ನವದೆಹಲಿ: ಎರಡು ವಾರಗಳ ಮುನ್ನವೇ ನೈರುತ್ಯ ಮುಂಗಾರು ಇಡೀ ದೇಶದಾದ್ಯಂತ ವ್ಯಾಪಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ರಾಜಸ್ಥಾನ, ಹರಿಯಾಣ, ಪಂಜಾಬ್ಗೆ ನೈರುತ್ಯ ಮುಂಗಾರು ಆಗಮಿಸಿದ್ದು. ಇಡೀ ದೇಶದಾದ್ಯಂತ ಮುಂಗಾರು ಮಳೆ ವ್ಯಾಪಿಸಿದೆ. ಸಾಮಾನ್ಯವಾಗಿ ಜೂನ್ 1ರಂದು ಕೇರಳ ಪ್ರವೇಶಿಸುವ ಮುಂಗಾರು ಪಶ್ಚಿಮ ರಾಜಸ್ಥಾನದ ಶ್ರೀಗಂಗಾನಗರಕ್ಕೆ ತಲುಪಲು 45 ದಿನಗಳನ್ನು ತೆಗೆದುಕೊಳ್ಳುತ್ತದೆ.
ಈ ವರ್ಷ, ಒಂದು ವಾರ ಮೊದಲೇ ತಲುಪುವ ನಿರೀಕ್ಷೆ ಇತ್ತು. ಜುಲೈ 8ರ ಒಳಗೆಯೇ ವ್ಯಾಪಿಸಲಿದೆ ಎಂದು ನಿರೀಕ್ಷಿಸಲಾಗಿತ್ತು 2013ರಲ್ಲಿಯೂ ಜೂನ್ 16ಕ್ಕೆ ಮುಂಗಾರು ಇಡೀ ದೇಶದಾದ್ಯಂತ ವ್ಯಾಪಿಸಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.



