ಡಿವಿಜಿ ಸುದ್ದಿ, ದಾವಣಗೆರೆ: ನಾಳೆ ಅಮೃತನಗರದ ಎಫ್-17 11 ಕೆ.ವಿ ಮಾರ್ಗದ ಕಂಬಗಳ ಸ್ತಳಾಂತರ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ದೊಡ್ಡಬೂದಿಹಾಳ್, ಚಿಕ್ಕಬೂದಿಹಾಳ್, ದೇವರಹಟ್ಟಿ, ಬಿ. ಚಿತ್ತನಹಳ್ಳಿ, ಭೂಸವ್ವನಹಟ್ಟಿ, ಬಿ.ಕಲ್ಪನಹಳ್ಳಿ, ಅಮೃತನಗರ, ಗ್ರಾಮಗಳ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಜಿ.ಎಮ್.ನಾಯಕ ತಿಳಿಸಿದ್ದಾರೆ.



