೈತರಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿದೆ.

ಇಂದಿನ ನೀರಿನ (ಆ.16) ಮಟ್ಟ 166.9 ಅಡಿಯಷ್ಟಿದ್ದು, 3,225 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ 183.4 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಈ ವರ್ಷ ಜೂನ್ ನಲ್ಲಿ ನಿರೀಕ್ಷತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆ‌ ನೀರು ಸಂಗ್ರಹ ಕುಸಿದಿದೆ. ಕಳೆದ ವರ್ಷದ ಈ ದಿನಕ್ಕೆ ಹೋಲಿಸಿದ್ದರೆ 16 ಅಡಿಯಷ್ಟು ನೀರು ಕೊರತೆಯಲ್ಲಿದೆ.

  • ಡ್ಯಾಂ ನೀರಿನ ಸಂಗ್ರಹದ ವಿವರ
  • ಇಂದಿನ ನೀರಿನ ಮಟ್ಟ 166.9ಅಡಿ
  • ಪೂರ್ಣ ನೀರಿನ ಮಟ್ಟ:186 ಅಡಿ
  • ಇಂದಿನ ಸಾಮರ್ಥ್ಯ: 49.480 ಟಿಎಂಸಿ
  • ಒಟ್ಟು ಸಾಮರ್ಥ್ಯ: 71.535 ಟಿಎಂಸಿ
  • ಒಳ ಹರಿವು: 1,743 ಕ್ಯೂಸೆಕ್
  • ಒಟ್ಟು ಹೊರ ಹರಿವು: 3225ಕ್ಯೂಸೆಕ್
  • ಬಲದಂಡೆ ನಾಲೆ: 2,650 ಕ್ಯೂಸೆಕ್
  • ಎಡದಂಡೆ ನಾಲೆ: 380 ಕ್ಯೂಸೆಕ್
  • ಕಳೆದ ವರ್ಷ ಈ ದಿನ : 183.4 ಅಡಿ

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top