ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಕಾಡಜ್ಜಿ ಗ್ರಾಮ ನಾರದಮುನಿ ಎಂ (ನಾನಿ) ಅವರ ನಿರ್ದೇಶನದಲ್ಲಿ ರೈತರ ಬದುಕಿನ ಕುರಿತಾದ ರೈತಮಿತ್ರ ಕಿರುಚಿತ್ರವನ್ನು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಇಂದು ಲೋಕಾರ್ಪಣೆ ಮಾಡಿದರು.
ಎಸ್.ಎಸ್.ಮಲ್ಲಿಕಾರ್ಜುನ್ ನಿವಾಸ ಶಿವಪಾರ್ವತಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಯೂಟ್ಯೂಬ್ ಗೆ ಆಪ್ ಲೋಡ್ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು.
ನಂತರ ಮಾತನಾಡಿದ ಎಸ್.ಎಸ್.ಮಲ್ಲಿಕಾರ್ಜುನ್, ಸುಮಾರು 18 ನಿಮಿಷಗಳಲ್ಲಿ ರೈತರು ಮತ್ತವರ ಮಕ್ಕಳ ಸಮಸ್ಯೆಗಳ ವಾಸ್ತವಾಂಶವನ್ನು ಮನಮುಟ್ಟುವಂತೆ ನಾರದಮುನಿ ಚಿತ್ರೀಕರಿಸಿದ್ದು, ಈ ಚಿತ್ರವನ್ನು ಗ್ರಾಮಾಂತರ ಪ್ರದೇಶ ಜನರಷ್ಟೇ ಅಲ್ಲ ನಗರ ಪ್ರದೇಶದ ಜನರು ಸಹ ವೀಕ್ಷಣೆ ಮಾಡುವ ಮೂಲಕ ದಾವಣಗೆರೆ ತಾಲ್ಲೂಕಿನ ಕಾಡಜ್ಜಿ ಗ್ರಾಮದ ಯುವ ಪ್ರತಿಭೆ ನಾರದಮುನಿಯವರನ್ನು ಪ್ರೋತ್ಸಾಹಿಸಬೇಕೆಂದರು.

ರೈತರ ಬದುಕಿನ ಸಾಕಷ್ಟು ಗೋಜಲುಗಳನ್ನು ಚಿತ್ರಿಸಿರುವ ಇಡೀ ಚಿತ್ರತಂಡವೇ ಸ್ಥಳೀಯ ಪ್ರತಿಭಾವಂತರಾಗಿದ್ದು, ರೈತರ ಸಮಸ್ಯೆಯನ್ನು ಜಗತ್ತಿಗೆ ತೋರಿಸಲು ಇಂತಹ ಕಿರುಚಿತ್ರ, ಸಾಕ್ಷ್ಯಚಿತ್ರಗಳಾಗಬೇಕಿದೆ. ಯುವಜನತೆ ರೈತರ ಸಂಕಷ್ಟಗಳನ್ನು ಹೊರ ಜಗತ್ತಿಗೆ ತಿಳಿಸುವ ಮೂಲಕ ರೈತ ಸಮುದಾಯವನ್ನು ಆತ್ಮ ವಿಶ್ವಾಸ ತುಂಬುವ ಕೆಲಸವಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ರೈತಮಿತ್ರ ಕಿರುಚಿತ್ರದ ನಿರ್ದೇಶಕ ನಾರದಮುನಿ ಎಂ , ಕಾಂಗ್ರೆಸ್ ಯುವ ಮುಖಂಡ ಕಾಡಜ್ಜಿ ಮುರುಳಿ, ಚಿತ್ರತಂಡದ ನಂಜುಂಡಿ, ಸಿದ್ದೇಶ್, ಚಂದ್ರು, ಆಂಜನೇಯ, ಶಿವು, ನವೀನ್, ತೇಜು, ನಾಗರಾಜ್, ಅನಂತ್, ಕಿರುಚಿತ್ರದ ಬಾಲನಟ ಲೋಕಮಿತ್ರ ಮತ್ತಿತರರಿದ್ದರು.



