ಡಿವಿಜಿ ಸುದ್ದಿ, ದಾವಣಗೆರೆ: ನಗರದ ಜಾಲಿ ನಗರದಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣ ದಾಖಲು ಹಿನ್ನೆಲೆ, ಇಡೀ ಜಾಲಿನಗರ ಸಂಪೂರ್ಣ ಸೀಲ್ ಡೌನ್ ಆಗಿದೆ. ಆದರೆ, ಇಲ್ಲಿನ ನಿವಾಸಿಗಳು ಅಗತ್ಯ ವಸ್ತುಗಳು ಸರಿಯಾಗಿ ಸಿಗುತ್ತಿಲ್ಲ. ಕೊರೊನಾ ವೈರಸ್ ನಿಂದ ಸಾಯುವುದು ಒಂದೆಡೆಯಾದರೆ, ಆಹಾರ ಇಲ್ಲದೆ ಇನ್ನೊಂದೆಡೆ ಸಾಯುಸುತ್ತಿದ್ದೇವೆ ಎಂದು ಹೊಂಡದ ಸರ್ಕಲ್ ಬಳಿ ಸೀಲ್ ಡೌನ್ ತೆರವುಗೊಳಿಸುಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಏ. 29 ವರೆಗೆ ಗ್ರೀನ್ ಝೋನ್ ನಲ್ಲಿದ್ದ ದಾವಣಗೆರೆಯಲ್ಲಿ ಒಂದೇ ದಿನ ಬಾಷಾನಗರ ಮತ್ತು ಜಾಲಿನಗರದಲ್ಲಿ ಕೊರೊನಾ ಕೇಸ್ ಪತ್ತೆಯಾಗುವ ಮೂಲಕ ದಾವಣಗೆರೆ ರೆಡ್ ಝೋನ್
ಹಂತಕ್ಕೆ ಬಂದು ನಿಂತಿದೆ. ಇವರೆಗೆ ದಾವಣಗೆರೆಯಲ್ಲಿ ಬರೊಬ್ಬರಿ 89 ಕೊರೊನಾ ಪ್ರಕರಣ ಪತ್ತೆಯಾಗಿವೆ. ಅದರಲ್ಲೂ ಜಾಲಿನಗರದಲ್ಲಿಯೇ 50ಕ್ಕೂ ಹೆಚ್ಚು ಕೊರೊನಾ ಪ್ರಕರಣ ಪತ್ತೆಯಾಗಿವೆ.
ಒಂದು ರೀತಿಯಲ್ಲಿ ಜಾಲಿನಗರ ದಾವಣಗೆರೆಯ ಕೊರೊನಾ ಹಾಟ್ ಸ್ಪಾಟ್ ಆಗಿದೆ. ಆದರೆ, ಇಲ್ಲಿನ ಜನರು ಸೀಲ್ ಡೌನ್ ನಿಂದ ತತ್ತರಿಸಿ ಹೋಗಿದ್ದು, ನಮಗೆ ಅಗತ್ಯ ವಸ್ತುಗಳು ಸಿಗ್ತಾ ಇಲ್ಲ. ನಮ್ಮ ಕಷ್ಟ ಕೇಳುವರು ಯಾರು ಇಲ್ಲ. ನಮಗೆ ತರಕಾರಿಯಲ್ಲಿ ಸ್ವಲ್ಪ ವಿಷಕೊಟ್ಟು ಸಾಯಿಸಿ. ಈ ರೀತಿ ಸೀಲ್ ಡೌನ್ ಮಾಡಿ ತಿನ್ನುವುದಕ್ಕೆ ಆಹಾರ ನೀಡದೆ ಸಾಯಿಸುತ್ತೀರಿ ಎಂದು ಮಹಿಳೆಯಾರು ಕಣ್ಣಿರು ಹಾಕಿದರು.

ಪ್ರತಿಭಟಗೆ ಇಳಿದ ನಿವಾಸಿಗಳನ್ನು ಸಮಾಧಾನ ಮಾಡಲು ಪೊಲೀಸರು ಒಂದು ತಾಸು ಹರಸಾಹಸಪಟ್ಟರು. ಇಲ್ಲಿನ ನಿವಾಸಿಗಳು ಸಮಾಧನಾ ಹೇಳಲು ಬಂದ ಪೊಲೀಸರ ವಿರುದ್ಧವೇ ವಾಗ್ವಾದಕ್ಕೆ ಇಳಿದಿದ್ದರು. ಯಾರು ಹೊರ ಬರದಂತೆ ಬ್ಯಾರಿಕೇಡ್ ಹಾಕಿದ್ದರೂ ಬ್ಯಾರಿಕೇಡ್ ಒಳಗಡೆ ಪ್ರತಿಭಟನೆ ನಡೆಸಿದರು.



