ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರ ಅಧ್ಯಕ್ಷತೆಯಲ್ಲಿ ಜಾಲಿನಗರ, ಬಾಷಾನಗರ, ಇಮಾಮ್ನಗರ, ಬೇತೂರು ರಸ್ತೆ, ಎಸ್ಪಿಎಸ್ ನಗರ, ಶಿವನಗರ ಮತ್ತು ಕೆಟಿಜೆ ನಗರದ ಏಳು ಕಂಟೈನ್ಮೆಂಟ್ ಝೋನ್ಗಳ ಇನ್ಸಿಡೆಂಟ್ ಕಮಾಂಡರ್ಗಳ ಸಭೆ ನಡೆಸಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಸಂಬಂಧಿಸಿದ ಕಂಟೈನ್ಮೆಂಟ್ ಝೋನ್ಗೆ ಆಯಾ ಇನ್ಸಿಡೆಂಟ್ ಕಮಾಂಡರ್ಗಳೇ ಸಂಪೂರ್ಣ ಜವಾಬ್ದಾರರು ಮತ್ತು ಅಧಿಕಾರ ಹೊಂದಿದ್ದಾರೆ. ಅಗತ್ಯ ವಸ್ತುಗಳು, ಸಕ್ರಿಯ ಸರ್ವೇಕ್ಷಣೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ನಿಯಮಾನುಸಾರ ಒದಗಿಸುವಂತೆ ಸೂಚನೆ ನೀಡಿದರು. ಹಾಗೂ ಕಂಟೈನ್ಮೆಂಟ್ ಝೋನ್ಗಳಲ್ಲಿನ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಿದರು.
ಇಂದಿನ ವಿಡಿಯೋ ಕಾನ್ಫರೆನ್ಸ್ನಲ್ಲಿ ಜಿಲ್ಲಾ ಚಿಗಟೇರಿ ಕೋವಿಡ್ ಆಸ್ಪತ್ರೆಯಲ್ಲಿ 20 ವರ್ಷದ ಯುವತಿ ಹೃದ್ರೋಗದಿಂದ ಮತ್ತು ಕೋವಿಡ್ ನಿಂದ ಬಳಲುತ್ತಿರುವ ಯುವತಿಗೆ ಚಿಗಟೇರಿ ಮತ್ತು ಇತರೆ ತಜ್ಞ ವೈದ್ಯರು ನೀಡುತ್ತಿರುವ ಚಿಕಿತ್ಸೆ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ನಮ್ಮ ಜಿಲ್ಲಾ ಆಸ್ಪತ್ರೆ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಈ ವೇಳೆ ಜಿ ಪಂ ಸಿಇಓ ಪದ್ಮಾ ಬಸವಂತಪ್ಪ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಏಳು ಕಂಟೈನ್ಮೆಂಟ್ ಝೋನ್ಗಳ ಇನ್ಸಿಡೆಂಟ್ ಕಮಾಂಡರ್ ಗಳು ಹಾಜರಿದ್ದರು.



